ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸರ್ಕಾರ ರಣತಂತ್ರ..'ಗ್ಯಾರಂಟಿ' ಅಸ್ತ್ರ ಬಳಸಲು ಕೈಪಡೆಗೆ 'ಜೋಡೆತ್ತು' ಸೂತ್ರ!

Lok Sabha Election 2023 : ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವ ಸಾಧಿಸಿರುವ ಕಾಂಗ್ರೆಸ್,ಇದೇ ಹುಮ್ಮಸ್ಸನಲ್ಲಿ ಲೋಕಸಭೆ ಚುನಾವಣೆ ಎದುರಿಸಲು ತಯಾರಿ ನಡೆಸಿದೆ. ಲೋಕಸಭೆ ಚುನಾವಣೆಗೆ ರೆಡಿಯಾಗಿ ಎಂದು ಪಕ್ಷದ ನಾಯಕರು,ಕಾರ್ಯಕರ್ತರಿಗೆ ಸಿಎಂ,ಡಿಸಿಎಂ ಕರೆ ನೀಡಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆಗೆ ರಾಜ್ಯ ಕಾಂಗ್ರೆಸ್ ರಣಕಹಳೆ ಮೊಳಗಿಸಿದೆ.

Written by - Savita M B | Last Updated : Aug 14, 2023, 09:03 PM IST
  • ಲೋಕ ಅಖಾಡಕ್ಕೆ ಇಳಿಯುವಂತೆ ಸಿಎಂ,ಡಿಸಿಎಂ ಕರೆ
  • ಲೋಕಸಭಾ ಚುನಾವಣೆಗೆ ರಾಜ್ಯ ಕಾಂಗ್ರೆಸ್ ರಣಕಹಳೆ
  • ಬಿಜೆಪಿ,ಜೆಡಿಎಸ್ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗು
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸರ್ಕಾರ ರಣತಂತ್ರ..'ಗ್ಯಾರಂಟಿ' ಅಸ್ತ್ರ ಬಳಸಲು ಕೈಪಡೆಗೆ 'ಜೋಡೆತ್ತು' ಸೂತ್ರ!  title=

Lok Sabha Election : ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 135 ಸ್ಥಾನ ಗೆದ್ದಿ ಬೀಗಿರುವ ಕಾಂಗ್ರೆಸ್ ಗೆ,ಇದೀಗ ಮತ್ತೊಂದು ಸವಾಲು ಎದುರಾಗಿದೆ. ಇನ್ನು ಕೇವಲ 9 ತಿಂಗಳಲ್ಲಿ ಲೋಕಸಭೆ ಸಮರ ಎದುರಾಗಲಿದೆ.ಹೀಗಾಗಿ,ಕಾಂಗ್ರೆಸ್ ಪಕ್ಷ ಈಗಿನಿಂದಲೇ ಲೋಕಾ ಸಮರ ಎದುರಿಸಲು ಸಜ್ಜಾಗಿದೆ. 

ಇಂದು ಬೆಂಗಳೂರಿನ ಇಂದಿರಗಾಂಧಿ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಸರ್ವಸದಸ್ಯರ ಸಭೆ ನಡೆಸುವ ಮೂಲಕ,ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಿದೆ.ಲೋಕ ಅಖಾಡಕ್ಕೆ ಈಗಿನಿಂದಲೇ ಇಳಿಯುವಂತೆ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಲೋಕಸಭೆ ತಯಾರಿಗೆ ಕರೆದಿದ್ದ ಕಾಂಗ್ರೆಸ್ ಸರ್ವಸದಸ್ಯರ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ.ದೇಶದಲ್ಲಿ ಪ್ರಧಾನಿ ಮೋದಿ ಎಕ್ಸ್ ಪೋಸ್ ಆಗಿದ್ದಾರೆ. ನೂರಕ್ಕೆ ನೂರು ಬಿಜೆಪಿ ಸೋಲಲಿದೆ.

ಇದನ್ನೂ ಓದಿ-ಚಲುವರಾಯಸ್ವಾಮಿ ವಿರುದ್ಧ ಕುಮಾರಸ್ವಾಮಿ ಗರಂ

ಬಿಜೆಪಿ ಸೋಲುತ್ತೆ ಎಂದು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗಿದೆ.ಕಳೆದ ಚುನಾವಣೆಯಲ್ಲಿ ಜೆಡಿಎಸ್ ಒಂದು ಸ್ಥಾನ ಗೆದ್ದಿತ್ತು.ಈ ಬಾರಿ ಒಂದು ಸ್ಥಾನ ಕೂಡ ಗೆಲ್ಲಲ್ಲ ಎಂದು ವಾಕ್ ಪ್ರಹಾರ ನಡೆಸಿದ್ರು. ಅಲ್ದೇ ಕಾರ್ಯಕರ್ತರು ಮೈ ಮರೆಯಬಾರದು, ರಾಜ್ಯದಲ್ಲಿ ನಾವು 20 ಸ್ಥಾನ ಗೆಲ್ಲಬೇಕೆಂದು ಎಂದು ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ರು.

ಇನ್ನು ವಿಧಾನಸಭೆ ಚುನಾವಣೆಯಲ್ಲಿ ಕಾರ್ಯಕರ್ತರು ಹಾಗೂ ನಾಯಕರ ಶ್ರಮ ನಾವು ಮರೆಯಲ್ಲ.ಎಲ್ಲರಿಗೂ ಅಧಿಕಾರ ಸಿಗುತ್ತೆ.ಲೋಕಸಭೆ ಚುನಾವಣೆ ಕೂಡ ಬೂತ್ ಮಟ್ಟದಲ್ಲಿ ಬಲವರ್ಧನೆ ಮಾಡಬೇಕಾಗಿದೆ ಎಂದು ಕೆಪಿಸಿಸಿ ಡಿ.ಕೆ.ಶಿವಕುಮಾರ್ ಹೇಳಿದ್ರು.

ಇನ್ನುಸಭೆಯಲ್ಲಿ ಎರಡೂವರೆ ವರ್ಷ ಆದ ಬಳಿಕ ಎಲ್ಲ ಹಿರಿಯರು ಸಚಿವ ಸ್ಥಾನವನ್ನ ಕಿರಿಯರಿಗೆ ಬಿಟ್ಟುಕೊಡಬೇಕೆಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಶಾಕಿಂಗ್ ಹೇಳಿಕೆ ನೀಡಿದ್ರು. ಒಟ್ಟಾರೆ,ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿರುವ ಕಾಂಗ್ರೆಸ್ ಪಡೆ,ಇದೇ ಹುಮ್ಮಸುನಲ್ಲಿ ಲೋಕ ಸಮರ ಎದುರಿಸಲು ಭರ್ಜರಿ ಸಿದ್ಧತೆ ಪ್ರಾರಂಭಿಸಿದೆ.

ಇದನ್ನೂ ಓದಿ-ನೀರಮಾನ್ವಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ.. ಹೆಚ್ಚಿದ ಆತಂಕ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News