ಪೂಂಚ್‌ನ ಶಹಪುರ, ಕೆರ್ನಿ ವಲಯಗಳಲ್ಲಿ ಕದನವಿರಾಮ ಉಲ್ಲಂಘಿಸಿದ ಪಾಕ್

ಗಡಿ ನಿಯಂತ್ರಣ ರೇಖೆ ಬಳಿಯ ಗುಂಡಿನ ದಾಳಿಗೆ ಭಾರತೀಯ ಸೇನೆಯಿಂದ ಪ್ರತೀಕಾರ ತೀರಿಸಲಾಗುತ್ತಿದೆ. ಈವರೆಗೂ ಯಾವುದೇ ಗಾಯ ಅಥವಾ ಹಾನಿಯ ಬಗ್ಗೆ ವರದಿಯಾಗಿಲ್ಲ.  

Last Updated : Oct 15, 2019, 10:58 AM IST
ಪೂಂಚ್‌ನ ಶಹಪುರ, ಕೆರ್ನಿ ವಲಯಗಳಲ್ಲಿ ಕದನವಿರಾಮ ಉಲ್ಲಂಘಿಸಿದ ಪಾಕ್ title=
File image

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ ಉದ್ದಕ್ಕೂ ಶಾಪುರ, ಕೆರ್ನಿ ಮತ್ತು ಮಾಲ್ಟಿ ವಲಯಗಳಲ್ಲಿ ಅ ಪ್ರಚೋದಿತ ಗುಂಡು ಹಾರಿಸುವ ಮೂಲಕ ಪಾಕಿಸ್ತಾನ ಸೇನೆಯು ಮಂಗಳವಾರ ಕದನ ವಿರಾಮವನ್ನು ಉಲ್ಲಂಘಿಸಿದೆ.

ಗಡಿ ನಿಯಂತ್ರಣ ರೇಖೆ ಬಳಿಯ ಗುಂಡಿನ ದಾಳಿಗೆ ಭಾರತೀಯ ಸೇನೆಯಿಂದ ಪ್ರತೀಕಾರ ತೀರಿಸಲಾಗುತ್ತಿದೆ. ಈವರೆಗೂ ಯಾವುದೇ ಗಾಯ ಅಥವಾ ಹಾನಿಯ ಬಗ್ಗೆ ವರದಿಯಾಗಿಲ್ಲ.

ಸೋಮವಾರ ಸಂಜೆ ಭಯೋತ್ಪಾದಕರು ಶೋಪಿಯಾನ್ ಜಿಲ್ಲೆಯಲ್ಲಿ ಸೇಬುಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಗುಂಡಿಕ್ಕಿ ಕೊಂದ ಕೆಲವೇ ಗಂಟೆಗಳ ನಂತರ ಈ ಘಟನೆ ಸಂಭವಿಸಿದೆ. ಭಯೋತ್ಪಾದಕರು ಚಾಲಕ ಷರೀಫ್ ಖಾನ್‌ನನ್ನು ಕೊಂದು, ಬಳಿಕ ಹಣ್ಣಿನ ಮಾಲೀಕರನ್ನು ಹೊಡೆದು ರಾಜಸ್ಥಾನದ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಟ್ರಕ್‌ಗೆ ಬೆಂಕಿ ಹಚ್ಚಿದರು. ಘಟನೆಯಲ್ಲಿ ಭಾಗಿಯಾದ ಭಯೋತ್ಪಾದಕರಲ್ಲಿ ಒಬ್ಬರು ಪಾಕಿಸ್ತಾನಿ ನಾಗರೀಕ ಎಂದು ಮೂಲಗಳು ತಿಳಿಸಿವೆ. ಭದ್ರತಾ ಪಡೆಗಳು ಭಯೋತ್ಪಾದಕರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

ಕಾಶ್ಮೀರದ 10 ಜಿಲ್ಲೆಗಳಲ್ಲಿ ಪೋಸ್ಟ್‌ಪೇಯ್ಡ್ ಮೊಬೈಲ್ ಸೇವೆಗಳನ್ನು ಸರ್ಕಾರ ಮರುಸ್ಥಾಪಿಸಿದ ಕೆಲವೇ ಗಂಟೆಗಳ ನಂತರ ಭಯೋತ್ಪಾದಕರು ಈ ದಾಳಿಯನ್ನು ಪ್ರಾರಂಭಿಸಿದರು.

