ಮಾಜಿ ಸೈನಿಕನಿಗೆ ಸೊಸೆಯಿಂದಲೇ ಬೆದರಿಕೆ : ಮಾವನ ಆಸ್ತಿ ಲಪಟಾಯಿಸಲು ಸಂಚು

ಸೈಲಂಟಾಗಿದ್ದ ಸೊಸೆ ತನ್ನ ಕರಾಮತ್ತನ್ನ ತೋರಿಸುತ್ತಾಳೆ. ತನ್ನ ಅತ್ತೆಯ ಹೆಸರಲ್ಲಿದ್ದ ಮನೆಯನ್ನ ನಕಲಿ ಜಿಪಿಎ ಮಾಡಿ ನಂತರ ತನ್ನ ಮಗನ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುತ್ತಾಳೆ. ಈ ವಿಷಯ ತಿಳಿದ ಅಪ್ಪಾಜಿ ಸೊಸೆಯ ನಕಲಿ ದಾಖಲೆಯ ವಿರುದ್ಧ ಕೋರ್ಟ್ ಮೊರೆ ಹೋಗುತ್ತಾರೆ. ಇಲ್ಲಿಗೆ ಸೊಸೆ ವರ್ಸಸ್ ಮಾವನ ನಡುವೆ ಗುದ್ದಾಟ ಸ್ಟಾರ್ಟ್ ಆಗುತ್ತೆ. 

Written by - VISHWANATH HARIHARA | Edited by - Krishna N K | Last Updated : Oct 2, 2023, 06:13 PM IST
  • ಮಾಜಿ ಯೋಧ ಅಪ್ಪಾಜಿ ಎಂಬುವವರಿಗೆ ಸೊಸೆಯೇ ಬೆದರಿಕೆ ಹಾಕಿರುವ ಪ್ರಸಂಗ ಬೆಳಕಿಗೆ ಬಂದಿದೆ.
  • ಮನೆಗೆ ನುಗ್ಗಿದ 15 ಜನರ ಗುಂಪೊಂದು ಅಪ್ಪಾಜಿ ಅವರಿಗೆ ಅವಾಜ್ ಹಾಕಲು‌ ಪ್ರಾರಂಭಿಸುತ್ತೆ.
  • ಮನೆ ಖಾಲಿ ಮಾಡು ಇಲ್ಲ ಅಂದರೆ ಸತ್ತೊಗುತ್ತಿಯಾ ಎಂದು ಬೆದರಿಕೆ ಒಡ್ಡಲಾಗಿತ್ತು.
ಮಾಜಿ ಸೈನಿಕನಿಗೆ ಸೊಸೆಯಿಂದಲೇ ಬೆದರಿಕೆ : ಮಾವನ ಆಸ್ತಿ ಲಪಟಾಯಿಸಲು ಸಂಚು title=

ಬೆಂಗಳೂರು : ನಮ್ಮ ದೇಶಕ್ಕಾಗಿ ನಮಗಾಗಿ 15 ವರ್ಷ ಗಡಿಯಲ್ಲಿ ನಿಂತು ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಿದ್ದ ವೀರ ಯೋಧ ಅಪ್ಪಾಜಿ ಎಂಬುವವರಿಗೆ ಸೊಸೆಯೇ ಬೆದರಿಕೆ ಹಾಕಿರುವ ಪ್ರಸಂಗ ಬೆಳಕಿಗೆ ಬಂದಿದೆ. ಕಳೆದ ಶುಕ್ರವಾರ ಅಪ್ಪಾಜಿ ತನ್ನ ಮನೆಗೆ ಬಣ್ಣ ಬಳಿಸಲು ಪೀಠೋಪಕರಣಗಳನ್ನು ಹೊರಗಿಟ್ಟು ಕೆಲಸ ಮಾಡಿಸುತ್ತಿದ್ದರು.

ಈ ವೇಳೆ ಅಪ್ಪಾಜಿಯವರ ಸೊಸೆ ಮಿಥುನಾ ಜೊತೆ ಏಕಾಏಕಿ ಮನೆಗೆ ನುಗ್ಗಿದ 15 ಜನರ ಗುಂಪೊಂದು ಅಪ್ಪಾಜಿ ಅವರಿಗೆ ಅವಾಜ್ ಹಾಕಲು‌ ಪ್ರಾರಂಭಿಸುತ್ತೆ. ಈ ಗುಂಪಿನಲ್ಲಿ ಬಂದಿದ್ದ ದಾಸ ವೆಂಕಟೇಶ್ ಎನ್ನುವನು ಏರು‌ದ್ವನಿಯಲ್ಲಿ ಮರ್ಯಾದೆಯಿಂದ ಮನೆ ಖಾಲಿ ಮಾಡು ಇಲ್ಲ ಅಂದರೆ ಸತ್ತೊಗುತ್ತಿಯಾ ಎಂದು ಬೆದರಿಕೆ ಒಡ್ಡಿದ್ದ. 

