ನನ್ನ ಸೊಂಟದ ಮೇಲೆ ಕೈ ಹಾಕಿ, ಹಸ್ತಮೈಥುನ ಮಾಡಿಕೊಂಡ..! KSRTC ಬಸ್‌ನಲ್ಲಿ ನಟಿಗೆ ಲೈಂಗಿಕ ಕಿರುಕುಳ

Sexual Harassment on Malayalam Actress : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಟಿ ಹಾಗೂ ಮಾಡೆಲ್ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ರೋಪಗೊಂಡು ನಟಿ ದೂರಿದಾಗ ಬಸ್ಸಿನಿಂದ ಇಳಿದು ಓಡಿಹೋಗಲು ಯತ್ನಿಸಿದ ಯುವಕನನ್ನು ಬಸ್‌ ಕಂಡಕ್ಟರ್ ಮತ್ತು ಡ್ರೈವರ್ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 

Written by - Krishna N K | Last Updated : May 17, 2023, 07:47 PM IST
  • ನಟಿ ಹಾಗೂ ರೂಪದರ್ಶಿ ಒಬ್ಬರು ತಾವು ಬಸ್‌ನಲ್ಲಿ ಎದುರಿಸಿದ ಸಂಕಷ್ಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
  • ಎರಡು ಸೆಕೆಂಡುಗಳ ನಂತರ ಅವನ ಕೈ ನನ್ನ ಸೊಂಟವನ್ನು ಉಜ್ಜುತ್ತಿರುವಂತೆ ನನಗೆ ಅನಿಸಿತು.
  • ನಾನು ಸರಿಯಾಗಿ ನೋಡಿದಾಗ ಅವನು ತನ್ನ ಕೈಯಿಂದ ನನ್ನ ಸೋಂಟವನ್ನು ಉಜ್ಜುತ್ತಿದ್ದ. ಇನ್ನೊಂದು ಕೈ ಅವನ ಖಾಸಗಿ ಅಂಗವನ್ನು ಉಜ್ಜಿಕೊಳ್ಳುತ್ತಿದ್ದ.
ನನ್ನ ಸೊಂಟದ ಮೇಲೆ ಕೈ ಹಾಕಿ, ಹಸ್ತಮೈಥುನ ಮಾಡಿಕೊಂಡ..! KSRTC ಬಸ್‌ನಲ್ಲಿ ನಟಿಗೆ ಲೈಂಗಿಕ ಕಿರುಕುಳ title=

Sexual abuse on Malayalam Actress : ಕೇರಳ ಮೂಲದ ನಟಿ ಹಾಗೂ ರೂಪದರ್ಶಿ ಒಬ್ಬರು ತಾವು ಬಸ್‌ನಲ್ಲಿ ಎದುರಿಸಿದ ಸಂಕಷ್ಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆ, ಮಂಗಳವಾರ, ಮೇ 16 ರಂದು, ತ್ರಿಶೂರ್‌ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದಾಗ,  ಕೊಚ್ಚಿ ವಿಮಾನ ನಿಲ್ದಾಣಕ್ಕೂ ಮೊದಲು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ನಟಿ ತಿಳಿಸಿದ್ದಾರೆ.

ಈ ಕುರಿತು ವಿಡಿಯೋ ಮೂಲಕ ಲೈಂಗಿಕ ದೌರ್ಜನ್ಯದ ಕುರಿತು ಹೇಳಿಕೊಂಡಿದ್ದಾರೆ. ವಿಡಿಯೋದಲ್ಲಿ... ನಿನ್ನೆ ನಾನು ತ್ರಿಶೂರ್‌ನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದೆ. 8 ಗಂಟೆಗೆ KSRTC ಬಸ್ ಹತ್ತಿದೆ. ಬಸ್ಸಿನಲ್ಲಿ ಕುಳಿತಿದ್ದೆ ನಿದ್ದೆ ಮಾಡುತ್ತಿದ್ದೆ. ನಾನು ಅಂಗಮಾಲಿ ತಲುಪಿದಾಗ ಒಬ್ಬ ವ್ಯಕ್ತಿ ಬಂದು ನನ್ನ ಪಕ್ಕದಲ್ಲಿ ಕುಳಿತ. ಆಗ ನನಗೆ ಎಚ್ಚರವಾಯಿತು. ನನ್ನ ಹಾಗೂ ಇನ್ನೊಂದು ಯುವತಿಯ ಮಧ್ಯದಲ್ಲಿ ಅವನು ಕುಳಿತಿದ್ದ. ನಾನು ಕಿಟಕಿಯ ಬಳಿ ಕುಳಿತಿದ್ದೆ. 

ಇದನ್ನೂ ಓದಿ: Best Selling Cars: ಏಪ್ರಿಲ್ ತಿಂಗಳಿನಲ್ಲಿ ಅತಿಹೆಚ್ಚು ಮಾರಾಟವಾದ ಕಾರುಗಳು!

