ರೋಗಿ ಕರೆತರಲು ಬಂದ ಆಂಬ್ಯುಲೆನ್ಸ್‌ಗೆ ಪ್ರಾಬ್ಲಂ: ಸ್ಥಳೀಯರ ಆಕ್ರೋಶ

Ambulance Problem: ಕುಂದಕೆರೆ ಗ್ರಾಮದ ಈರಯ್ಯ(45) ಎಂಬವರು ತೀವ್ರ ಜ್ವರ ಮತ್ತು ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಪರಿಸ್ಥಿತಿ ಗಂಭೀರತೆ ಅರಿತ ಮನೆಯವರು 108 ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.

Written by - Yashaswini V | Last Updated : Jul 29, 2024, 12:49 PM IST
  • ಕೈ ಕೊಟ್ಟ ಡಕೋಟ ತುರ್ತು ವಾಹನದ ವಿರುದ್ಧ ಗ್ರಾಮಸ್ಥರು ಆಕ್ರೋಶ
  • ಕೈ ಕೊಟ್ಟ ಆ್ಯಂಬುಲೆನ್ಸ್ ನಿಂದ ಬೇಸತ್ತು ಪ್ಯಾಸೆಂಜರ್ ಆಟೋ ಮೂಲಕ ಆಸ್ಪತ್ರೆಗೆ ರೋಗಿ ರವಾನೆ
  • ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ಘಟನೆ
ರೋಗಿ ಕರೆತರಲು ಬಂದ ಆಂಬ್ಯುಲೆನ್ಸ್‌ಗೆ ಪ್ರಾಬ್ಲಂ: ಸ್ಥಳೀಯರ ಆಕ್ರೋಶ title=

Ambulance: ರೋಗಿ ಕರೆತರಲು ಬಂದಿದ್ದ ಆ್ಯಂಬುಲೆನ್ಸ್ ಗೆ ಮೆಕಾನಿಕ್ ನಿಂದ ಚಿಕಿತ್ಸೆ ಕೊಡಿಸಬೇಕಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಕುಂದಕೆರೆ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಕುಂದಕೆರೆ ಗ್ರಾಮದ ಈರಯ್ಯ(45) ಎಂಬವರು ತೀವ್ರ ಜ್ವರ ಮತ್ತು ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಪರಿಸ್ಥಿತಿ ಗಂಭೀರತೆ ಅರಿತ ಮನೆಯವರು 108 ಆ್ಯಂಬುಲೆನ್ಸ್ (108 Ambulance) ಗೆ ಕರೆ ಮಾಡಿದ್ದಾರೆ.

ಇದನ್ನೂ ಓದಿ- ಗ್ರಾಮೀಣಾಭಿವೃದ್ಧಿ ಸಚಿವರ ಕ್ಷೇತ್ರದಲ್ಲಿ ಗ್ರಾಮಪಂಚಾಯತ್ ವಿದ್ಯುತ್ ಬಿಲ್ ಪಾವತಿಸಲೂ ಇಲ್ಲ ಹಣ!

ಮಾಹಿತಿ ಅರಿತ ಬಳಿಕ ಆ್ಯಂಬುಲೆನ್ಸ್ (Ambulance) ಏನೋ ಬಂದಿದೆ. ಆದರೆ, ಎಷ್ಟೇ ಪ್ರಯತ್ನ ಪಟ್ಟರೂ ಚಾಲು ಆಗದ ಪರಿಣಾಮ ರೋಗಿ ಪರದಾಡುವಂತಾಯಿತು. ಬಳಿಕ, ಈರಯ್ಯ ಅವರನ್ನು ಪ್ಯಾಸೆಂಜರ್ ಆಟೋ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮಾರ್ಗ ಮಧ್ಯೆ ಬಂದ ಇನ್ನೊಂದು ಆ್ಯಂಬುಲೆನ್ಸ್ ಈರಯ್ಯ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದೆ.

ತುರ್ತು ವಾಹನಗಳು ಸುಸ್ಥಿತಿಯಲ್ಲಿರದ ಪರಿಣಾಮ ಈ ಫಜೀತಿ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಆಂಬುಲೆನ್ಸ್ ಕುಂದಕರೆ ಗ್ರಾಮದಲ್ಲೇ ಕೆಟ್ಟು ನಿಂತಿದೆ.

ಇದನ್ನೂ ಓದಿ- ರಾಜ್ಯದ 1,199 ಗ್ರಾಮ ಪಂಚಾಯತಿಗಳಲ್ಲಿ ಕೊಳಚೆ ನೀರಿಗೆ ಮುಕ್ತಿ ನೀಡುವುದಕ್ಕಾಗಿ ಪೈಲಟ್ ಯೋಜನೆ ಜಾರಿ!

ಚಕ್ರಗಳು ಕೂಡ ಪಂಚರ್: 
ರೈತ ಮುಖಂಡ ಕುಂದಕೆರೆ ಸಂಪತ್ತು ಈ ಕುರಿತು ಮಾತನಾಡಿ, ಆ್ಯಂಬುಲೆನ್ಸ್ ನ ಚಕ್ರಗಳು ಕೂಡ ಸವೆದು ಪಂಚರ್ ಆಗಿದೆ. ತುರ್ತು ವಾಹನಗಳು ಹೋಗುವ ವೇಗಕ್ಕೆ ಟೈರ್ ಸ್ಫೋಟಗೊಂಡರೇ ಅಪಾಯಕ್ಕೆ ಒಳಗಾಗುವರು ಬಡಜನರು. ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ರೀತಿ ನಿರ್ಲಕ್ಷ್ಯವನ್ನು ಕೊನೆಗಾಣಿಸಬೇಕು ಎಂದು ಆಕ್ರೋಶ ಹೊರಹಾಕಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News