ಆರ್ಜೆಡಿಯೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸಲು ಮುಂದಾದ ಶರದ್ ಯಾದವ್

ಶರದ್ ಯಾದವ್ ಅವರು ತಮ್ಮ ಪಕ್ಷ ಲೋಕತಾಂತ್ರಿಕ ಜನತಾ ದಳವನ್ನು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳದೊಂದಿಗೆ ಮಾರ್ಚ್ 20 ರಂದು ವಿಲೀನಗೊಳಿಸುವುದಾಗಿ ಘೋಷಿಸಿದರು.

Written by - Zee Kannada News Desk | Last Updated : Mar 16, 2022, 11:18 PM IST
  • ಶರದ್ ಯಾದವ್ ಅವರು ತಮ್ಮ ಪಕ್ಷ ಲೋಕತಾಂತ್ರಿಕ ಜನತಾ ದಳವನ್ನು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳದೊಂದಿಗೆ ಮಾರ್ಚ್ 20 ರಂದು ವಿಲೀನಗೊಳಿಸುವುದಾಗಿ ಘೋಷಿಸಿದರು.
ಆರ್ಜೆಡಿಯೊಂದಿಗೆ ತಮ್ಮ ಪಕ್ಷವನ್ನು ವಿಲೀನಗೊಳಿಸಲು ಮುಂದಾದ ಶರದ್ ಯಾದವ್  title=

ನವದೆಹಲಿ: ಶರದ್ ಯಾದವ್ ಅವರು ತಮ್ಮ ಪಕ್ಷ ಲೋಕತಾಂತ್ರಿಕ ಜನತಾ ದಳವನ್ನು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳದೊಂದಿಗೆ ಮಾರ್ಚ್ 20 ರಂದು ವಿಲೀನಗೊಳಿಸುವುದಾಗಿ ಘೋಷಿಸಿದರು.

ಇದನ್ನೂ ಓದಿ: ಬಿಜೆಪಿ ಪ್ರಜಾಪ್ರಭುತ್ವವನ್ನು ನಾಶಪಡಿಸಲು ಯತ್ನಿಸುತ್ತಿದೆ- ಮಮತಾ ಬ್ಯಾನರ್ಜೀ

ಬಿಜೆಪಿ ಸರ್ಕಾರ ವಿಫಲವಾಗಿದೆ ಮತ್ತು ಜನರು ಪ್ರಬಲ ಪ್ರತಿಪಕ್ಷವನ್ನು ಬಯಸುತ್ತಿದ್ದಾರೆ ಎಂದು 74 ವರ್ಷದ ಶರದ್ ಯಾದವ್ (Sharad Yadav) ಹೇಳಿಕೆಯಲ್ಲಿ ತಿಳಿಸಿದ್ದಾರೆ, "ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ದೃಷ್ಟಿಯಿಂದ ಚದುರಿದ ಜನತಾ ಪರಿವಾರವನ್ನು ಒಟ್ಟುಗೂಡಿಸುವ ನನ್ನ ನಿಯಮಿತ ಪ್ರಯತ್ನಗಳ ಉಪಕ್ರಮವಾಗಿ ಈ ಹೆಜ್ಜೆ ಅಗತ್ಯವಾಗಿದೆ" ಎಂದು ಅವರು ಹೇಳಿದ್ದಾರೆ.ಈ ವಿಲೀನವು ಮೂರು ದಶಕಗಳ ನಂತರ ಲಾಲು ಪ್ರಸಾದ್ ಅವರೊಂದಿಗೆ ಯಾದವ್ ಕೈಜೋಡಿಸುವುದನ್ನು ಸೂಚಿಸುತ್ತದೆ.

1989 ರಲ್ಲಿ ಲೋಕಸಭೆಯಲ್ಲಿ ಜನತಾ ದಳವು ಕೇವಲ143 ಸ್ಥಾನಗಳನ್ನು ಹೊಂದಿತ್ತು ಸಾಮಾಜಿಕ ನ್ಯಾಯದ ಕಾರ್ಯಸೂಚಿಯು ವರ್ಷಗಳಲ್ಲಿ ಪಕ್ಷದ ವಿಘಟನೆಯೊಂದಿಗೆ ಅದರ ವೇಗವನ್ನು ಕಳೆದುಕೊಂಡಿದೆ ಮತ್ತು ಇದನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ.ಬಲವಾದ ವಿರೋಧವನ್ನು ನಿರ್ಮಿಸಲು ಎಲ್ಲಾ ಸಮಾನ ಮನಸ್ಕ ಪಕ್ಷಗಳು ಒಗ್ಗೂಡುವುದು ಈ ಸಮಯದ ಅಗತ್ಯವಾಗಿದೆ ಎಂದು ಯಾದವ್ ಹೇಳಿದರು.

ಗಮನಾರ್ಹವಾಗಿ, ಶರದ್ ಯಾದವ್ ಅವರ ಮಗಳು 2020 ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ಟಿಕೆಟ್‌ನಲ್ಲಿ ಗೆಲ್ಲುವಲ್ಲಿ ವಿಫಲರಾಗಿದ್ದರು.

ಇದನ್ನೂ ಓದಿ:ಮೊದಲೇ ಭಾರತೀಯರನ್ನು ವಾಪಸ್ ಯಾಕೆ ಕರೆ ತರಲಿಲ್ಲ?- ಪ್ರಧಾನಿ ಮೋದಿ ವಿರುದ್ಧ ದೀದಿ ವಾಗ್ದಾಳಿ

1997 ರಲ್ಲಿ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಪ್ರಮುಖ ಆರೋಪಿಯಾಗಿದ್ದ ಮೇವು ಹಗರಣದ ವಿರುದ್ಧದ ತನಿಖೆ ತೀವ್ರಗೊಂಡಾಗ ಅದರ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯಗಳ ನಂತರ ಜನತಾ ದಳವನ್ನು ತೊರೆದರು. ಶರದ್ ಯಾದವ್ ಅವರು ಜನತಾ ದಳದಲ್ಲಿ ಲಾಲು ಯಾದವ್ ಅವರ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.ಶರದ್ ಯಾದವ್ ನಂತರ 2005 ರಲ್ಲಿ ಬಿಹಾರದಲ್ಲಿ ಆರ್ಜೆಡಿಯ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಲು ನಿತೀಶ್ ಕುಮಾರ್ ಕುಮಾರ್ ಜೊತೆ ಮೈತ್ರಿ ಮಾಡಿಕೊಂಡಿದ್ದರು.

ಏತನ್ಮಧ್ಯೆ, ದೆಹಲಿ ಹೈಕೋರ್ಟ್ ಮಂಗಳವಾರ ಜನತಾ ದಳ (ಸಂಯುಕ್ತ)( janata Dal (United)) ಮಾಜಿ ಅಧ್ಯಕ್ಷ ಶರದ್ ಯಾದವ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಆಕ್ರಮಿಸಿಕೊಂಡಿರುವ ಸರ್ಕಾರಿ ಬಂಗಲೆಯನ್ನು 15 ದಿನಗಳಲ್ಲಿ ಖಾಲಿ ಮಾಡುವಂತೆ ಆದೇಶಿಸಿದೆ, ಅವರು 2017 ರಲ್ಲಿ ರಾಜ್ಯಸಭಾ ಸಂಸದರಾಗಿ ಅನರ್ಹಗೊಂಡ ಕಾರಣ, ಸರ್ಕಾರಿ ಬಂಗಲೆಯಲ್ಲಿ ಉಳಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News