ಮೀಸಲಾತಿ ಬಗ್ಗೆ ಮೌನ ಮುರಿದ ಆರೆಸ್ಸೆಸ್ ಹೇಳಿದ್ದೇನು?

 ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇರುವುದರಿಂದ ಮೀಸಲಾತಿ ಅಗತ್ಯವಿದೆ, ಮತ್ತು ಅದರ ಫಲಾನುಭವಿಗಳು ಇದು ಅಗತ್ಯವೆಂದು ಭಾವಿಸುವವರೆಗೂ ಮುಂದುವರಿಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೋಮವಾರ ಹೇಳಿದೆ.

Last Updated : Sep 9, 2019, 08:51 PM IST
ಮೀಸಲಾತಿ ಬಗ್ಗೆ ಮೌನ ಮುರಿದ ಆರೆಸ್ಸೆಸ್ ಹೇಳಿದ್ದೇನು? title=
ಸಾಂದರ್ಭಿಕ ಚಿತ್ರ

ನವದೆಹಲಿ: ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇರುವುದರಿಂದ ಮೀಸಲಾತಿ ಅಗತ್ಯವಿದೆ, ಮತ್ತು ಅದರ ಫಲಾನುಭವಿಗಳು ಇದು ಅಗತ್ಯವೆಂದು ಭಾವಿಸುವವರೆಗೂ ಮುಂದುವರಿಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೋಮವಾರ ಹೇಳಿದೆ.

ದೇವಾಲಯಗಳು, ಶವಾಗಾರಗಳು ಮತ್ತು ನೀರಿನ ಜಲಾಶಯಗಳು ಎಲ್ಲರಿಗೂ ಮುಕ್ತವಾಗಿರಬೇಕು ಮತ್ತು ಯಾವುದೇ ನಿರ್ದಿಷ್ಟ ಜಾತಿಗೆ ಸೀಮಿತವಾಗಿರಬಾರದು ಎಂದು ಆರೆಸ್ಸೆಸ್ ಬಲವಾಗಿ ಭಾವಿಸಿದೆ ಎಂದು ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಹೇಳಿದರು. 'ನಮ್ಮ ಸಮಾಜದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯಿದೆ ಮತ್ತು ಆದ್ದರಿಂದ ಮೀಸಲಾತಿ ಅಗತ್ಯವಿದೆ. ಸಂವಿಧಾನದ ಆದೇಶದಂತೆ ನಾವು ಮೀಸಲಾತಿಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ' ಎಂದು ಅವರು ಸಂಘದ ಮೂರು ದಿನಗಳ ಸಮನ್ವಯ ಸಭೆಯ ಕೊನೆಯ ದಿನದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಮೀಸಲಾತಿ ಅನಿರ್ದಿಷ್ಟವಾಗಿ ಮುಂದುವರಿಯಬಾರದು ಎಂದು ಆರ್‌ಎಸ್‌ಎಸ್ ಭಾವಿಸುತ್ತದೆಯೇ ಎಂದು ಕೇಳಿದಾಗ ಇದಕ್ಕೆ ಉತ್ತರಿಸಿದ ಹೊಸಬಾಳೆ ಅವರು ಮೀಸಲಾತಿಯ ಫಲಾನುಭವಿಗಳು ನಿರ್ಧರಿಸುವ ನಿರ್ಧಾರ ಎಂದು ಹೇಳಿದರು. 'ಮೀಸಲಾತಿ ಅದರ ಫಲಾನುಭವಿಗಳು ಅಗತ್ಯವೆಂದು ಭಾವಿಸುವವರೆಗೆ ಮುಂದುವರಿಯಬೇಕು' ಎಂದು ಹೇಳಿದರು, ಆ ಮೂಲಕ ಮೀಸಲಾತಿ ನಿಲುವಿನ ಬಗ್ಗೆ ಆರೆಸ್ಸೆಸ್ ನ ನಿರ್ಧಾರವನ್ನು ಸ್ಪಷ್ಟಪಡಿಸಿದರು. ಸಮಾಜದಲ್ಲಿ ತಾರತಮ್ಯವನ್ನು ಕೊನೆಗೊಳಿಸುವ ಸಂಘದ ನಿಲುವನ್ನು ಶ್ಲಾಘಿಸುತ್ತಾ ದಲಿತ ಸಂಘಟನೆಯೊಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿದೆ ಎಂದು ಅವರು ತಿಳಿಸಿದರು.

ದೇವಾಲಯಗಳು, ಶವಾಗಾರಗಳು ಮತ್ತು ನೀರಿನ ಜಲಾಶಯಗಳು ಎಲ್ಲರಿಗೂ ಮುಕ್ತವಾಗಿರಬೇಕು ಎಂಬ ನಂಬಿಕೆಗೆ ಆರ್‌ಎಸ್‌ಎಸ್ ಬಲವಾಗಿ ಭಾವಿಸುತ್ತಿದೆ ಮತ್ತು ಅದಕ್ಕಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಮೀಸಲಾತಿ ಸಂಘದ ಸಮನ್ವಯ ಸಭೆಯ ಕಾರ್ಯಸೂಚಿಯಾಗಿಲ್ಲ ಮತ್ತು ಈ ಬಗ್ಗೆ ಚರ್ಚಿಸಲಾಗಿಲ್ಲ ಎನ್ನಲಾಗಿದೆ. ಲೋಕಸಭಾ ಚುನಾವಣೆಯ ನಂತರ ನಡೆದ ಮೊದಲ ಸಮನ್ವಯ ಸಭೆಯಲ್ಲಿ 35 ಆರ್‌ಎಸ್‌ಎಸ್ ಅಂಗಸಂಸ್ಥೆಗಳ 200 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪ್ರಧಾನ ಕಾರ್ಯದರ್ಶಿ (ಸಂಸ್ಥೆ) ಬಿ.ಎಲ್.ಸಂತೋಷ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

Trending News