Punjab New CM : ಪಂಜಾಬ್ ನೂತನ ಸಿಎಂ ಆಗಿ ಸುಖಜಿಂದರ್ ಸಿಂಗ್ ರಾಂಧವ ಆಯ್ಕೆ ಸಾಧ್ಯತೆ!

ಸುಖಜಿಂದರ್ ಸಿಂಗ್ ರಾಂಧವಾ ಅವರ ಹೆಸರನ್ನು ಬಹುಪಾಲು ಶಾಸಕರು ಪ್ರಸ್ತಾಪಿಸಿದ ನಂತರ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ. ಚಂಡೀಗಡ ಕೆಲವು ಹಿರಿಯ ನಾಯಕರು ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ. ಸದ್ಯಕ್ಕೆ, ಪಂಜಾಬಿನ ಮುಂದಿನ ಮುಖ್ಯಮಂತ್ರಿಯನ್ನು ನಿರ್ಧರಿಸಲು ರಾಹುಲ್ ಗಾಂಧಿಯವರ ದೆಹಲಿ ನಿವಾಸದಲ್ಲಿ ಸಭೆ ನಡೆಯುತ್ತಿದೆ.

Written by - Channabasava A Kashinakunti | Last Updated : Sep 19, 2021, 05:36 PM IST
  • ಪಂಜಾಬ್‌ನ ಮುಖ್ಯಮಂತ್ರಿ ಪ್ರಸ್ತಾಪ ತಿರಸ್ಕರಿಸಿದ ಅಂಬಿಕಾ ಸೋನಿ
  • ಸುಖಜಿಂದರ್ ಸಿಂಗ್ ರಾಂಧಾವಾ ಈ ಸ್ಥಾನವನ್ನು ತುಂಬುವ ಸಾಧ್ಯತೆ
  • ಕಾಂಗ್ರೆಸ್ ಪಕ್ಷ ಶೀಘ್ರವೇ ಹೆಸರನ್ನು ಘೋಷಿಸಲಿದೆ
Punjab New CM : ಪಂಜಾಬ್ ನೂತನ ಸಿಎಂ ಆಗಿ ಸುಖಜಿಂದರ್ ಸಿಂಗ್ ರಾಂಧವ ಆಯ್ಕೆ ಸಾಧ್ಯತೆ! title=

ನವದೆಹಲಿ : ಹಿರಿಯ ಕಾಂಗ್ರೆಸ್ ನಾಯಕಿ ಅಂಬಿಕಾ ಸೋನಿ ಪಂಜಾಬ್‌ನ ಮುಂದಿನ ಮುಖ್ಯಮಂತ್ರಿಯಾಗುವ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ, ಮೂಲಗಳ ಪ್ರಕಾರ ಸುಖಜಿಂದರ್ ಸಿಂಗ್ ರಾಂಧಾವಾ ಈ ಸ್ಥಾನವನ್ನು ತುಂಬುವ ಸಾಧ್ಯತೆಯಿದೆ. ಕಾಂಗ್ರೆಸ್ ಪಕ್ಷ ಶೀಘ್ರವೇ ಹೆಸರನ್ನು ಘೋಷಿಸಲಿದೆ.

ಸುಖಜಿಂದರ್ ಸಿಂಗ್ ರಾಂಧವಾ(Sukhjinder Singh Randhawa) ಅವರ ಹೆಸರನ್ನು ಬಹುಪಾಲು ಶಾಸಕರು ಪ್ರಸ್ತಾಪಿಸಿದ ನಂತರ ಅವರ ಹೆಸರನ್ನು ಆಯ್ಕೆ ಮಾಡಲಾಗಿದೆ. ಚಂಡೀಗಡ ಕೆಲವು ಹಿರಿಯ ನಾಯಕರು ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ. ಸದ್ಯಕ್ಕೆ, ಪಂಜಾಬಿನ ಮುಂದಿನ ಮುಖ್ಯಮಂತ್ರಿಯನ್ನು ನಿರ್ಧರಿಸಲು ರಾಹುಲ್ ಗಾಂಧಿಯವರ ದೆಹಲಿ ನಿವಾಸದಲ್ಲಿ ಸಭೆ ನಡೆಯುತ್ತಿದೆ.

