ಅನಂತ್‌ ಮತ್ತೆ ʻಅಗ್ನಿʼನರ್ತನ.. ಸಿಎಂ ಮತ್ತು ಕಾಂಗ್ರೆಸ್‌ ಲೀಡರ್ಸ್‌ಗೆ ಒಪನ್‌ ಸವಾಲ್!

Ananth Kumar Hegade: ಅನಂತ್‌ ಕುಮಾರ್‌ ಮೊನ್ನೆ ನೀಡಿದ ಹೇಳಿಕೆ ವಿರುದ್ಧ ಇಡೀ ಕಾಂಗ್ರೆಸ್‌ ಬಳಗೆವೇ ಕೆಂಡಾಕಾರಿತ್ತು.. ಸಂಸದರ ಏಕವಚನದ ಹೇಳಿಕೆಗೆ ಸ್ವಪಕ್ಷದವರೇ ಅಸಮಾಧಾನ ಹೊರ ಹಾಕಿದ್ದಾರೆ..   

Written by - Savita M B | Last Updated : Jan 16, 2024, 04:17 PM IST
  • ಇದ್ಯಾವೂದಕ್ಕೂ ಡೋಂಟ್‌ಕೇರ್‌ ಎನ್ನದೆ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ
  • ಇದು ನನ್ನ ವೈಯಕ್ತಿಕ ಹೇಳಿಕೆ ಇದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎನ್ನುತ್ತಾಲೆ ಮತ್ತೆ ಸಿಎಂ ಹಾಗೂ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ..
ಅನಂತ್‌ ಮತ್ತೆ ʻಅಗ್ನಿʼನರ್ತನ.. ಸಿಎಂ ಮತ್ತು ಕಾಂಗ್ರೆಸ್‌ ಲೀಡರ್ಸ್‌ಗೆ ಒಪನ್‌ ಸವಾಲ್! title=

ಇಂದು ಈ ಬಗ್ಗೆ ಮಾತಾನಾಡಿದ ಅನಂತ್‌ ಕುಮಾರ್‌ ಹೆಗಡೆ.. ಇದ್ಯಾವೂದಕ್ಕೂ ಡೋಂಟ್‌ಕೇರ್‌ ಎನ್ನದೆ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂದು ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದು, ಇದು ನನ್ನ ವೈಯಕ್ತಿಕ ಹೇಳಿಕೆ ಇದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎನ್ನುತ್ತಾಲೆ ಮತ್ತೆ ಸಿಎಂ ಹಾಗೂ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ..

ಸಂಸ್ಕೃತಿಯ ಬಗ್ಗೆ ಹೇಳುವ ಸಿದ್ದರಾಯ್ಯನವರು ಬಹಿರಂಗವಾಗಿ ಚರ್ಚೆಗೆ ಬರಲಿ ,ಹಿಂದೂ ಸಮಾಜ ಅಂದ್ರೆ ಬೇವರ್ಸಿ ಸಮಾಜಾನಾ..? 20 % ಮತಕ್ಕಾಗಿ ಎಷ್ಟೊಂದು  ಜೊಲ್ಲು ಸುರಿಸಿ ಮಾತನಾಡುತ್ತಾರೆ,80% ರಿಂದ 85% ಇರುವ ಹಿಂದೂ ಸಮಾಜದ ಬಗ್ಗೆ ನಿಮಗೆ ಗೌರವ ಯಾಕಿಲ್ಲ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಸವಾಲು ಹಾಕಿದರು.

ಇದನ್ನೂ ಓದಿ- ಅಯೋಧ್ಯೆಯ ರಾಮಮಂದಿರದಲ್ಲಿ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯ 'ರಾಮ ಲಲ್ಲಾ' ಮೂರ್ತಿ ಪ್ರತಿಷ್ಠಾಪನೆಗೆ ನಿರ್ಧಾರ

ಇಂದು ಶಿರಸಿಯ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ,ನನ್ನ ಹೇಳಿಕೆಯನ್ನ ಖಂಡಿಸುವುದು ಸಹಜ, ಇದು ನನ್ನ ಹೇಳಿಕೆ. ಇದು ಪಕ್ಷದ ಹೇಳಿಕೆ ಅಲ್ಲ,ಇದು ನನ್ನ ವೈಯಕ್ತಿಕ ಹೇಳಿಕೆ. ವಿಜಯೇಂದ್ರ ಹೇಳಿರುವ ಮಾತು ಸರಿ ಇದೆ.