ಅವನು ನೋಡಲು ಡಿಸೆಂಟ್‌ ಆಗಿ ಕಾಣುತ್ತಿದ್ದ. ನನ್ನ ಜೊತೆ ಮಾತನಾಡಿದ ಅವನು ಕೇಳಿದ ಎಲ್ಲದಕ್ಕೂ ನಾನು ಉತ್ತರಿಸಿದೆ. ಎರಡು ಸೆಕೆಂಡುಗಳ ನಂತರ ಅವನ ಕೈ ನನ್ನ ಸೊಂಟವನ್ನು ಉಜ್ಜುತ್ತಿರುವಂತೆ ನನಗೆ ಅನಿಸಿತು. ನಾನು ಸರಿಯಾಗಿ ನೋಡಿದಾಗ ಅವನು ತನ್ನ ಕೈಯಿಂದ ನನ್ನ ಸೋಂಟವನ್ನು ಉಜ್ಜುತ್ತಿದ್ದ. ಇನ್ನೊಂದು ಕೈ ಅವನ ಖಾಸಗಿ ಅಂಗವನ್ನು ಉಜ್ಜಿಕೊಳ್ಳುತ್ತಿದ್ದನ್ನು ನಾನು ಗಮನಿಸಿದೆ. ನನಗೆ ತುಂಬಾ ಕಷ್ಟ ಅನಿಸಿತು. ಆಗ ನಾನು ಬಸ್ಸಿನ ಕಿಟಕಿ ಮೇಲಕ್ಕೆತ್ತಿ ನೋಡಿ ಅವನಿಂದ ದೂರ ಸರಿದೆ. ಮೌನವಾಗಿ ಕುಳಿತೆ. ಸ್ವಲ್ಪ ಸಮಯದ ನಂತರ ಅವನು ತನ್ನ ಪ್ಯಾಂಟ್‌ ಜಿಪ್ ಬಿಚ್ಚಿ ತನ್ನ ಖಾಸಗಿ ಅಂಗಗಳನ್ನು ಹೊರತೆಗೆದು ಹಸ್ತಮೈಥುನ ಮಾಡಿಕೊಂಡದ್ದನ್ನು ನಾನು ಗಮನಿಸಿದೆ.

ಏನು ಮಾಡಬೇಕೆಂದು ತಿಳಿಯದೆ, ಬೇಗನೆ ನನ್ನ ಫೋನ್ ತೆಗೆದುಕೊಂಡು ವೀಡಿಯೊವನ್ನು ಮಾಡಿದೆ. ನಂತರ ನಿಮ್ಮ ಸಮಸ್ಯೆ ಏನು ಅಂತ ಕೇಳಿದೆ. ಏನೂ ತಿಳಿಯದವರಂತೆ ಏನಾಯ್ತು ಎಂದು ಜಿಪ್ ಎಳೆದುಕೊಂಡು ಬಸ್‌ ನಿಂದ ಜಿಗಿದು ಇಳಿಯಲು ಯತ್ನಿಸಿದ. ಆಗ ನಾನು ಗಲಾಟೆ ಮಾಡಿ ಘಟನೆಯ ಬಗ್ಗೆ ಕಂಡಕ್ಟರ್‌ಗೆ ಹೇಳಿದೆ. ಅದೇ ಸಮಯಕ್ಕೆ ಬಸ್ ವಿಮಾನ ನಿಲ್ದಾಣದ ಬಳಿ ನಿಂತಿತು. ಅವನು ಬಾಗಿಲು ತೆರೆದು ಓಡಿಹೋದನು. 

ಇದನ್ನೂ ಓದಿ: ಬಂಗಾಳದ ಅಕ್ರಮ ಪಟಾಕಿ ಘಟಕದಲ್ಲಿ ಭಾರೀ ಸ್ಫೋಟ: ಐವರು ಸಾವು, 7 ಮಂದಿಗೆ ಗಾಯ

ಕಂಡಕ್ಟರ್ ಮತ್ತು ಚಾಲಕ ಆತನನ್ನು ಹಿಡಿದರು, ಅಷ್ಟರಲ್ಲಿ ಪೊಲೀಸರು ಬಂದರು. ಬಸ್ಸಿನಲ್ಲಿ ಕಾನೂನು ವಿದ್ಯಾರ್ಥಿನಿ ಇದ್ದಳು, ಆಕೆ ನನಗೆ ಬೆಂಬಲ ನೀಡಿದಳು. ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದೇವೆ. ಬಸ್ ಕಂಡಕ್ಟರ್ ತುಂಬಾ ಸಹಾಯ ಮಾಡಿದರು ಎಂದು ತಮಗಾದ ನೋವನ್ನು ಹೇಳಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News