ಪ್ರಧಾನಿ ಮೋದಿ ಹಳೆ ಟ್ವೀಟ್ ಮೂಲಕ ಚೀನಾದ ಗಡಿ ಸಂಘರ್ಷ ನೆನಪಿಸಿದ ಶಶಿ ತರೂರ್

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಗುರುವಾರ 2013 ಮತ್ತು 2014 ರ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟ್‌ಗಳನ್ನು ರಿಟ್ವೀಟ್ ಮಾಡಿದ್ದಾರೆ.

Last Updated : Jun 18, 2020, 09:45 PM IST
ಪ್ರಧಾನಿ ಮೋದಿ ಹಳೆ ಟ್ವೀಟ್ ಮೂಲಕ ಚೀನಾದ ಗಡಿ ಸಂಘರ್ಷ ನೆನಪಿಸಿದ ಶಶಿ ತರೂರ್   title=

ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಗುರುವಾರ 2013 ಮತ್ತು 2014 ರ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟ್‌ಗಳನ್ನು ರಿಟ್ವೀಟ್ ಮಾಡಿದ್ದಾರೆ.

ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆಗಿನ ಯುಪಿಎ ಸರ್ಕಾರದ ಚೀನಾ ನೀತಿಯನ್ನು ಪ್ರಶ್ನಿಸಿ ಕೇಂದ್ರದಲ್ಲಿ ಪ್ರಬಲ ಸರ್ಕಾರದ ಅಗತ್ಯವನ್ನು ಪ್ರತಿಪಾದಿಸಿದ್ದರು.

ತರೂರ್ ಅವರು ಕ್ರಮವಾಗಿ ಮೇ 13, 2013, ಫೆಬ್ರವರಿ 8, 2014 ಮತ್ತು ಆಗಸ್ಟ್ 15, 2013 ರಂದು ಮೋದಿಯವರು ಪೋಸ್ಟ್ ಮಾಡಿದ ಮೂರು ಟ್ವೀಟ್‌ಗಳ ಸರಣಿಯನ್ನು ರಿಟ್ವೀಟ್ ಮಾಡಿದ್ದಾರೆ, ಆದರೆ ಶಶಿ ತರೂರ್  ತಮ್ಮ ಮರು-ಟ್ವೀಟ್‌ಗಳ ಜೊತೆಗೆ ಯಾವುದೇ ಪ್ರತಿಕ್ರಿಯೆಗಳನ್ನು ಪೋಸ್ಟ್ ಮಾಡಿಲ್ಲ.

'ಚೀನಾ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳುತ್ತದೆ ಆದರೆ ಭಾರತೀಯ ಪಡೆಗಳು ಭಾರತೀಯ ಭೂಪ್ರದೇಶದಿಂದ ಏಕೆ ಹಿಂದೆ ಸರಿಯುತ್ತಿವೆ ಎನ್ನುವುದು ನನಗೆ ಆಶ್ಚರ್ಯವಾಗಿದೆ ಎಂದು ಎಂದು ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ ಅವರು ಮೇ 13, 2013 ರ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದರು.

ಇದನ್ನೂ ಓದಿ: ಗಡಿಯಲ್ಲಿ ಆಗುತ್ತಿರುವ ವಿದ್ಯಮಾನಗಳ ಬಗ್ಗೆ ಪ್ರಧಾನಿ ಮೋದಿ ಮೌನ ಸರಿಯಲ್ಲ: ಸಿದ್ದರಾಮಯ್ಯ

15 ಏಪ್ರಿಲ್ 2013 ರಂದು, ಚೀನಾದ ಸೈನ್ಯದ ದಳವು ಭಾರತದ ಭೂಪ್ರದೇಶದ ಒಳಗೆ 19 ಕಿ.ಮೀ ದೂರದಲ್ಲಿರುವ ದೌಲತ್ ಬೇಗ್ ಓಲ್ಡಿಯ ಆಗ್ನೇಯಕ್ಕೆ ನಾಲ್ಕು ಡೇರೆಗಳ ಪಾಳಯವನ್ನು ಸ್ಥಾಪಿಸಿತು, ಇದು 21 ದಿನಗಳ ನಿಲುಗಡೆಗೆ ಕಾರಣವಾಯಿತು. ಎರಡು ತಿಂಗಳ ನಂತರ, ಅದೇ ವರ್ಷ, ಜೂನ್ 17 ರಂದು ಚೀನಾದ ಸೈನಿಕರು ಮತ್ತೆ ಲಡಾಖ್‌ನ ಚುಮಾರ್ ಸೆಕ್ಟರ್‌ಗೆ ನುಸುಳಿದ್ದರು.

'ಇಂದು ರಾಷ್ಟ್ರದ ಭದ್ರತೆಗೆ ಅಪಾಯವಿದೆ. ಚೀನಾ ಏನು ಮಾಡುತ್ತಿದೆ ? ಅವರು ನಮ್ಮ ಗಡಿಗಳನ್ನು ಪ್ರವೇಶಿಸುತ್ತಾರೆ ಮತ್ತು ನಾವು ಮೌನವಾಗಿ ನೋಡುತ್ತೇವೆ ”ಎಂದು ಮೋದಿ 2013 ರಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಟ್ವೀಟ್ ಮಾಡಿದ್ದರು. ಏಳು ವರ್ಷಗಳ ನಂತರ ಗುರುವಾರ ತರೂರ್ ಅದನ್ನು ಮರು ಟ್ವೀಟ್ ಮಾಡಿದ್ದಾರೆ.

ಈಗ ಚೀನಾ ಮತ್ತು ಭಾರತದ ನಡುವೆ ತಾರಕ್ಕೆರಿರುವ ಬೆನ್ನಲ್ಲೇ ಎರಡು ಕಡೆ ಸೈನಿಕರು ಸಂಘರ್ಷದಲ್ಲಿ ತೊಡಗಿದ್ದಾರೆ ಇದರಿಂದಾಗಿ ಸುಮಾರು 20 ಭಾರತೀಯ ಸೈನಿಕರು ಮೃತಪಟ್ಟಿದ್ದಾರೆ. ಅಮೇರಿಕಾದ ಪ್ರಕಾರ ಸುಮಾರು 33 ಸೈನಿಕರು ಸಾವನ್ನಪ್ಪಿದ್ದಾರೆ. ಆದರೆ ಭಾರತ ಸೈನ್ಯವು  ಚೀನಾದ 43 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

1975 ರಿಂದ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅಕ್ಟೋಬರ್ ತಿಂಗಳಲ್ಲಿ ಅರುಣಾಚಲ ಪ್ರದೇಶದ ತುಲುಂಗ್ ಲಾ ಸೆಕ್ಟರ್‌ನಲ್ಲಿ ಭಾರತೀಯ ಗಸ್ತು ತಿರುಗಿ ನಾಲ್ಕು ಸೈನಿಕರನ್ನು ಹೊಡೆದುರುಳಿಸಿದ ನಂತರ ಇದು ಮೊದಲ ಬಾರಿಗೆ ಉಭಯ ತಂಡಗಳ ನಡುವಿನ ಘರ್ಷಣೆಯಾಗಿದೆ.

Trending News