ಇದನ್ನೂ ಓದಿ : PM Awas Yojana 2nd Installment : ಪಿಎಂ ಆವಾಸ್ ಯೋಜನೆಯ 2ನೇ ಕಂತಿನ ಹಣ ಬಿಡುಗಡೆಯಾಗಿದೆ : ನಿಮ್ಮ ಸ್ಟೇಟಸ್ ಈ ರೀತಿ ಪರಿಶೀಲಿಸಿ!

ಅನೇಕ ಶಾಸಕರು(MLAs) ಸಿಖ್ ಮುಖ್ಯಮಂತ್ರಿ ಹೊಂದುವ ಪರವಾಗಿದ್ದಾರೆ ಮತ್ತು ನಮಗೆ ಬಂದ ಮಾಹಿತಿ ಮೂಲಗಳ ಪ್ರಕಾರ ಹೋದರೆ ಇಬ್ಬರು ಉಪಮುಖ್ಯಮಂತ್ರಿಗಳಾಗಲಿದ್ದಾರೆ.

ವರದಿಗಳ ಪ್ರಕಾರ, ಪಕ್ಷದ ಮಾಜಿ ಅಧ್ಯಕ್ಷ ಮತ್ತು ಸಹೋದ್ಯೋಗಿ ರಾಹುಲ್ ಗಾಂಧಿ(Rahul Gandhi)ಯೊಂದಿಗೆ ತಡರಾತ್ರಿ ನಡೆದ ಸಭೆಯಲ್ಲಿ ಪಂಜಾಬ್‌ನ ಮುಂದಿನ ಸಿಎಂ ಆಗುವ ಪ್ರಸ್ತಾಪವನ್ನು ಅಂಬಿಕಾ ಸೋನಿ ನಿರಾಕರಿಸಿದರು. ಪಂಜಾಬ್ ಸಿಎಂ ಸ್ಥಾನದಿಂದ ಕೆಳಗಿಳಿಯಲು ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ನಂತರ ಈ ಸಭೆ ನಡೆಯಿತು.

ಇದನ್ನೂ ಓದಿ : 'ಗಾಂಧಿಗಳಿಗಿಂತ ಅಮರಿಂದರ್ ಸಿಂಗ್ ಜನಪ್ರಿಯವಾಗಿರುವುದರಿಂದ ಅವರನ್ನು ಪದಚ್ಯುತಗೊಳಿಸಲಾಗಿದೆ'

ನಿನ್ನೆ, ಅಮರಿಂದರ್ ಸಿಂಗ್(Amarinder Singh) ಪಂಜಾಬ್ ಸಿಎಂ ಸ್ಥಾನ ತ್ಯಜಿಸಿದ ಕೆಲವು ಗಂಟೆಗಳ ನಂತರ, ಅವರು ನವಜೋತ್ ಸಿಂಗ್ ಸಿಧು ಮುಂದಿನ ಮುಖ್ಯಮಂತ್ರಿಯಾಗುವ ಬಗ್ಗೆ ಟೀಕೆಗಳನ್ನು ಮಾಡಿದರು. ಪಾಕಿಸ್ತಾನದೊಂದಿಗಿನ ತನ್ನ ಸಂಬಂಧವನ್ನು ಪರಿಗಣಿಸಿ ಅದು ದೇಶಕ್ಕೆ ಬೆದರಿಕೆಯಾಗಲಿದೆ ಮತ್ತು ಆತ ದುರಂತ ಮತ್ತು ಅಸಮರ್ಥನೆಂದು ಸಾಬೀತುಪಡಿಸುತ್ತಾರೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News