Karnataka Assembly Election : ಬಾಜಿಗೆ ಬನ್ನಿ ಯಾರಾದ್ರೂ...  ಜೆಡಿಎಸ್ ಪರ ಹೊಲ ಪಣಕ್ಕಿಟ್ಟ ರೈತ !

Karnataka Assembly Election Result : ರಾಜ್ಯದಲ್ಲಿ ಚುನಾವಣೆ ಅಬ್ಬರ ಮುಗಿದಿದೆ. ಇನ್ನು ಫಲಿತಾಂಶ ಒಂದೇ ಬಾಕಿ ಇದೆ. ವಿಧಾನ ಸಭಾ ಕೇತ್ರದ ಅಭ್ಯರ್ಥಿಗಳು ಮಾತ್ರವಲ್ಲದೇ ರಾಜಕೀಯ ನಾಯಕರು ಫಲಿತಾಂಶ ನೀರಿಕ್ಷೆಯಲ್ಲಿದ್ದಾರೆ.ಅಭ್ಯರ್ಥಿಗಳು ತಳಮಳಿಸುತ್ತಿದ್ದರೇ ಅವರ ಅಭಿಮಾನಿಗಳು ಮಾತ್ರ ಗೆಲುವಿನ ರಣೋತ್ಸಾಹದಲ್ಲಿ ಬಾಜಿ ಕಟ್ಟಲು ಆಹ್ವಾನ ಕೊಡುತ್ತಿದ್ದಾರೆ.

Written by - Zee Kannada News Desk | Last Updated : May 12, 2023, 06:07 PM IST
  • ರಾಜ್ಯದಲ್ಲಿ ಚುನಾವಣೆ ಅಬ್ಬರ ಮುಗಿದು ಫಲಿತಾಂಶಕ್ಕೆ ಕ್ಷಣ ಗಣನೆ
  • ಅಭಿಮಾನಿಗಳು ಗೆಲುವಿನ ರಣೋತ್ಸಾಹದಲ್ಲಿ ಬಾಜಿ ಕಟ್ಟಲು ಆಹ್ವಾನ
  • ಇದೀಗ ಸಂವಿಧಾನ, ಕಾನೂನಿಗೆ ವಿರೋಧವಾಗಿ ಬೆಟ್ಟಿಂಗ್‌ ಟ್ರೆಂಡ್‌ ಕ್ರೀಯೆಟ್‌
Karnataka Assembly Election : ಬಾಜಿಗೆ ಬನ್ನಿ ಯಾರಾದ್ರೂ...  ಜೆಡಿಎಸ್ ಪರ ಹೊಲ ಪಣಕ್ಕಿಟ್ಟ ರೈತ ! title=

ಚಾಮರಾಜನಗರ: ರಾಜ್ಯದಲ್ಲಿ ಚುನಾವಣೆ ಅಬ್ಬರ ಮುಗಿದಿದೆ. ಇನ್ನು ಫಲಿತಾಂಶ ಒಂದೇ ಬಾಕಿ ಇದೆ. ವಿಧಾನ ಸಭಾ ಕೇತ್ರದ ಅಭ್ಯರ್ಥಿಗಳು ಮಾತ್ರವಲ್ಲದೇ ರಾಜಕೀಯ ನಾಯಕರು ಫಲಿತಾಂಶ ನೀರಿಕ್ಷೆಯಲ್ಲಿದ್ದಾರೆ. ರಾಜ್ಯದಲ್ಲಿ ಪ್ರಧಾನಿ ಮಂತ್ರಿ  ಮೋದಿ ಪ್ರಚಾರ, ಕಾಂಗ್ರೇಸ್‌ ನಾಯಕಾರದ ರಾಹುಲ್‌ ಗಾಂಧಿ, ಜೆಡಿಎಸ್‌ ನಾಯಕರು ಸಹ ಕಾತುರದಿಂದ ಕಾಯುತ್ತಿದ್ದಾರೆ. 

