ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಗ್ಗೆ ಪ್ರಕಾಶ್ ರೈ ಟೀಕೆ

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯೋ or ದೇವಸ್ಥಾನದ ಪೂಜಾರಿಯೋ?

Last Updated : Oct 2, 2017, 06:31 PM IST
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಗ್ಗೆ ಪ್ರಕಾಶ್ ರೈ ಟೀಕೆ title=

ಬೆಂಗಳೂರು: ಡಿವೈಎಫ್‌ಐ 11ನೇ ರಾಜ್ಯ ಸಮ್ಮೇಳನದಲ್ಲಿ ಭಾಷಣದ ವೇಳೆ ನಟ, ನಿರ್ದೇಶಕ ಪ್ರಕಾಶ್ ರೈ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬಗ್ಗೆ ಮಾಡಿರುವ ಟೀಕೆ ಈಗ ಸಾಮಾಜಿಕಜಾಲ ತಾಣದಲ್ಲಿ ವೈರಲ್ ಆಗುತ್ತಿದೆ. 

ಪ್ರಕಾಶ್ ರೈ ಭಾಷಣ ಮಾತನಾಡುತ್ತಾ ಉತ್ತರಪ್ರದೇಶದಲ್ಲಿ ಚೀಫ್‌ಮಿನಿಸ್ಟ್ರಾ OR ದೇವಸ್ಥಾನದ ಪೂಜಾರಿನಾ? ಎಂದು ಹೇಳಿರುವ ವಿಡಿಯೋ ಈಗ ವೈರಲ್ ಆಗಿದೆ. ಆ ಭಾಷಣದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಚೀಫ್ ಮಿನಿಸ್ತ್ರಾ ಅಥವಾ ದೇವಸ್ಥಾನದ ಪೂಜಾರಿನಾ ಎಂದು ಟೀಕಿಸಿದ್ದಾರೆ. ಅಲ್ಲದೆ ಯೋಗಿ ಆದಿತ್ಯನಾಥ್ ಡಬಲ್ ರೋಲ್ ಮಾಡುತ್ತಿದ್ದಾರಾ ಗೊತ್ತಾಗ್ತಿಲ್ಲ. 

ನನ್ನ ನಟನಾ ವೃತ್ತಿ ಮೆಚ್ಚಿ ನನಗೆ ಒಂದೈದು ರಾಷ್ಟ್ರಪ್ರಶಸ್ತಿ ಕೊಟ್ಟಿದ್ದಾರೆ, ಯೋಗಿಆದಿತ್ಯನಾಥ್ ಅವರಿಗೆ ಎಲ್ಲಾ ಪ್ರಶಸ್ತಿ ಕೊಡೋಣ ಅಂತಿದ್ದೀನಿ, ನನಗಿಂತಾ ದೊಡ್ಡ ನಟರು ಅವರು ಎಂದು ಸಿಎಂ ಯೋಗಿಗೆ ಎಂದು ರೈ ವ್ಯಂಗ್ಯ ಮಾಡಿದ್ದಾರೆ.

Trending News