ಸಿದ್ದರಾಮಯ್ಯ ಜೆಡಿಎಸ್‌ನಿಂದ ಬಂದು ಮುಖ್ಯಮಂತ್ರಿಯಾದ್ರು : ಬಸವರಾಜ ರಾಯರೆಡ್ಡಿ

ರಾಜಕೀಯದಲ್ಲಿ ಸಿನಿಯರ್ ಜೂನಿಯರ್ ಪ್ರಶ್ನೆ ಬರಲ್ಲ. ಅಡ್ವಾಣಿ ಪಕ್ಷ ಕಟ್ಟಿದರು, ಮೋದಿ ಪ್ರಧಾನಿ ಆದ್ರು. ಬೊಮ್ಮಾಯಿ ಅವರು ಸಿಎಂ ಆದ್ರು, ದೇವೆಗೌಡರ ಕ್ಯಾಬಿನೇಟ್ ನಲ್ಲಿ ಸಚಿವನಾಗಿದ್ದೆ, ಅವರ ಮಗ ನಮಗಿಂತ ಮೊದಲು ಸಿಎಂ ಆದ್ರು. ಸಿದ್ದರಾಮಯ್ಯ ಜೆಡಿಎಸ್ ನಿಂದ ಬಂದು ಸಿಎಂ ಆದ್ರು ಅಂತಾ ಹೇಳಿದೆ ಎಂದು ತಮ್ಮ ಹೇಳಿಕೆಗೆ ಬಸವರಾಜ ರಾಯರೆಡ್ಡಿ ಸ್ಪಷ್ಟನೆ ನೀಡಿದರು.

Written by - Krishna N K | Last Updated : Aug 3, 2023, 04:13 PM IST
  • ರಾಜಕೀಯದಲ್ಲಿ ಸಿನಿಯರ್ ಜೂನಿಯರ್ ಪ್ರಶ್ನೆ ಬರಲ್ಲ.
  • ಅಡ್ವಾಣಿ ಪಕ್ಷ ಕಟ್ಟಿದರು, ಮೋದಿ ಪ್ರಧಾನಿ ಆದ್ರು.
  • ಸಿದ್ದರಾಮಯ್ಯ ಜೆಡಿಎಸ್ ನಿಂದ ಬಂದು ಸಿಎಂ ಆದ್ರು.
ಸಿದ್ದರಾಮಯ್ಯ ಜೆಡಿಎಸ್‌ನಿಂದ ಬಂದು ಮುಖ್ಯಮಂತ್ರಿಯಾದ್ರು : ಬಸವರಾಜ ರಾಯರೆಡ್ಡಿ title=

ಕಲಬುರಗಿ : ಅಡ್ವಾಣಿ ಅವರು ಕಟ್ಟಿದ ಪಕ್ಷಕ್ಕೆ ಮೋದಿ ಪ್ರಧಾನ ಮಂತ್ರಿಯಾದರು, ಬೊಮ್ಮಾಯಿ ಅವರು ಸಿಎಂ ಆದ್ರು, ನಾವು ಅವರ ತಂದೆಯ ಕ್ಯಾಬಿನೇಟ್‌ನಲ್ಲಿ ಸಚಿವರಾಗಿದ್ದೆವು. ದೇವೆಗೌಡರ ಕ್ಯಾಬಿನೇಟ್ ನಲ್ಲಿ ಸಚಿವನಾಗಿದ್ದೆ, ಅವರ ಮಗ ನಮಗಿಂತ ಮೊದಲು ಸಿಎಂ ಆದರು. ಹಾಗೆ ಸಿದ್ದರಾಮಯ್ಯ ಜೆಡಿಎಸ್ ನಿಂದ ಬಂದು ಸಿದ್ದರಾಮಯ್ಯ ಸಿಎಂ ಆದ್ರು ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.

ಜೆಡಿಎಸ್‌ನಿಂದ ಬಂದು ಸಿದ್ದರಾಮಯ್ಯ ಸಿಎಂ ಆದರು ಎನ್ನುವ ತಮ್ಮ ಹೇಳಿಕೆಗೆ ಕಲಬುರಗಿಯಲ್ಲಿ ಸ್ಪಷ್ಟನೆ ನೀಡಿದ ಅವರು, ಸರ್ಕಾರದಲ್ಲಿ ಸಚಿವರು ಶಾಸಕರ ನಡುವೆ ಸಮನ್ವಯ ಸಮಿತಿ ಇರಬೇಕು. ಮುಖ್ಯಮಂತ್ರಿಗಳು ನಮ್ಮ ಶಾಸಕಾಂಗ ಪಕ್ಷದ ನಾಯಕರು ಆಗಿದ್ದಾರೆ. ಸಮನ್ವಯ ಸಮಿತಿ ಮಾಡೋದ್ರಿಂದ ಪ್ರಯೋಜನ ಇಲ್ಲ. ಸಿಎಂ ಪ್ರತಿ ಎರಡು ತಿಂಗಳಿಗೊಮ್ಮೆ ಜಿಲ್ಲಾವಾರು ಸಭೆ ನಡೆಸಬೇಕು. ಶಾಸಕರ ವಿಧಾನಸಭಾ ಕ್ಷೇತ್ರ, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋದಕ್ಕೆ ಅನುಕೂಲ ಆಗುತ್ತೆ ಎಂದು ಹೇಳಿದರು. 