ಇದಕ್ಕೂ ಮೊದಲು ಅಕ್ಟೋಬರ್ 15 ರಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗಂಡರ್‌ಬಾಲ್ ಜಿಲ್ಲೆಯ ನಾರನಾಗ್ ಪ್ರದೇಶದ ಇಬ್ಬರು ಭಯೋತ್ಪಾದಕ ಸಹಚರರನ್ನು ಸೋಮವಾರ ಬಂಧಿಸಿದ್ದರು. ಜಂಡಿವಾಡಾ ರಾಜೌರಿಯ ನಿವಾಸಿಗಳಾದ ಚಂಡಿ ಖತಾನಾ ಮತ್ತು ವಾಜಿದ್ ಅಲಿ ಖತಾನಾ ಎಂದು ಗುರುತಿಸಲ್ಪಟ್ಟ ಇಬ್ಬರು ಭಯೋತ್ಪಾದಕ ಸಹಚರರನ್ನು ಭದ್ರತಾ ಪಡೆಗಳೊಂದಿಗೆ ಗ್ಯಾಂಡರ್‌ಬಲ್ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ಜೀ ಮೀಡಿಯಾಕ್ಕೆ ತಿಳಿಸಿವೆ.

ಪೊಲೀಸ್ ದಾಖಲೆಗಳ ಪ್ರಕಾರ, ಚಾಂಡಿ ಮತ್ತು ವಾಜಿದ್ ಇಬ್ಬರೂ ನಿಷೇಧಿತ ಭಯೋತ್ಪಾದಕ ಸಂಘಟನೆಯ ಹಿಜ್ಬುಲ್ ಮುಜಾಹಿದ್ದೀನ್ ಸದಸ್ಯರಾಗಿದ್ದರು ಮತ್ತು ಸಕ್ರಿಯ ಭಯೋತ್ಪಾದಕರಿಗೆ ಕೊರಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಭಯೋತ್ಪಾದಕರಿಗೆ ಲಾಜಿಸ್ಟಿಕ್ಸ್ ಸರಬರಾಜು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಾಗಿಸುವುದು ಮತ್ತು ಈ ಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಕ್ರಿಯ ಭಯೋತ್ಪಾದಕರಿಗೆ ಮಾರ್ಗದರ್ಶನ ನೀಡುವ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

ರಕ್ಷಣಾ ಮೂಲಗಳ ಪ್ರಕಾರ, ಅಕ್ಟೋಬರ್ 2 ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ 2,225 ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಅಂದರೆ ಈ ಅವಧಿಯಲ್ಲಿ ಸರಾಸರಿ ಎಂಟು ಬಾರಿ ಕದನ ವಿರಾಮವನ್ನು ಉಲ್ಲಂಘಿಸಿದೆ. ಇದಕ್ಕೆ ಹೋಲಿಸಿದರೆ, 2018 ರ ಸಂಪೂರ್ಣ ಕ್ಯಾಲೆಂಡರ್ ವರ್ಷದಲ್ಲಿ ಪಾಕಿಸ್ತಾನದ ಒಟ್ಟು ಕದನ ವಿರಾಮ ಉಲ್ಲಂಘನೆಗಳ ಸಂಖ್ಯೆ 1,629 ಆಗಿದೆ.

"ಫೆಬ್ರವರಿಯಲ್ಲಿ ಬಾಲಕೋಟ್ ವೈಮಾನಿಕ ದಾಳಿಯ ನಂತರ ಪಾಕಿಸ್ತಾನವು ಈ ವರ್ಷ ಕದನ ವಿರಾಮ ಉಲ್ಲಂಘನೆಯನ್ನು ಹೆಚ್ಚಿಸಿತು ಮತ್ತು ತರುವಾಯ ಆಗಸ್ಟ್ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ನಂತರ ಇದು ಇನ್ನೂ ಹೆಚ್ಚಾಗಿದೆ" ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯ ಕದನ ವಿರಾಮ ಉಲ್ಲಂಘನೆಯು ಭಯೋತ್ಪಾದಕರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ತಳ್ಳುವ ಪ್ರಯತ್ನಗಳಿಗೆ ಸಂಬಂಧಿಸಿದೆ ಎಂದು ಅಧಿಕಾರಿ ಹೇಳಿದರು.

2018 ರಲ್ಲಿ 254 ಮತ್ತು 2017 ರಲ್ಲಿ 213 ಕ್ಕೆ ಹೋಲಿಸಿದರೆ ಸೇನೆಯು ಈ ವರ್ಷ ಅಕ್ಟೋಬರ್ 2 ರವರೆಗೆ 140 ಉಗ್ರರನ್ನು ತಟಸ್ಥಗೊಳಿಸಿದೆ.

Trending News