ಸ್ಪೀಕರ್ ಸ್ಥಾನಕ್ಕೇ ಗೌರವ ನೀಡದವರು ಜನಸಾಮಾನ್ಯರನ್ನು ಗೌರವಿಸುವರೇ?: ಕಾಂಗ್ರೆಸ್

10 BJP MLAs suspended: ದಲಿತರ ಮೇಲೆ ಬಿಜೆಪಿಗೆ ಇರುವ ಅಸಹನೆ ಇಂದು ಮತ್ತೊಮ್ಮೆ ಅನಾವರಣಗೊಂಡಿದೆ. ದಲಿತ ವ್ಯಕ್ತಿಯೊಬ್ಬರು ಸ್ಪೀಕರ್ ಸ್ಥಾನದಲ್ಲಿ ಕುಳಿತಿರುವಾಗ ಅದನ್ನು ಸಹಿಸದ ಬಿಜೆಪಿಗೆ ಸದಸ್ಯರು ಪೇಪರ್ ಹರಿದು ಅವರ ಮುಖಕ್ಕೆ ಎಸಿದಿದ್ದು ಅತ್ಯಂತ ಹೇಯ ಕೃತ್ಯವೆಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

Written by - Puttaraj K Alur | Last Updated : Jul 19, 2023, 10:23 PM IST
  • ಬಿಜೆಪಿಗೆ ದಲಿತರು ಉನ್ನತ ಸ್ಥಾನಕ್ಕೆರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲವೇ?
  • ಸ್ಪೀಕರ್ ಸ್ಥಾನಕ್ಕೇ ಗೌರವ ನೀಡದವರು ಜನಸಾಮಾನ್ಯರನ್ನು ಗೌರವಿಸುವರೇ?
  • ಸಭಾಧ್ಯಕ್ಷರ ಮುಖಕ್ಕೆ ಪೇಪರ್ ಎಸಿದಿದ್ದು ಕರ್ನಾಟಕ ಶಾಸಕಾಂಗದ ಪರಂಪರೆಗೆ ಕಪ್ಪು ಚುಕ್ಕೆ ಇಟ್ಟಂತೆ
ಸ್ಪೀಕರ್ ಸ್ಥಾನಕ್ಕೇ ಗೌರವ ನೀಡದವರು ಜನಸಾಮಾನ್ಯರನ್ನು ಗೌರವಿಸುವರೇ?: ಕಾಂಗ್ರೆಸ್ title=
ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ

ಬೆಂಗಳೂರು: ಸದನದಲ್ಲಿ ಅಗೌರವ ಹಾಗೂ ಅಶಿಸ್ತಿನ ವರ್ತನೆ ತೋರಿದ ಬಿಜೆಪಿಯ 10 ಮಂದಿ ಶಾಸಕರನ್ನು ವಿಧಾನಸಭಾ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಿ ಸ್ಪೀಕರ್ ಯು.ಟಿ.ಖಾದರ್ ಬುಧವಾರ ಆದೇಶ ಹೊರಡಿಸಿದ್ದಾರೆ. ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ವಿರುದ್ಧ ಕಿಡಿಕಾರಿದೆ.

#ದಲಿತವಿರೋಧಿಬಿಜೆಪಿ ಹ್ಯಾಶ್‍ಟ್ಯಾಗ್‍ ಬಳಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ದಲಿತ ಸಮುದಾಯದ ಉಪಾಸಭಾಪತಿಗಳಿಗೆ ಅವಮಾನಕರವಾಗಿ ನಡೆದುಕೊಂಡ ಬಿಜೆಪಿಗೆ ದಲಿತರು ಉನ್ನತ ಸ್ಥಾನಕ್ಕೆರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲವೇ? ಸ್ಪೀಕರ್ ಸ್ಥಾನಕ್ಕೇ ಗೌರವ ನೀಡದವರು ಜನಸಾಮಾನ್ಯರನ್ನು ಗೌರವಿಸುವರೇ? ಸಭಾಧ್ಯಕ್ಷರ ಮುಖಕ್ಕೆ ಪೇಪರ್ ಎಸಿದಿದ್ದು ಕರ್ನಾಟಕದ ಶಾಸಕಾಂಗದ ಪರಂಪರೆಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ’ ಎಂದು ಟೀಕಿಸಿದೆ.

