ಇಂದಿನಿಂದ 2 ದಿನ ರಾಜ್ಯ ರಾಜಧಾನಿಯಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ

'ಕರುನಾಡ ಜಾಗೃತಿ ಯಾತ್ರೆ' ಅಂಗವಾಗಿ ಏ. 18, ಏ. 19 ರಂದು ಸಿಲಿಕಾನ್ ಸಿಟಿಯಲ್ಲಿ ಶಾ ಪ್ರವಾಸ ಕೈಗೊಳ್ಳಲಿದ್ದಾರೆ.

Last Updated : Apr 18, 2018, 09:17 AM IST
ಇಂದಿನಿಂದ 2 ದಿನ ರಾಜ್ಯ ರಾಜಧಾನಿಯಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ  title=

ಬೆಂಗಳೂರು: 'ಕರುನಾಡ ಜಾಗೃತಿ ಯಾತ್ರೆ' ಅಂಗವಾಗಿ ಏ. 18, ಏ. 19 ರಂದು ಬಿಜೆಪಿ ಚಾಣಕ್ಯ ಅಮಿತ್ ಶಾ ಬೆಂಗಳೂರು ಪ್ರವಾಸ ಕೈಗೊಳ್ಳಲಿದ್ದಾರೆ.

ಕಳೆದ ರಾತ್ರಿ HAL ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾ, ಫೈರ್ ಫೀಲ್ಡ್ ಲೇಔಟ್ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲವ ಹಠಕ್ಕೆ ಬಿದ್ದಿರುವ ಅಮಿಶ್ ಶಾ ಇನ್ನು ವಿಧಾನಸಭಾ ಚುನಾವಣೆ ಮುಗಿಯುವವರೆಗೂ ರಾಜ್ಯದಲ್ಲಿ ಹೆಚ್ಚು ಪ್ರವಾಸ ಕೈಗೊಳ್ಳಲಿದ್ದು, ಚುನಾವಣೆಯ ತಂತ್ರ, ಪ್ರತಿತಂತ್ರ ಎಣೆಯಲಿದ್ದಾರೆ.

ಏಪ್ರಿಲ್ 18 ರಂದು ಶಾ ಕಾರ್ಯಕಲಾಪ
* ಬೆಳಿಗ್ಗೆ 9:30 ಕ್ಕೆ ಬಸವೇಶ್ವರ ಪ್ರತಿಮೆ ಮಾಲಾರ್ಪಣೆ

* ಬೆಳಿಗ್ಗೆ 10:30 ಕ್ಕೆ ದಲಿತ ಸಾಹಿತಿ ಸಿದ್ದಲಿಂಗಯ್ಯ ಮತ್ತು ಚಿದಾನಂದ ಮೂರ್ತಿ ನಿವಾಸಕ್ಕೆ ಭೇಟಿ

* ಮಧ್ಯಾಹ್ನ 12:00 ಕ್ಕೆ ಶಕ್ತಿ ಕೇಂದ್ರ ಪ್ರಮುಖರ ಸಭೆ - ಗಾಯತ್ರಿ ವಿಹಾರ (ಪ್ಯಾಲೇಸ್) 

* ಮಧ್ಯಾಹ್ನ 1:30 ಕ್ಕೆ ಹೊಟೆಲ್ ಕ್ರಸೆಂಟ್'ಲ್ಲಿ ಊಟ 

* ಮಧ್ಯಾಹ್ನ 2:00 ಕ್ಕೆ ಸ್ಥಳೀಯ ಉಸ್ತುವಾರಿಗಳ ಜೊತೆ ಸಭೆ

* ಸಂಜೆ 5:00 ಕ್ಕೆ ಹೊಸಕೋಟೆ ರೋಡ್ ಶೊ

* ರಾತ್ರಿ 8:00 ಕ್ಕೆ ಕ್ರಸೆಂಟ್ ಹೊಟೆಲ್'ಲಿ ಡಿನ್ನರ್

ಏಪ್ರಿಲ್ 19ರ ಶಾ ವೇಳಾಪಟ್ಟಿ
* ಬೆಳಿಗ್ಗೆ 9:40 ಕ್ಕೆ ಬಿಜೆಪಿ ಕಚೇರಿಗೆ ಆಗಮನ ಜಗನ್ನಾಥ ಭವನದಲ್ಲಿ ಚುನಾವಣಾ ಉಸ್ತುವಾರಿಗಳು, ಸೋಷಿಯಲ್ ಮೀಡಿಯಾ, ವಕ್ತಾರರು, ಪ್ರಚಾರ ಸಮಿತಿ ಸಭೆ 

* ಮಧ್ಯಾಹ್ನ 12:30 ಕ್ಕೆ ರಾಜಕೀಯ ಉಸ್ತುವಾರಿಗಳ ಸಭೆ

* ಮಧ್ಯಾಹ್ನ 1:30 ಕ್ಕೆ ಪಕ್ಷದ ಕಚೇರಿಯಲ್ಲಿ ಊಟ

* ಮಧ್ಯಾಹ್ನ 3:00 ಕ್ಕೆ ಅನಂತ ವಿದ್ಯಾನಿಕೇತನ ಶಾಲೆಗೆ ಭೇಟಿ ( ದೇವನಹಳ್ಳಿ)

* ಸಂಜೆ 4:15 ಶಕ್ತಿ ಕೇಂದ್ರ ಪ್ರಮುಖರ ಸಭೆ

* ಸಂಜೆ 6:00 ಕ್ಕೆಸಮಾಜ ಚಿಂತನಾ ಸಭೆ 

* ಸಂಜೆ 7:00 ಕ್ಕೆ ಟ್ರೇಡ್ ಅಂಡ್ ಇಂಡಸ್ಟ್ರಿ ಲೀಡರ್ಸ್ ಜೊತೆ ಸಂವಾದ ( ಜ್ಞಾನ ಜ್ಯೋತಿ)

* ರಾತ್ರಿ 8:30 ಕ್ಕೆ ಹೆಚ್ ಎ ಎಲ್ ಮೂಲಕ ದೆಹಲಿಗೆ ವಾಪಸ್.

Trending News