ಆನೆದಂತ ಮಾರಾಟಕ್ಕೆ ಯತ್ನಿಸಿದ ಡಿಎಂಕೆ ಮುಖಂಡನ ಬಂಧನ

ಅಕ್ರಮವಾಗಿ ಆನೆದಂತ ಮಾರಾಟ ಮಾಡಲು ಯತ್ನಿಸಿದ ಡಿಎಂಕೆ ಮುಖಂಡ ಖಾದರ್ ಬಾಷಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

Last Updated : Jun 28, 2018, 09:07 PM IST
ಆನೆದಂತ ಮಾರಾಟಕ್ಕೆ ಯತ್ನಿಸಿದ ಡಿಎಂಕೆ ಮುಖಂಡನ ಬಂಧನ title=

ಬೆಂಗಳೂರು: ಅಕ್ರಮವಾಗಿ ಆನೆದಂತ ಮಾರಾಟ ಮಾಡಲು ಯತ್ನಿಸಿದ ಡಿಎಂಕೆ ಮುಖಂಡ ಖಾದರ್ ಬಾಷಾ ಸೇರಿ 6 ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಗುರುವಾರ ಬಂಧಿಸಿದ್ದಾರೆ. 

ಬೆಂಗಳೂರಿನ ಕೆಂಪೇಗೌಡ ಲೇಔಟ್'ನ ಸರ್ವೀಸ್ ರಸ್ತೆಯಲ್ಲಿ ಆನೆದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ 
ನವೀನ್, ಪ್ರಕಾಶ್, ಖಾದರ್ ಬಾಷಾ, ಜಾವೇದ್, ಶಬ್ಬರೀನಾಥ್, ಸತೀಶ್ ಕುಮಾರ್ ಸೇರಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದು, 12 ಆನೆದಂತಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳಲ್ಲಿ ಆನೆಗಳನ್ನು ಕೊಂದು, ಅದರ ಭಾಗಗಳನ್ನು ಕರ್ನಾಟಕದಲ್ಲಿ ಅಕ್ರಮವಾಗಿ ಆರೋಪಿಗಳು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 ಅಡಿ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. 

Trending News