ಹುಬ್ಬಳ್ಳಿ-ಧಾರವಾಡದಲ್ಲಿ ಯಡಿಯೂರಪ್ಪನವರು ನನ್ನ ಮಾರ್ಜಿನ್ ಹೆಚ್ಚಿಸಿದ್ದಾರೆ: ಪ್ರಹ್ಲಾದ ಜೋಶಿ

Prahlad Joshi: ಯಡಿಯೂರಪ್ಪ ಅವರು ಹುಟ್ಟು ಹೋರಾಟಗಾರರು. ಕರ್ನಾಟಕದ ಜನತೆಗೂ ಅವರೆಂದರೆ ಒಂದು ರೀತಿ ಶಕ್ತಿ, ಸ್ಫೂರ್ತಿ ಎಂದ ಸಚಿವರು, ತಮ್ಮ ಕ್ಷೇತ್ರದಲ್ಲಿ ಚುನಾವಣೆ ವೇಳೆ ಪ್ರತಿ ಬಾರಿಯೂ ಬಂದು ಸಭೆ, ಸಮಾವೇಶ ಮಾಡಿ ನನಗೆ ಅಭೂತಪೂರ್ವ ಗೆಲುವು ದಕ್ಕಿಸಿಕೊಟ್ಟಿದ್ದಾರೆ ಎಂದು ಹೇಳಿದರು.

Written by - Prashobh Devanahalli | Edited by - Manjunath N | Last Updated : Mar 10, 2024, 01:50 AM IST
  • ಇಂದು ಸಂಸದ ಆಗುವುದು ಸಾಮಾನ್ಯವಲ್ಲ. ಆದರೆ, ರಾಘವೇಂದ್ರ ಅವರು ಒಬ್ಬ ಒಳ್ಳೇ ಕ್ರಿಯಾಶೀಲ ಸಂಸದರಾಗಿದ್ದಾರೆ.
  • ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಕೇಂದ್ರದಿಂದ ಪಟ್ಟು ಹಿಡಿದು ಮಾಡಿಸಿಕೊಂಡು ಬರುವಂಥ ಸಮರ್ಥ ನಾಯಕ.
  • ಕೇಂದ್ರ ರೈಲ್ವೆ ಮಂತ್ರಿ ಅವರನ್ನ ಅಂತೂ ಬೆಂಬಿಡದೆ ಭೇಟಿ ಮಾಡಿ ಕೆಲಸ ಮಾಡಿಸಿಕೊಂಡವರು ಎಂದು ರಾಘವೇಂದ್ರ ಅವರ ಕಾರ್ಯ ವೈಖರಿಯನ್ನು ಬಣ್ಣಿಸಿದರು.
ಹುಬ್ಬಳ್ಳಿ-ಧಾರವಾಡದಲ್ಲಿ ಯಡಿಯೂರಪ್ಪನವರು ನನ್ನ ಮಾರ್ಜಿನ್ ಹೆಚ್ಚಿಸಿದ್ದಾರೆ: ಪ್ರಹ್ಲಾದ ಜೋಶಿ title=

ಶಿವಮೊಗ್ಗ: ಮಾಜಿ ಸಿಎಂ ಯಡಿಯೂರಪ್ಪ ಅವರು ಹುಬ್ಬಳ್ಳಿ-ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನನಗೆ ಅತಿ ಹೆಚ್ಚು ಮಾರ್ಜಿನ್ ಕೊಡಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಮರಿಸಿದರು.

ಶಿವಮೊಗ್ಗದಲ್ಲಿ ಇಂದು ರಾತ್ರಿ ನಡೆದ ಮಾಜಿ ಸಿಎಂ ಬಿಎಸ್ ವೈ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಯಡಿಯೂರಪ್ಪ ಅವರು ಹುಟ್ಟು ಹೋರಾಟಗಾರರು. ಕರ್ನಾಟಕದ ಜನತೆಗೂ ಅವರೆಂದರೆ ಒಂದು ರೀತಿ ಶಕ್ತಿ, ಸ್ಫೂರ್ತಿ ಎಂದ ಸಚಿವರು, ತಮ್ಮ ಕ್ಷೇತ್ರದಲ್ಲಿ ಚುನಾವಣೆ ವೇಳೆ ಪ್ರತಿ ಬಾರಿಯೂ ಬಂದು ಸಭೆ, ಸಮಾವೇಶ ಮಾಡಿ ನನಗೆ ಅಭೂತಪೂರ್ವ ಗೆಲುವು ದಕ್ಕಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Chikkamagalur: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮುಗಿಯದ ರಾಜಕೀಯ ಶೀತಲ ಸಮರ 

