ಅಕ್ಟೋಬರ್ 3ರಿಂದ ಬಸ್ ಸಂಚಾರಕ್ಕೆ ಮುಕ್ತವಾಗಲಿದೆ ಶಿರಾಡಿ ಘಾಟ್

ತಜ್ಞರ ವರದಿ ಆಧರಿಸಿ ಸರಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. 

Last Updated : Oct 1, 2018, 04:06 PM IST
ಅಕ್ಟೋಬರ್ 3ರಿಂದ ಬಸ್ ಸಂಚಾರಕ್ಕೆ ಮುಕ್ತವಾಗಲಿದೆ ಶಿರಾಡಿ ಘಾಟ್ title=
Pic: Youtube

ಮಂಗಳೂರು: ಅಕ್ಟೋಬರ್ 3ರಿಂದ  ಶಿರಾಡಿ ಘಾಟ್ ಬಸ್ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. 

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ತಜ್ಞರ ವರದಿ ಆಧರಿಸಿ ಸರಕಾರಿ ಹಾಗೂ ಖಾಸಗಿ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಶಿರಾಡಿ ಘಾಟ್‌ನಲ್ಲಿ ಒಟ್ಟು 12 ಕಡೆ ಕುಸಿತ ಉಂಟಾಗಿತ್ತು, ಈ ಪೈಕಿ 8 ಕಡೆಗಳಲ್ಲಿ ಸದ್ಯಕ್ಕೆ ಅಪಾಯವಿಲ್ಲ. 4 ಕಡೆಗಳಲ್ಲಿ ಅಪಾಯವಿದ್ದು, ಅಂತಹ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.

Trending News