ಸಂಸ್ಕೃತಿ ಬಗ್ಗೆ ಸಿದ್ಧರಾಮಯ್ಯ ನನ್ನ ಎದುರು ಬಂದು ಮಾತನಾಡಲಿ,ಇದರ ಎಲ್ಲದರ ಬಗ್ಗೆ ನಾವಿಬ್ರೂ ಕುತ್ಕೊಂಡು ಜನರ ಮುಂದೆ ಚರ್ಚೆ ಮಾಡೋಣ. ಎಲ್ಲೊ ಕುತ್ಕೊಂಡು ಸಭೆಯಲ್ಲಿ ಮಾತನಾಡುವುದು ಸರಿ ಅಲ್ಲ.‌ ಯಡಿಯೂರಪ್ಪನವರ ಬಗ್ಗೆ, ಮೋದಿಯವರ ಬಗ್ಗೆ ನಮ್ಮ ದೇವಸ್ಥಾನದ ಬಗ್ಗೆ ಅಸಭ್ಯವಾಗಿ ಮೊದಲು ಮಾತನಾಡಿದ್ದು. ನಮ್ಮ ದೇವಸ್ಥಾನದ ಬಗ್ಗೆ ಅಷ್ಟು ಕೀಳಾಗಿ ಮಾತನಾಡುವುದು ಯಾಕೆ ಬೇಕಿತ್ತು,ನಮ್ಮ ಪ್ರಧಾನಿ ಮೋದಿ, ಅಮಿತ ಶಾ ಬಗ್ಗೆ ಯಾರೆಲ್ಲ ಎನೇನ್ ಮಾತಾಡಿದಾರೆ ಹೇಳಬೇಕಾ.? ಸಲ್ಮಾನ ಖುರ್ಷದ ಕಪ್ಪೆ, ಮಂಗ,  ನಪಸುಂಕ ಎಂದು  ಕರೆದರು,ಶರದ್ ಪವಾರ ಮೋದಿಯರನ್ನ ಹಿಟ್ಲರ್ ಅಂತಾ ಕರೆದ್ರು,ಕಾಂಗ್ರೆಸ್ ಬಹುತೇಕ ನಾಯಕರು ಇವರನ್ನ ಹಿಟ್ಲರ್  ಎಂದು ಕರೆದರು,ಇದಕ್ಕೆಲ್ಲ ಮಿಡಿಯಾದ್ದೇ ದಾಖಲೆಗಳು ಇವೆ.

