ಪ್ಲ್ಯಾಟಿನ ನೋಂದಣಿ ಮಾಡಿಕೊಡದೇ ಸೇವಾ ನ್ಯೂನತೆ ಎಸೆಗಿದ್ದಕ್ಕೆ 9 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕರ ಆಯೋಗ 

ಬಾಗಲಕೋಟೆಯ ನವನಗರ ವಾಸಿ ಮಹೇಶ ಹಾಗೂ ಸುವರ್ಣ ವೀರಾಪೂರ ದಂಪತಿಗಳು ಹುಬ್ಬಳ್ಳಿಯ ಶ್ರೀ ಸಮರ್ಥ ಅಸೋಸಿಯೇಟ್ಸ್‍ನ ಪಾಲುದಾರ ಪಾಂಡುರಂಗ ಜೋಶಿ ಅವರು ನಿರ್ಮಿಸುತ್ತಿರುವ ನೂತನ ಅಪಾರ್ಟಮೆಂಟನಲ್ಲಿ ಪ್ಲ್ಯಾಟ ನಂ.3 ಮತ್ತು 4 ಖರೀದಿಸುವ ಕುರಿತು ಮಾತುಕತೆ ನಡೆಸಿ ಪ್ಲ್ಯಾಟಗೆ ತಲಾ ರೂ.6,53,850/-ಗಳಿಗೆ ಒಪ್ಪಂದ ಪತ್ರ ಮಾಡಿಕೊಂಡಿದ್ದರು. 

Written by - Manjunath N | Last Updated : Sep 15, 2023, 08:32 PM IST
  • ಎದುರುದಾರರು ದೂರುದಾರರಿಗೆ ಈಗಾಗಲೇ ಕೊಟ್ಟಿರುವ ರೂ.2,00,000/- ಕಡಿತಗೊಳಿಸಿ ಬಾಕಿ ಮುಂಗಡ ಹಣ ರೂ.7,80,000/-ಗಳಿಗೆ ಶೇ.8 ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಆಯೋಗ ನಿರ್ದೇಶಿಸಿದೆ.
  • ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ತಲಾ ರೂ.50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ತಲಾ ರೂ.10,000/-ಗಳನ್ನು ನೀಡುವಂತೆ ಎದುರುದಾರರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ.
 ಪ್ಲ್ಯಾಟಿನ ನೋಂದಣಿ ಮಾಡಿಕೊಡದೇ ಸೇವಾ ನ್ಯೂನತೆ ಎಸೆಗಿದ್ದಕ್ಕೆ 9 ಲಕ್ಷ ರೂ. ದಂಡ ವಿಧಿಸಿದ ಗ್ರಾಹಕರ ಆಯೋಗ  title=

ಧಾರವಾಡ : ಬಾಗಲಕೋಟೆಯ ನವನಗರ ವಾಸಿ ಮಹೇಶ ಹಾಗೂ ಸುವರ್ಣ ವೀರಾಪೂರ ದಂಪತಿಗಳು ಹುಬ್ಬಳ್ಳಿಯ ಶ್ರೀ ಸಮರ್ಥ ಅಸೋಸಿಯೇಟ್ಸ್‍ನ ಪಾಲುದಾರ ಪಾಂಡುರಂಗ ಜೋಶಿ ಅವರು ನಿರ್ಮಿಸುತ್ತಿರುವ ನೂತನ ಅಪಾರ್ಟಮೆಂಟನಲ್ಲಿ ಪ್ಲ್ಯಾಟ ನಂ.3 ಮತ್ತು 4 ಖರೀದಿಸುವ ಕುರಿತು ಮಾತುಕತೆ ನಡೆಸಿ ಪ್ಲ್ಯಾಟಗೆ ತಲಾ ರೂ.6,53,850/-ಗಳಿಗೆ ಒಪ್ಪಂದ ಪತ್ರ ಮಾಡಿಕೊಂಡಿದ್ದರು. 

ಆ ಪೈಕಿ ದೂರುದಾರರು ಎದುರುದಾರರಿಗೆ ರೂ.9,80,000/- ಹಣ ಮುಂಗಡವಾಗಿ ಕೊಟ್ಟಿದ್ದರು. ಆದರೆ ಎದುರುದಾರರು ಒಪ್ಪಂದ ಪತ್ರದ ಪ್ರಕಾರ ಅಪಾರ್ಟಮೆಂಟ್ ಕಟ್ಟಿರಲಿಲ್ಲ.ಸದರಿ ಪ್ಲ್ಯಾಟಿನ ನೋಂದಣಿ ಮಾಡಿಕೊಡದೇ ತಮಗೆ ಮೋಸ ಮಾಡಿ ಸೇವಾನ್ಯೂನತೆ ಎಸಗಿದ್ದಾರೆ ಅಂತ ಹೇಳಿ ಅವರ ವಿರುದ್ಧ ಗ್ರಾಹಕ ಸಂರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರಿಬ್ಬರೂ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:06/07/2023 ರಂದು ದೂರುಗಳನ್ನು ಸಲ್ಲಿಸಿದ್ದರು.

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ : ಚಾಮರಾಜನಗರದಲ್ಲಿ ರೈತರ ಪ್ರತಿಭಟನೆ

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು ಖರೀದಿ ಒಪ್ಪಂದ ಪತ್ರದ ಪ್ರಕಾರ ನಿಗದಿತ ಅವಧಿಯಲ್ಲಿ ಎದುರುದಾರರು ಅಪಾರ್ಟಮೆಂಟ್ ಕಟ್ಟಿರಲಿಲ್ಲ. ದೂರುದಾರರಿಂದ ರೂ.9,80,000/- ಹಣ ಪಡೆದುಕೊಂಡು ಎದುರುದಾರರು ಫ್ಲ್ಯಾಟಿನ ಸ್ವಾಧೀನತೆ ಕೊಟ್ಟಿರಲಿಲ್ಲ. ಅಲ್ಲದೇ ಖರೀದಿ ಪತ್ರ ನೋಂದಣಿ ಮಾಡಿಕೊಡುವಲ್ಲಿ ಅವರು ವಿಫಲರಾಗಿದ್ದಾರೆ. ಎದುರುದಾರರ/ಸಮರ್ಥ ಅಸೋಸಿಯೇಟ್ಸ್ ರವರ ಇಂತಹ ವರ್ತನೆ ಗ್ರಾಹಕರ ರಕ್ಷಣಾಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.

 ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ : ಚಾಮರಾಜನಗರದಲ್ಲಿ ರೈತರ ಪ್ರತಿಭಟನೆ

ಎದುರುದಾರರು ದೂರುದಾರರಿಗೆ ಈಗಾಗಲೇ ಕೊಟ್ಟಿರುವ ರೂ.2,00,000/- ಕಡಿತಗೊಳಿಸಿ ಬಾಕಿ ಮುಂಗಡ ಹಣ ರೂ.7,80,000/-ಗಳಿಗೆ ಶೇ.8 ಬಡ್ಡಿ ಲೆಕ್ಕ ಹಾಕಿ ಕೊಡುವಂತೆ ಆಯೋಗ ನಿರ್ದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗಾಗಿ ತಲಾ ರೂ.50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ತಲಾ ರೂ.10,000/-ಗಳನ್ನು ನೀಡುವಂತೆ ಎದುರುದಾರರಿಗೆ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

 

 

Trending News