ಇದನ್ನೂ ಓದಿ: ಗೃಹಲಕ್ಷ್ಮಿಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ : ಸ್ತೀ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ

‘ದಲಿತರ ಮೇಲೆ ಬಿಜೆಪಿಗೆ ಇರುವ ಅಸಹನೆ ಇಂದು ಮತ್ತೊಮ್ಮೆ ಅನಾವರಣಗೊಂಡಿದೆ. ದಲಿತ ವ್ಯಕ್ತಿಯೊಬ್ಬರು ಸ್ಪೀಕರ್ ಸ್ಥಾನದಲ್ಲಿ ಕುಳಿತಿರುವಾಗ ಅದನ್ನು ಸಹಿಸದ ಬಿಜೆಪಿಗೆ ಸದಸ್ಯರು ಪೇಪರ್ ಹರಿದು ಅವರ ಮುಖಕ್ಕೆ ಎಸಿದಿದ್ದು ಅತ್ಯಂತ ಹೇಯ ಕೃತ್ಯ. ಇದು ದಲಿತರ ಗೌರವಕ್ಕೆ ಹಾಗೂ ಸಭಾಧ್ಯಕ್ಷ ಸ್ಥಾನದ ಘನತೆಗೆ ಮಸಿ ಬಳಿದಿರುವ ಕೃತ್ಯ’ವೆಂದು ಕಾಂಗ್ರೆಸ್ ಕುಟುಕಿದೆ.

‘ಆಹಾ ಅದೇನು ನಗು, ಅದೇನು ಸಂತೋಷ, ಮಾರ್ಷಲ್‍ಗಳು ಎತ್ತಿ ಎಸೆಯುವುದನ್ನು ಆರ್.ಅಶೋಕ್ ಅವರು ಪಲ್ಲಕ್ಕಿ ಮೆರವಣಿಗೆ ಎಂದುಕೊಂಡಿರುವಂತಿದೆ! ಬಿಜೆಪಿಗರು ವಿಧಾನಸೌಧದಲ್ಲಿ ಮೋಜು ಮಾಡಲು ಬಂದಿರುವಂತಿದೆ. ಜನರ ಪರ ಚರ್ಚೆ ಮಾಡಲು ಇಷ್ಟವಿಲ್ಲದ ಬಿಜೆಪಿ ಸದನದ ಅತ್ಯಮೂಲ್ಯ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಇದು ಬಿಜೆಪಿಯ ನಾಚಿಕೆಗೇಡಿನ ವರ್ತನೆ’ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಇದನ್ನೂ ಓದಿ: ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತದ ಕವಚವಾಗಿ INDIA: ಬಿಜೆಪಿ ಆರೋಪ

‘ಬಿಜೆಪಿಗೆ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇರಲು ಅನರ್ಹ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದ ಬಿಜೆಪಿ ಸಾಂವಿಧಾನಿಕ ವ್ಯವಸ್ಥೆಯನ್ನು ಅಪಹಾಸ್ಯ ಮಾಡುತ್ತಿದೆ. ಈಗ ಸ್ಪೀಕರ್ ಮುಖದ ಮೇಲೆ ಪೇಪರ್ ಎಸೆದು ಸದನದ ಸಭಾಧ್ಯಕ್ಷರ ಘನತೆಗೆ ಚ್ಯುತಿ ತಂದಿದ್ದಾರೆ. ಸದನದೊಳಗೆ ಗೂಂಡಾಗಿರಿ ನಡೆಸುವ ಬಿಜೆಪಿ ರೌಡಿ ಮೋರ್ಚಾದ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News