ಇದನ್ನೂ ಓದಿ : ಕಾವೇರಿ ವಿಚಾರದಲ್ಲಿ ಡಿಕೆ ಶಿವಕುಮಾರ್ ಜನರ ದಾರಿ ತಪ್ಪಿಸುತ್ತಿದ್ದಾರೆ : ಬಸವರಾಜ ಬೊಮ್ಮಾಯಿ ಆರೋಪ

ಅಸಲಿಗೆ ಅಪ್ಪಾಜಿ ಗೌಡರ ಸ್ಟೋರಿಯೇ ಒಂದು ದುರಂತ. ಅಪ್ಪಾಜಿ ಗೌಡರು ಸೇನೆಯಿಂದ ನಿವೃತ್ತಿಯಾದ ಮೇಲೆ ಚಂದ್ರ ಲೇಔಟ್ ನ ಬಾಪೂಜಿ ನಗರದಲ್ಲಿ ನಿವೇಶನ ಕರಿದಿಸಿ ಮನೆ ಕಟ್ಟಿ ತನ್ನ ಹೆಂಡತಿ ಪೊನ್ನಮ್ಮ, ಮಗ ಕಿರಣ್ ಜೊತೆಗೆ ವಾಸವಿರುತ್ತಾರೆ. ನಂತರ ಮಿಥುನಾಳನ್ನು ತನ್ನ ಮಗನಿಗೆ ಮದುವೆ ಮಾಡಿಕೊಳ್ಳುತ್ತಾರೆ. ಒಬ್ಬ ಮೊಮ್ಮಗನು‌ ಹುಟ್ಟುತ್ತಾನೆ.ಆದರೆ ದುರಾದೃಷ್ಟವಶಾತ್ ಮಗ ಅಪಘಾತದಲ್ಲಿ ಗಾಯವಾಗಿ ಕಿಡ್ನಿ ಸಮಸ್ಯೆಯಿಂದ ಮೃತಪಟ್ಟಿದ್ದರು. ತದ ನಂತರ ಅಪ್ಪಾಜಿ ಗೌಡರ ಪತ್ನಿ ಪೊನ್ನಮ್ಮ ಕೂಡ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಇದಾದ ಕೆಲ ದಿನಗಳಲ್ಲಿ ಸೈಲಂಟಾಗಿದ್ದ ಸೊಸೆ ತನ್ನ ಕರಾಮತ್ತನ್ನ ತೋರಿಸುತ್ತಾಳೆ. ತನ್ನ ಅತ್ತೆಯ ಹೆಸರಲ್ಲಿದ್ದ ಮನೆಯನ್ನ ನಕಲಿ ಜಿಪಿಎ ಮಾಡಿ ನಂತರ ತನ್ನ ಮಗನ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುತ್ತಾಳೆ. ಈ ವಿಷಯ ತಿಳಿದ ಅಪ್ಪಾಜಿ ಸೊಸೆಯ ನಕಲಿ ದಾಖಲೆಯ ವಿರುದ್ಧ ಕೋರ್ಟ್ ಮೊರೆ ಹೋಗುತ್ತಾರೆ. ಇಲ್ಲಿಗೆ ಸೊಸೆ ವರ್ಸಸ್ ಮಾವನ ನಡುವೆ ಗುದ್ದಾಟ ಸ್ಟಾರ್ಟ್ ಆಗುತ್ತೆ. 

ಇದನ್ನೂ ಓದಿ : ಕಾವೇರಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಬಿಟ್ಟು, ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ತರಲಿ : ಡಿಸಿಎಂ

ಇದೇ ನೋಡಿ ಅಪ್ಪಾಜಿ ಮೇಲೆ ಬೆದರಿಕೆಗೆ ಕಾರಣ. ಘಟನೆ ಸಂಬಂಧ ಪೊಲೀಸರ ಮೊರೆ ಹೋಗಿರುವ ಅಪ್ಪಾಜಿ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಜರಣ ದಾಖಲಾಗಿದೆ. ಸೊಸೆ v/s ಮಾವ ಹಾಗೂ ಮೂರನೇ ವ್ಯಕ್ತಿಯ ಬೆದರಿಕೆ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಇದರ ಇನ್ನಷ್ಟು ಅಸಲಿ ಸತ್ಯ ಹೊರ ಬರಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News