ವಿಶಾಖಪಟ್ಟಣಂ: ಔಷಧೀಯ ಕಂಪನಿಯಲ್ಲಿ ಅನಿಲ ಸೋರಿಕೆ, ಇಬ್ಬರು ಮೃತ

ಅನಿಲ ಸೋರಿಕೆಯಿಂದಾಗಿ ಇದುವರೆಗೆ 2 ನೌಕರರು ಸಾವನ್ನಪ್ಪಿದ್ದಾರೆ ಮತ್ತು 4 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Last Updated : Jun 30, 2020, 08:38 AM IST
ವಿಶಾಖಪಟ್ಟಣಂ: ಔಷಧೀಯ ಕಂಪನಿಯಲ್ಲಿ ಅನಿಲ ಸೋರಿಕೆ, ಇಬ್ಬರು ಮೃತ title=
Image courtesy: ANI

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಇಂದು ಬೆಳಿಗ್ಗೆ ಔಷಧೀಯ ಕಂಪನಿಯೊಂದರಲ್ಲಿ ಅನಿಲ ಸೋರಿಕೆ ಸಂಭವಿಸಿದೆ. ಅನಿಲ ಸೋರಿಕೆಯಿಂದಾಗಿ ಇದುವರೆಗೆ 2 ನೌಕರರು ಸಾವನ್ನಪ್ಪಿದ್ದು 4 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಪ್ರಕರಣವು ವಿಶಾಖಪಟ್ಟಣದ ಪಾರ್ವಾಡ ಪ್ರದೇಶದಲ್ಲಿ ಸಂಭವಿಸಿದ್ದು  ಸೈನಾರ್ ಲೈಫ್ ಸೈನ್ಸಸ್ ಎಂಬ ಫಾರ್ಮಾ ಕಂಪನಿಯಲ್ಲಿ ಈ ಅವಘಡ ಸಂಭವಿಸಿದೆ.

ವಿಶಾಖಪಟ್ಟಣಂ ಜಿಲ್ಲಾಧಿಕಾರಿ ವಿನಯ್ ಚಂದ್ ಮತ್ತು ಎಸ್ಪಿ ಆರ್.ಕೆ. ಮೀನಾ ಅವರು ಉಳಿದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಶಾಖಪಟ್ಟಣಂನಲ್ಲಿ 2 ತಿಂಗಳಲ್ಲಿ ಇದು ಎರಡನೇ ಅನಿಲ ಸೋರಿಕೆ ಪ್ರಕರಣವಾಗಿದೆ. ಈ ಹಿಂದೆ ವಿಶಾಖಪಟ್ಟಣಂನ ಗೋಪಾಲಪಟ್ಟಣಂ ಪ್ರದೇಶದಲ್ಲಿ ಎಲ್ಜಿ ಪಾಲಿಮರ್‌ಗಳಲ್ಲಿ ಅನಿಲ ಸೋರಿಕೆ ಪ್ರಕರಣ ವರದಿಯಾಗಿತ್ತು. ಕರಾವಳಿಯ ನಗರದಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಗೋಪಾಲಪಟ್ಟಣಂ ಬಳಿಯ ಆರ್‌ಆರ್‌ವಿ ಪುರಂನಲ್ಲಿರುವ ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ಸ್ ದೈತ್ಯ ಎಲ್‌ಜಿ ಒಡೆತನದ ಸ್ಟೈರೀನ್ ಸ್ಥಾವರವು ಸೋರಿಕೆಯ ಮೂಲವಾಗಿದೆ. ಸುತ್ತಮುತ್ತಲಿನ ಗ್ರಾಮಗಳಾದ ಆರ್‌ಆರ್‌ವಿ ಪುರಂ, ವೆಂಕಟಪುರಂ, ಬಿ.ಸಿ.ಕಾಲೋನಿ, ಪದ್ಮಪುರಂ ಮತ್ತು ಕಂಪಾರಪಲೆಂನ ಹಲವಾರು ಜನರು ರಸ್ತೆಗಳಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು.
 

Trending News