ಶಿವಮೊಗ್ಗ ಅಥವಾ ಮಾನ್ವಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಿಚ್ಚ ಸುದೀಪ್ ಕಣಕ್ಕೆ ?

ಮಾನ್ವಿ ಹಾಗೂ ಶಿವಮೊಗ್ಗ ಕ್ಷೇತ್ರಗಳಿಗೆ ಬಿಜೆಪಿ ಇನ್ನೂ ಅಭ್ಯರ್ಥಿಗಳನ್ನು ಘೋಷಿಸದೆ ಇರುವುದು ಈಗ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Written by - Zee Kannada News Desk | Last Updated : Apr 18, 2023, 11:03 AM IST
  • ಈ ಎರಡು ಕ್ಷೇತ್ರದಲ್ಲಿ ಸುದೀಪ್ ಗೆ ಒಂದು ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಮನವಿ ಮಾಡಲಾಗುತ್ತಿದೆ ಎನ್ನಲಾಗಿದೆ.
  • ಆ ಮೂಲಕ ಸದ್ಯ ಬಿಜೆಪಿಗೆ ಆಗಿರೋ ಡ್ಯಾಮೇಜ್ ಈ ಮೂಲಕ ಸರಿಪಡಿಸೊ ಲೆಕ್ಕಾಚಾರ ನಡೆದಿದೆ,
  • ಹಾಗಾಗಿ ಈ ಎರಡು ಕ್ಷೇತ್ರಗಳನ್ನ ಕೊನೆ ಹಂತದವರೆಗೂ ಘೋಷಣೆ ಮಾಡ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಶಿವಮೊಗ್ಗ ಅಥವಾ ಮಾನ್ವಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಕಿಚ್ಚ ಸುದೀಪ್ ಕಣಕ್ಕೆ ? title=
file photo

ಬೆಂಗಳೂರು: ಮಾನ್ವಿ ಹಾಗೂ ಶಿವಮೊಗ್ಗ ಕ್ಷೇತ್ರಗಳಿಗೆ ಬಿಜೆಪಿ ಇನ್ನೂ ಅಭ್ಯರ್ಥಿಗಳನ್ನು ಘೋಷಿಸದೆ ಇರುವುದು ಈಗ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಹೌದು, ಸುದ್ದಿ ಮೂಲಗಳ ಪ್ರಕಾರ ನಟ ಸುದೀಪ್ ಅವರನ್ನು ಚುನಾವಣೆಯ ಕಣಕ್ಕೆ ತರುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎನ್ನುವ ಮಾತುಗಳು ರಾಜಕೀಯ ಅಂಗಳದಲ್ಲಿಕೇಳಿ ಬರುತ್ತಿವೆ.ಆದರೆ ಸುದೀಪ್ ಈಗಾಗಲೇ ತಾವು ಯಾವುದೇ ಪಕ್ಷಕ್ಕೆ ಬೆಂಬಲ ನೀಡುತ್ತಿಲ್ಲ ಬದಲಾಗಿ ತಮ್ಮ ಬೆಂಬಲ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮಾತ್ರ ಎಂದು ಸ್ಪಷ್ಟಪಡಿಸುವ ಮೂಲಕ ಸಕ್ರಿಯ ರಾಜಕೀಯ ಬರುವುದನ್ನು ಅಲ್ಲಗಳೆದಿದ್ದರು.

ಇದನ್ನೂ ಓದಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಸೀಟು ಮೀಸಲಿಟ್ಟ ಕಾಂಗ್ರೆಸ್...!

ಆದರೆ ಈಗ ಮೂಲಗಳ ಪ್ರಕಾರ ತವರು ಕ್ಷೇತ್ರವಾದ ಶಿವಮೊಗ್ಗ ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿಲ್ಲ, ಇನ್ನೂ ಎಸ್ ಟಿ ಮೀಸಲು ಕ್ಷೇತ್ರವಾದ ಮಾನ್ವಿಯಲ್ಲಿ ನಾಯಕ ಸಮುದಾಯದ ಮತಗಳು ಹೆಚ್ಚಿರುವುದರಿಂದ ಈ ಎರಡು ಕ್ಷೇತ್ರದಲ್ಲಿ ಸುದೀಪ್ ಗೆ ಒಂದು ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು  ಮನವಿ ಮಾಡಲಾಗುತ್ತಿದೆ ಎನ್ನಲಾಗಿದೆ.ಆ ಮೂಲಕ ಸದ್ಯ ಬಿಜೆಪಿಗೆ ಆಗಿರೋ ಡ್ಯಾಮೇಜ್ ಈ ಮೂಲಕ ಸರಿಪಡಿಸೊ ಲೆಕ್ಕಾಚಾರ ನಡೆದಿದೆ, ಹಾಗಾಗಿ ಈ ಎರಡು ಕ್ಷೇತ್ರಗಳನ್ನ ಕೊನೆ ಹಂತದವರೆಗೂ ಘೋಷಣೆ ಮಾಡ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News