ಪುಟ್ಟರಾಜು ಬಹಳ ಬಲಿಷ್ಠ ರಾಜಕಾರಣಿ, ಅವರ ಸಲಹೆಯನ್ನು 100% ಸ್ವೀಕರಿಸುತ್ತೇನೆ: ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ

MLA Darshan Puttannaiah: ನಮ್ಮ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿದ್ದೀರಿ. ಪಕ್ಷಾತೀತವಾಗಿ ಬೆಂಬಲ ಕೊಟ್ಟು ಆಶೀರ್ವದಿಸಿದ್ದೀರಿ, ಮೇಲುಕೋಟೆ ಕ್ಷೇತ್ರದ ಜನತೆಗೆ ಧನ್ಯವಾದಗಳು ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ದರ್ಶನ್ ಪುಟ್ಟಣ್ಣಯ್ಯ ತಿಳಿಸಿದರು. 

Written by - Yashaswini V | Last Updated : May 15, 2023, 04:01 PM IST
  • ಪಕ್ಷಾತೀತವಾಗಿ ಬೆಂಬಲ ಕೊಟ್ಟು ಆಶೀರ್ವದಿಸಿದ್ದೀರಿ, ಮೇಲುಕೋಟೆ ಕ್ಷೇತ್ರದ ಜನತೆಗೆ ಧನ್ಯವಾದಗಳು
  • ಚುನಾವಣೆಗಳು ಬರುತ್ತವೆ ಹೋಗುತ್ತವೆ ಶಾಂತಿಯಿಂದ ಮೇಲುಕೋಟೆ ಕ್ಷೇತ್ರದಲ್ಲಿ ಶಾಂತಿ ಕಾಪಾಡಿ
  • ಪುಟ್ಟರಾಜು ಅತ್ಯಂತ ಬಲಿಷ್ಠ ರಾಜಕಾರಣಿ ಅವರ ಸಲಹೆಯನ್ನು 100 ಪ್ರತಿಶತ ತೆಗೆದುಕೊಳ್ಳುತ್ತೇನೆ: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ
ಪುಟ್ಟರಾಜು ಬಹಳ ಬಲಿಷ್ಠ ರಾಜಕಾರಣಿ, ಅವರ ಸಲಹೆಯನ್ನು 100% ಸ್ವೀಕರಿಸುತ್ತೇನೆ: ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ  title=

Melukote MLA Darshan Puttannaiah: ಮಾಜಿ ಶಾಸಕರಾದ  ಸಿ.ಎಸ್ ಪುಟ್ಟರಾಜು ಅವಋ ಸಲಹೆ ನೀಡಿದರೆ 100% ಸ್ವೀಕರಿಸುತ್ತೇನೆ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ದರ್ಶನ್ ಪುಟ್ಟಣ್ಣಯ್ಯ ಹೇಳಿದ್ದಾರೆ

ಮಂಡ್ಯದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ, ನಮ್ಮ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿದ್ದೀರಿ. ಪಕ್ಷಾತೀತವಾಗಿ ಬೆಂಬಲ ಕೊಟ್ಟು ಆಶೀರ್ವದಿಸಿದ್ದೀರಿ, ಮೇಲುಕೋಟೆ ಕ್ಷೇತ್ರದ ಜನತೆಗೆ ಧನ್ಯವಾದಗಳು ಎಂದು ತಿಳಿಸಿದರು. 

ಇದನ್ನೂ ಓದಿ-  ಮಂಡ್ಯ ವಿಧಾನಸಭಾ ಚುನಾವಣಾ ಫಲಿತಾಂಶ 2023 (Mandya Assembly Election Result 2023):

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಕೂಡ ನನ್ನ ಗೆಲುವಿಗಾಗಿ ಕೆಲಸ ಮಾಡಿದ್ದಾರೆ. ನಾನು ಗೆಲ್ಲುವುದಕ್ಕೆ ಅವಕಾಶ ಕೊಟ್ಟ ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಜೊತೆಯಲ್ಲಿದ್ದು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. 

ರೈತ ಸಂಘ ಶಾಂತಿ ಮಾರ್ಗದಲ್ಲಿ ಬಂದಿದೆ. ಕ್ಷೇತ್ರದಲ್ಲಿ ಕೆಲವು ಕಡೆ ಗಲಾಟೆ ನಡೆಯುತ್ತಿದೆ ಆ ರೀತಿಯ ಘಟನೆಗೆ ಅವಕಾಶ ಕೊಡಬೇಡಿ. ಮೇಲುಕೋಟೆ ಕ್ಷೇತ್ರದಲ್ಲಿ ಶಾಂತಿ ಕಾಪಾಡೋಣ. ಚುನಾವಣೆ ಬರುತ್ತೆ ಹೋಗುತ್ತೆ ಶಾಂತಿಯಿಂದ ನಮ್ಮೂರನ್ನು ಬೆಳೆಸೋಣಾ ಎಂದು ಕರೆ ನೀಡಿದರಲ್ಲದೆ,  ಕೆಲಸ ಮಾಡಲು ಉತ್ಸಾಹ ಇದೆ.  ರೈತರು ಜನರ ಬಗ್ಗೆ ಕಾಳಜಿ ಇದೆ. ನನಗೆ ರಾಜಕಾರಣ ಹೊಸದು, ಎಲ್ಲವನ್ನೂ ಕಲಿತು ಕೆಲಸ ಮಾಡುತ್ತೇನೆ ಎಂದು ವಿಶ್ವಾಸದಿಂದ ನುಡಿದರು. 

ಇದನ್ನೂ ಓದಿ- ಮೈಸೂರು ವಿಧಾನಸಭಾ ಚುನಾವಣಾ ಫಲಿತಾಂಶ 2023 (Mysore Assembly Election Result 2023): 

ಪುಟ್ಟರಾಜು ಬಹಳ ಬಲಿಷ್ಠ ರಾಜಕಾರಣಿ!
ಇನ್ನೂ ಈ ವೇಳೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು ಅವರ ಬಗ್ಗೆಯೂ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಪುಟ್ಟರಾಜು ಅವರು ಬಹಳ ಬಲಿಷ್ಠ ರಾಜಕಾರಣಿಗಳು. ಚುನಾವಣೆಯಲ್ಲಿ ಬಲಿಷ್ಠ ಎದುರಾಳಿಗಳು. ಅವರ ಮುಂದೆ ಗೆಲ್ಲಬೇಕಾದರೆ ತುಂಬಾ ಕಷ್ಟ ಇತ್ತು. ಜನರು ತುಂಬಾ ನಿಷ್ಠೆಯಿಂದ ಗೆಲುವಿಗಾಗಿ ಶ್ರಮಿಸಿದರು. ಕ್ಷೇತ್ರದಲ್ಲಿ ಇರುವವರು ಹಾಗೂ ಹೊರಗಿನವರು ಮತ್ತು ಪುಟ್ಟರಾಜು ಅವರು ಸಲಹೆ ಕೊಟ್ಟರೆ ಖಂಡಿತವಾಗಿಯೂ ಶೇಕಡಾ ನೂರಕ್ಕೆ ನೂರರಷ್ಟು ಅವರ ಸಲಹೆಯನ್ನು ಸ್ವೀಕರಿಸುತ್ತೇನೆ. ನನಗೂ ಅನುಭವ ಬೇಕು, ಎಲ್ಲವನ್ನೂ ಕಲಿತುಕೊಳ್ಳುತ್ತೇನೆ ಎಂದರು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News