Election Result: 'ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್' ಭವಿಷ್ಯವಾಣಿ ನಿಜವಾಯಿತಾ...!

Karnataka Election Results:  ಐತಿಹಾಸಿಕ ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ವಾರ್ಷಿಕೋತ್ಸವ  ಕೆಲವು ತಿಂಗಳ ಹಿಂದೆಯಷ್ಟೇ  ಅದ್ಧೂರಿಯಾಗಿ ನಡೆದಿತ್ತು. ಆ ವೇಳೆ  ಗೊರವಯ್ಯ ರಾಮಪ್ಪಜ್ಜಕಾರಣಿಕ ರಾಜ್ಯದ ರಾಜಕೀಯ ಕುರಿತು ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್‌ ಭವಿಷ್ಯ ನುಡಿದಿದ್ದರು. 

Written by - Zee Kannada News Desk | Last Updated : May 14, 2023, 11:07 AM IST
  • ನಿಜವಾಯ್ತು ಮೈಲಾರಲಿಂಗೇಶ್ವರನ ಭವಿಷ್ಯವಾಣಿ
  • ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ನುಡಿದಿದ್ದ ಭವಿಷ್ಯವಾಣಿ
  • ಚುನಾವಣೆ ಫಲಿತಾಂಶದಲ್ಲಿ 135 ಸೀಟ್‌ಗಳಿಂದ ಬಹುಮತ ಪೆಡದ ಕಾಂಗ್ರೆಸ್‌ ಪಕ್ಷ
Election Result: 'ಅಂಬಲಿ ಹಳಸಿತು ಕಂಬಳಿ ಬಿಸಿತಲೆ ಪರಾಕ್' ಭವಿಷ್ಯವಾಣಿ ನಿಜವಾಯಿತಾ...! title=

ವಿಜಯನಗರ ಜಿಲ್ಲೆ: ಜಿಲ್ಲೆಯ ಐತಿಹಾಸಿಕ ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ವಾರ್ಷಿಕೋತ್ಸವ  ಕೆಲವು ತಿಂಗಳ ಹಿಂದೆಯಷ್ಟೇ  ಅದ್ಧೂರಿಯಾಗಿ ನಡೆದಿತ್ತು. ಆ ವೇಳೆ  ಗೊರವಯ್ಯ ರಾಮಪ್ಪಜ್ಜಕಾರಣಿಕ  ರಾಜ್ಯದ ರಾಜಕೀಯ ಕುರಿತು ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್‌ ಭವಿಷ್ಯ ನುಡಿದಿದ್ದರು. 

ಇದನ್ನೂ ಓದಿ: Mudigere Assembly Election Result 2023: ನಯನ ಮೋಟಮ್ಮ ʼಕೈʼ ಹಿಡಿದ ಮೂಡಿಗೆರೆ ಮತದಾರರು

ಇದನ್ನು ಹಲವು ಜನರು ಹಲವಾರು ರೀತಿಯಲ್ಲಿ ವರ್ಣಿಸಿದ್ದರು. ಒಂದು ವರ್ಗದ ಜನರು ಬಿಜೆಪಿ ಆಡಳಿತದಲ್ಲಿ ಬರುತ್ತದೆ ಎಂದರೆ ಇನ್ನೊಬ್ಬರು ಜೆಡಿಎಸ್‌, ಇನ್ನು ಕೆಲವರು ಕಾಂಗ್ರೇಸ್‌ ಎಂದಿದ್ದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದಿರುವ ನಾಯಕರಿಗೆ ರಾಜ್ಯದ ಮುಖ್ಯಮಂತ್ರಿ ಪಟ್ಟ ಸಾಧ್ಯತೆ ಎನ್ನುವುದು ಮೈಲಾರ ಕಾರ್ಣಿಕದ ರಾಜಕೀಯವಾಗಿ ವಿಶ್ಲೇಷಣೆಯಾಗಿದೆ ಎಂದು ವರದಿಯೊಂದು ತಿಳಿಸಿತ್ತು. 

ಪ್ರಾಮಾಣಿಕವಾಗಿ, ನಿಷ್ಠಯಿಂದ ಇರುವ ವ್ಯಕ್ತಿಯು ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ. ಭಗವಂತ ದೈವವಾಣಿ ಮೂಲಕ ಇದನ್ನು ತಿಳಿಸಿದ್ದಾನೆ ಎಂದು ರಾಜಕೀಯವಾಗಿ ಈ ಕಾರಣಿಕದ ನುಡಿಯನ್ನು ವಿಶ್ಲೇಷಿಸಿದ್ದರು . 

ಇದನ್ನೂ ಓದಿ: Chikmagalur Assembly Constituency: ಎಚ್ ಡಿ ತಮ್ಮಯ್ಯಗೆ ಗೆಲುವು.. ಸಿಟಿ ರವಿಗೆ ಹೀನಾಯ ಸೋಲು!

ನಿನ್ನೆ ನಡೆದ ಚುನಾವಣೆ ಫಲಿತಾಂಶದಲ್ಲಿ ರಾಜ್ಯದ್ಯಾಂತ ಕಾಂಗ್ರೆಸ್‌ ಪಕ್ಷ 135 ಸೀಟ್‌ಗಳಿಂದ ಬಹುಮತ ಹಾಗೂ  ಬಿಜೆಪ 66 ಇತರೆ  ಜೆಡಿಎಸ್‌ 19, ಇತರೆ 4  ಪಡೆದುಕೊಂಡದೆ.  ಈ ನಿಟ್ಟಿನಲ್ಲಿ ನೋಡೊದಾರೆ ಗೊರವಯ್ಯ ರಾಮಪ್ಪಜ್ಜ ಕಾರಣಿಕದ ನುಡಿ ನಿಜವಾಯಿತ್ತು ಎಂದೇ ಹೆಚ್ಚಿನವರು ಅಭಿಪ್ರಾಯ ಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಕಾರಣಿಕ ರೈತರ ಪ್ರಕಾರ, ಇನ್ನು ಮಳೆ ಬೆಳೆ ಜಾಸ್ತಿ ಆಗಲಿದ್ದು ಸಮೃದ್ಧಿಯಾಗಿ ರೈತರಿಗೆ ಒಳ್ಳೆಯದಾಗುತ್ತದೆ. ರೈತರಿಗೆ ಬೆಳೆದ ಬೆಳೆ ಸಿಗುತ್ತದೆ, ಎನ್ನುವ ಸೂಚನೆ ಮೈಲಾರಲಿಂಗೇಶ್ವರ ಕಾರ್ಣಿಕದಲ್ಲಿ ನುಡಿದಿದೆ. ಇದನ್ನು ಕಾದು ನೋಡಬೇಕಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News