ಇದನ್ನೂ ಓದಿ: ಬಾನೆತ್ತರಕ್ಕೆ ಗರಿಬಿಚ್ಚಿ ಹಾರಿದ ನವಿಲಿನ ಅಪರೂಪದ ವಿಡಿಯೋ ನೋಡಿ

ಅಲ್ಲದೆ, ಜಿಲ್ಲಾವಾರು ಸಭೆ ನಡೆಸೋದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದಾರೆ. ಮಂತ್ರಿಗಳು ಸರಿಯಿಲ್ಲ ಅಂತಿಲ್ಲ, ಕೆಲ ಸಚಿವರುಗಳು ವಿಶ್ವಾಸಕ್ಕೆ ತೆಗೆದುಕೊಳ್ಳತ್ತಿಲ್ಲ. ಸಚಿವರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಅನ್ನೋ ಭಾವನೆ ನಮ್ಮಲ್ಲಿ ಬಂದಿದೆ. ಯಾರೋ ಒಬ್ಬ ಸಚಿವರು ಸರಿ ಇಲ್ಲ ಅಂತಾ ನಾವು ಹೇಳಿಲ್ಲ. ಒಬ್ಬರ ಮೇಲೆ ಅಸಮಾಧಾನ ಇಲ್ಲ ನಮಗೆ, ಕಾರ್ಯವೈಖರಿ ಬಗ್ಗೆ ಅಸಮಾಧಾನ ಅಷ್ಟೆ. ಬಿ.ಆರ್. ಪಾಟೀಲ್ ಅವರು ಲೆಟರ್ ರೆಡಿ ಮಾಡಿದ್ರು ನಾನು ಸಹಿ ಮಾಡಿದ್ದೆ. ದೆಹಲಿಗೆ ಕರೆದಿರೋ ವಿಚಾರದಲ್ಲಿ ನಮಗೆ ಅಸಮಾಧಾನ ಇಲ್ಲ. ಲೋಕಸಭೆ ಚುನಾವಣೆ ಸಂಬಂಧ ಸಭೆ ಕರೆದಿರೋದು ಎಂದರು.

ಇನ್ನು ಜೆಡಿಎಸ್ ನಿಂದ ಬಂದು ಎರಡು ಬಾರಿ ಸಿದ್ದರಾಮಯ್ಯ ಸಿಎಂ ಆಗಿರುವ ವಿಚಾರವಾಗಿ ಮಾತನಾಡಿ, ಕೊಪ್ಪಳದ ಕಾರ್ಯಕ್ರಮದಲ್ಲಿ ನಮ್ಮ ಕಾರ್ಯಕರ್ತನೊಬ್ಬ ನೀವು ಹಿರಿಯರಿದ್ದಿರಿ ಸಚಿವರಾಗಿಲ್ಲ ಅಂತಾ ಹೇಳಿದ, ಆಗ ನಮ್ಮ ಕ್ಷೇತ್ರದ ಕಾರ್ಯಕರ್ತನೊಬ್ಬನನ್ನ ಅಧ್ಯಕ್ಷರನ್ನಾಗಿ ಮಾಡಬೇಕು ಅಂತಾ ಇದ್ದವಿ. ಆದ್ರೆ ಗ್ರಾಮ ಪಂಚಾಯತಿ ಅಧ್ಯಕ್ಷರನ್ನಾಗಿ ಮಾಡೋದಕ್ಕೆ ಕೇಟಗಿರಿ ಬರಲಿಲ್ಲ ಹಾಗಾಗಿ ಹೇಳಿದೆ.

ಇದನ್ನೂ ಓದಿ:ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕೈ ಕಮಾಲ್

ರಾಜಕೀಯದಲ್ಲಿ ಸಿನಿಯರ್ ಜೂನಿಯರ್ ಪ್ರಶ್ನೆ ಬರಲ್ಲ. ಅಡ್ವಾಣಿ ಪಕ್ಷ ಕಟ್ಟಿದರು, ಮೋದಿ ಪ್ರಧಾನಿ ಆದ್ರು. ಬೊಮ್ಮಾಯಿ ಅವರು ಸಿಎಂ ಆದ್ರು, ನಾವು ಅವರ ತಂದೆಯ ಕ್ಯಾಬಿನೇಟ್ ನಲ್ಲಿ ಸಚಿವರಾಗಿದ್ದೇವು. ದೇವೆಗೌಡರ ಕ್ಯಾಬಿನೇಟ್ ನಲ್ಲಿ ಸಚಿವನಾಗಿದ್ದೆ, ಅವರ ಮಗ ನಮಗಿಂತ ಮೊದಲು ಸಿಎಂ ಆದ್ರು. ಹಾಗೆಯೇ ಸಿದ್ದರಾಮಯ್ಯ ಜೆಡಿಎಸ್ ನಿಂದ ಬಂದು ಸಿಎಂ ಆದ್ರು ಅಂತಾ ಹೇಳಿದೆ ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News