ಇದನ್ನೂ ಓದಿ-Ram Mandir Ayodhya: ಅಯೋಧ್ಯೆಗೆ ಕರ್ನಾಟಕದಿಂದ 12ಕ್ಕೂ ಹೆಚ್ಚು ರೈಲುಗಳ ಸಂಚಾರ

ಸಿಎಂ ಸಿದ್ಧರಾಮಯ್ಯ ಮೋದಿ ಯವರನ್ನ ಎಕವಚನದಲ್ಲಿ ಮಾಸ್ ಮರ್ಡರ್ ಎಂದು ಕರೆದರು.ಕಾಂಗ್ರೆಸ್ ದವರಿಗೆ ಸಿದ್ಧರಾಮಯ್ಯನವರಿಹೆ  ಇಲ್ಲದ ಸಭ್ಯತೆ ಬಿಜೆಪಿಯವರಿಗ್ಯಾಕೆ? ಇದು ನನ್ನ ಪ್ರಧಾನಿ, ನನ್ನ ದೇಶ, ನನ್ನ ಧರ್ಮದ ಬಗ್ಗೆ ಹೇಳಿರುವ ಹೇಳಿಕೆಯಲ್ಲಿ ಯಾವುದೇ ಹಿಂಜರಿಕೆ ಇಲ್ಲ. ದಿಗ್ವಿಜಯ ಸಿಂಗ್ ಮೋದಿಯವರನ್ನ ರಾವಣ ಅಂತಾ ಕರೆದರು.. ಜಯರಾಂ ರಮೇಶ್ ಭಸ್ಮಾಸೂರ ಅಂತಾ ಕರೆದ್ರು,ಮಣಿಶಂಕರ್ ಅಯ್ಯರ್ ವಿಷ ಸರ್ಪ ಅಂತಾ ಕರೆದ್ರು,ಇನ್ನೂ ಎನ್ರಿ ಹೇಳಿಸಿಕೊಳ್ಳಬೇಕು ನಾವು..? ಕಾಂಗ್ರೆಸ್ ನಾಯಕರು ಎಲ್ರೂ ನನ್ನ ಮುಂದೆ ಬಂದು ಸಂಸ್ಕೃತಿ ಬಗ್ಗೆ ಚರ್ಚೆ ಮಾಡಲಿ,ಸಭ್ಯತೆ ಎಂದ್ರೆ ಎನು ಅಂತಾ ನಾನು ಪಾಠ ಮಾಡ್ತೆನಿ,ಏನೂ ಮಾತನಾಡಬೇಕು ಅಂತಾ ನಾನು ಹೇಳ್ತೆನಿ,ಯಾರಿಗೆ ಯಾವ ಭಾಷೆಯಲ್ಲಿ ಹೇಗೆ ಮಾತಾಡಬೇಕು ಹಾಗೆ ಮಾತಾಡಬೇಕು. ಸಭ್ಯತೆ ಅಂದ್ರೆ ಏನು ಎಂಬುವುದನ್ನ ನೀವೂ ತಿಳಿದುಕೊಳ್ಳಿ ಎಂದ್ರು..

ಸಂಸ್ಕೃತಿ ಬಗ್ಗೆ ಮಾತನಾಡುವವ ಸಿದ್ಧರಾಮಯ್ಯನವರೆ ನನ್ಮ ಮುಂದೆ ಬರಲಿ.ಲೈವ್ ಡಿಬೆಟ್ ಮಾಡೋಣ ರಾಜ್ಯದ ಜನರಿಗೆ ಗೊತ್ತಿಲ್ಲ, ನಾಲ್ಕು ವರೆ ವರ್ಷ ಎಲ್ಲಿದ್ರೂ , ಕುಂಭಕರ್ಣ ಎಂಬ ಕಾಂಗ್ರೆಸ್ ಟಿಕೆ ಮಾಡಿದೆ ಅದಕ್ಕೆಲ್ಲ ನಾನು ಮುಂದಿನ ದಿನಗಳಲ್ಲಿ ಉತ್ತರ ಕೊಡ್ತೇನೆ,ಎಲ್ಲದಕ್ಕೂ ಉತ್ತರ ಕೊಡ್ತಿನಿ ಯಾವುದಕ್ಕೂ ಬಡ್ಡಿ ಗಿಡ್ಡಿ ಇಟ್ಟಿಕೊಳ್ಳುವ ಪ್ರಶ್ನೆ ಇಲ್ಲ, ಆರೋಗ್ಯ ಸರಿ ನೊಡ್ಕೊಳ್ಳಿ ಎಂಬ ಡಿಕೆ ಶಿವಕುಮಾರ ಹೇಳಿದ್ದಾರೆ,ನನ್ನ ಆರೋಗ್ಯ ಅತ್ಯಂತ ಚೆನ್ನಾಗಿದೆ, ಆರೋಗ್ಯದಲ್ಲಿ ಯಾವುದೆ ಸಂಶಯ ಇಲ್ಲ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತೆ. ಗೆಲ್ಲಿಸುತ್ತೆ.. ನನ್ನ ಟಿಕೆಟ್ ಬಗ್ಗೆ ಬೇರೇಯವರಿಗ್ಯಾಕರಿ ಚಿಂತೆ? ನನ್ನ ಟಿಕೆಟ್ ಬಗ್ಗೆ ನನಗೆ ಚಿಂತೆ ಆಗಬೇಕು. ಟಿಕೆಟ್ ಬಗ್ಗೆ ಯೋಚನೆ ಮಾಡೊಕೆ  ಹೃಕಮಾಂಡ್ ಇದೆ, ನನ್ನ ಟಿಕೆಟ್ ಬಗ್ಗೆ ಬೇರೆಯವರಿಗ್ಯಾಕೆ ಚಿಂತೆ
ಅವರ ಕೆಲಸ ಅವರು ನೋಡಿಕೊಳ್ಳಲಿ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದ್ದರು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News