ಪ್ರಹ್ಲಾದ ಜೋಶಿಗೆ ಮತ ನೀಡಿದರೆ ಈ ಯಡಿಯೂರಪ್ಪಗೆ ವೋಟ್ ಕೊಟ್ಟು ಗೆಲ್ಲಿಸಿದಂತೆ ಎಂದು ಹೇಳಿ ಅತಿ ಹೆಚ್ಚು ಲೀಡ್ ತಂದುಕೊಟ್ಟು ನನ್ನನ್ನು ಗೆಲ್ಲಿಸಿದ ಕೀರ್ತಿ ಬಿಎಸ್ ವೈ ಅವರಿಗೆ ಸಲ್ಲುತ್ತದೆ. ನನ್ನನ್ನು ಆಶೀರ್ವದಿಸಿ ಕ್ಯಾಬಿನೆಟ್ ಮಂತ್ರಿಯನ್ನಾಗಿಯೂ ಮಾಡಿದರು ಎಂದು ಅಭಿಮಾನ ವ್ಯಕ್ತಪಡಿಸುತ್ತ, ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

ರಾಘವೇಂದ್ರ ಟಾಪ್ ಟೆನ್ ಅಲ್ಲಿ ಒಬ್ಬ ಕ್ರಿಯಾಶೀಲ ಸಂಸದ: ದೇಶದಲ್ಲಿ ಅತ್ಯಂತ ಕ್ರಿಯಾಶೀಲ ಹತ್ತು ಸಂಸದರನ್ನು ಆಯ್ಕೆ ಮಾಡಿದರೆ ಅದರಲ್ಲಿ ಬಿ. ವೈ.ರಾಘವೇಂದ್ರ ಕೂಡ ಒಬ್ಬರಿರುತ್ತಾರೆ. ಅಷ್ಟರ ಮಟ್ಟಿಗೆ ಉತ್ತಮ ಕ್ರಿಯಾಶೀಲ ಸಂಸದ ಎಂದು ಬಣ್ಣಿಸಿದರು ಸಚಿವ ಪ್ರಹ್ಲಾದ ಜೋಶಿ.

ಇದನ್ನೂ ಓದಿ: ​ರಾಜ್ಯ ಸರ್ಕಾರ ಶೇ.50 ರಷ್ಟು ಸಬ್ಸಿಡಿ ನೀಡುತ್ತಿದೆ. ಆದರೂ ಹೆಸರು ಮಾತ್ರ ಮೋದಿಯವರ ಸಬ್ಸಿಡಿ ಎನ್ನುತ್ತಾರೆ"

ಇಂದು ಸಂಸದ ಆಗುವುದು ಸಾಮಾನ್ಯವಲ್ಲ. ಆದರೆ, ರಾಘವೇಂದ್ರ ಅವರು ಒಬ್ಬ ಒಳ್ಳೇ ಕ್ರಿಯಾಶೀಲ ಸಂಸದರಾಗಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಕೇಂದ್ರದಿಂದ ಪಟ್ಟು ಹಿಡಿದು ಮಾಡಿಸಿಕೊಂಡು ಬರುವಂಥ ಸಮರ್ಥ ನಾಯಕ. ಕೇಂದ್ರ ರೈಲ್ವೆ ಮಂತ್ರಿ ಅವರನ್ನ ಅಂತೂ ಬೆಂಬಿಡದೆ ಭೇಟಿ ಮಾಡಿ ಕೆಲಸ ಮಾಡಿಸಿಕೊಂಡವರು ಎಂದು ರಾಘವೇಂದ್ರ ಅವರ ಕಾರ್ಯ ವೈಖರಿಯನ್ನು ಬಣ್ಣಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News