ಇದನ್ನೂ ಓದಿ: Chakraborty Sulibele : ಅವಿದ್ಯಾವಂತರು ಹೆಚ್ಚಾಗಿ ಕಾಂಗ್ರೆಸ್‌ ಗೆ ಮತ ಹಾಕಿದ್ದಾರೆ - ಚಕ್ರವರ್ತಿ ಸೂಲಿಬೆಲೆ !

ಹೀಗಿರುವಾಗ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು ಅಭ್ಯರ್ಥಿಗಳು ತಳಮಳಿಸುತ್ತಿದ್ದರೇ ಅವರ ಅಭಿಮಾನಿಗಳು ಮಾತ್ರ ಗೆಲುವಿನ ರಣೋತ್ಸಾಹದಲ್ಲಿ ಬಾಜಿ ಕಟ್ಟಲು ಆಹ್ವಾನ ಕೊಡುತ್ತಿದ್ದಾರೆ. ಆ ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರದಲ್ಲಿ  ಎಂ.ಆರ್.ಮಂಜುನಾಥ್ ಗೆದ್ದೆ ಗೆಲ್ಲುತ್ತಾರೆ ಎಂದು ಒಂದು ಎಕರೆ ಜಮೀನು ಬಾಜಿಗೆ ಕಟ್ಟುತ್ತೇನೆ ಎಂದು ವ್ಯಕ್ತಿಯೋರ್ವರು ಪಂಥಹ್ವಾನ ನೀಡಿದ್ದಾರೆ.

ಹನೂರು ಪಟ್ಟಣದ ಮೈಸೂರು ಮಾರಮ್ಮ ದೇವಾಲಯ ಸಮೀಪದ ನಿವಾಸಿ ರಂಗಸ್ವಾಮಿ ನಾಯ್ಡು ಎಂಬವರು ಒಂದು ಎಕರೆ ಜಮೀನನ್ನು ಜೆಡಿಎಸ್ ಅಭ್ಯರ್ಥಿ ಪರವಾಗಿ ಬಾಜಿ ಕಟ್ಟಲು ರೆಡಿ ಇದ್ದೇನೆ, ಬಿಜೆಪಿ, ಕಾಂಗ್ರೆಸ್ ನವರು ಸೇರಿದಂತೆ ಯಾರಾದರೂ ಬರಲಿ ನಾನು ರೆಡಿ ಎಂದಿದ್ದಾರೆ.ಲೊಕ್ಕನಹಳ್ಳಿ ಮುಖ್ಯರಸ್ತೆಯಲ್ಲಿರುವ ತಮಗೆ ಸೇರಿದ ಒಂದು ಎಕರೆ ಜಮೀನನ್ನು ಪಣಕ್ಕೆ ಇಡುತ್ತಿದ್ದೇನೆ ಎಂಬ ರೈತನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದೆ.

ಇದನ್ನೂ ಓದಿ: ಎರಡು ಬಸ್ಸುಗಳ ನಡುವೆ ಪರಸ್ಪರ ಡಿಕ್ಕಿ 20ಕ್ಕೂ ಹೆಚ್ಚು ಜನರು ಗಂಭೀರ!

ಇದೀಗ ಸಂವಿಧಾನ, ಕಾನೂನಿಗೆ ವಿರೋಧವಾದ ಟ್ರೆಂಡ್‌  ಕ್ರೀಯೆಟ್‌ ಮಾಡಿದ್ದಾರೆ. ಬಾಜಿ ಕಟ್ಟುವುದು ಇಷ್ಟು ದಿವಸ ಐಪಿಯಲ್‌ ಮ್ಯಾಚ್‌ ಗಳಲ್ಲಿ ಬೆಟ್ಟಿಂಗ್‌ ಕಟ್ಟುತ್ತಿದ್ದರು. ಈಗ ಎಲೆಕ್ಷನ್‌ ಚುನಾವಣೆ ಮೇಲೆ  ಬಾಜಿ ಆರಂಭಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News