West Bengal: 'ಪ್ರತಿಪಕ್ಷಗಳ ಮುಖಂಡರಿಗೆ ಬೆತ್ತದಿಂದ ಹೊಡೆಯಲಾಗುವುದು...', ಟಿಎಂಸಿ ಸಂಸದೆಯ ಹೇಳಿಕೆಯಿಂದ....!

TMC Vs BJP-Congress: ಪಂಚಾಯಿತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ನಾಯಕರಿಗೆ ಬಿದಿರಿನ ಕೋಲಿನಿಂದ ಹೊಡೆಯಲಾಗುವುದು ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ನುಸ್ರತ್ ಜಹಾನ್ ಹೇಳಿದ್ದಾರೆ. ನುಸ್ರತ್ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಈ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ರಾಜಕೀಯ ಪಕ್ಷಗಳು ತೀವ್ರ ತಿರುಗೇಟು ನೀಡಿವೆ.  

Written by - Nitin Tabib | Last Updated : May 22, 2023, 10:07 PM IST
  • ಇನ್ನೂ ಮುಂದಕ್ಕೆ ಹೊಡಿ ಮಾತನಾಡಿರುವ ನುಸ್ರತ್, 'ಇವರು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ತಡೆಯಲು ಕುತಂತ್ರ ಮಾಡುತ್ತಿದ್ದಾರೆ.
  • ಅವರು 100 ದಿನಗಳ ಖಾತರಿಯ ಕ್ರಿಯಾ ಯೋಜನೆಗೆ ಹಣವನ್ನು ತಡೆಹಿಡಿದಿದ್ದಾರೆ.
  • ಅವರ ಕಡೆಯಿಂದ ಬಂಗಾಳಕ್ಕೆ ಏನೂ ಬರುವುದಿಲ್ಲ. ಹಾಗಾದರೆ ಬಂಗಾಳದ ಜನರು ತಮಗೆ ಮತ ಹಾಕುತ್ತಾರೆ ಎಂದು ಅವರು ಏಕೆ ಭಾವಿಸುತ್ತಾರೆ.
West Bengal: 'ಪ್ರತಿಪಕ್ಷಗಳ ಮುಖಂಡರಿಗೆ ಬೆತ್ತದಿಂದ ಹೊಡೆಯಲಾಗುವುದು...', ಟಿಎಂಸಿ ಸಂಸದೆಯ ಹೇಳಿಕೆಯಿಂದ....! title=

Nusrat Jahan Controversial Statement: ಪಶ್ಚಿಮ ಬಂಗಾಳದ ಬಸಿರ್‌ಹತ್‌ನ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಅವರ ವಿವಾದಾತ್ಮಕ ಹೇಳಿಕೆಯ ನಂತರ ಪಶ್ಚಿಮ ಬಾಗಾಲದಲ್ಲಿ ಭಾರಿ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ಪಂಚಾಯಿತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ನಾಯಕರಿಗೆ ಬಿದಿರಿನ ಕೋಲಿನಿಂದ ಹೊಡೆಯಲಾಗುವುದು ಎಂದು ನುಸ್ರತ್ ಹೇಳಿದ್ದಾರೆ. ನುಸ್ರತ್ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ರಾಜಕೀಯ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ವಾಸ್ತವದಲಿ, ಬಸಿರ್‌ಹತ್‌ನಲ್ಲಿ, ಸಿಎಂ ಮಮತಾ ಬ್ಯಾನರ್ಜಿ ಅವರ ಪಕ್ಷದ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಪ್ರತಿಪಕ್ಷ ಬಿಜೆಪಿ-ಕಾಂಗ್ರೆಸ್ ಅನ್ನು ತೀವ್ರವಾಗಿ ಗುರಿಯಾಗಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ಇಂದು ಅವರು ಏನು ಸಂಚು ಮಾಡುತ್ತಿದ್ದಾರೆ ನೋಡಿ. ಅವರು ಜನರ ವಿರುದ್ಧ ಅನೇಕ ಕೆಲಸಗಳನ್ನು ಮಾಡಲು ಪ್ರಯತ್ನಿಸಿದರು. ಜನರನ್ನು ಬೆದರಿಸಲು ಯತ್ನಿಸಿದರು. ಧರ್ಮದ ಗೊಂದಲ ಸೃಷ್ಟಿಸಿದರು. ಆದರೆ ಯಾವುದೂ ಕೆಲಸ ಮಾಡಲಿಲ್ಲ. 2021 ರಲ್ಲಿ ಅವರು 200 ಸ್ಥಾನಗಳನ್ನು ದಾಟುವ ಘೋಷಣೆಯನ್ನು ನೀಡಿದರು. ಆದರೆ ಅವರು ವಿಫಲರಾದರು ಮತ್ತು ಅವರ ದೋಣಿ ಮುಳುಗಿತು. ಇದೀಗ ಅವರು ದೊಡ್ಡ ಸಂಚು ರೂಪಿಸುತ್ತಿದ್ದಾರೆ. ಅವರು ಬಂಗಾಳದ ಜನರ ಹಣವನ್ನು ನಿಲ್ಲಿಸಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ-General Elections 2024: ಪ್ರತಿಪಕ್ಷಗಳ ಒಕ್ಕೂಟ ರಚನೆಗೆ ಮುಂದುವರೆದ ಕಸರತ್ತು, ದೆಹಲಿಯಲ್ಲಿ ಖರ್ಗೆ ನಿವಾಸಕ್ಕೆ ತಲುಪಿದ ನಿತೀಶ್

'ಬಂಗಾಳದ ಹಣ ಸ್ಥಗಿತಗೊಂಡಿದೆ'
ಇನ್ನೂ ಮುಂದಕ್ಕೆ ಹೊಡಿ ಮಾತನಾಡಿರುವ ನುಸ್ರತ್, 'ಇವರು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ತಡೆಯಲು ಕುತಂತ್ರ ಮಾಡುತ್ತಿದ್ದಾರೆ. ಅವರು 100 ದಿನಗಳ ಖಾತರಿಯ ಕ್ರಿಯಾ ಯೋಜನೆಗೆ ಹಣವನ್ನು ತಡೆಹಿಡಿದಿದ್ದಾರೆ. ಅವರ ಕಡೆಯಿಂದ ಬಂಗಾಳಕ್ಕೆ ಏನೂ ಬರುವುದಿಲ್ಲ. ಹಾಗಾದರೆ ಬಂಗಾಳದ ಜನರು ತಮಗೆ ಮತ ಹಾಕುತ್ತಾರೆ ಎಂದು ಅವರು ಏಕೆ ಭಾವಿಸುತ್ತಾರೆ. ಅವರಿಗಾಗಿ ಏನು ಮಾಡಿದ್ದೀರಿ. ನಿಮಗೆ ಒಂದೇ ಒಂದು ಮತವೂ ಬರುವುದಿಲ್ಲ. ಪಂಚರಾಜ್ಯಗಳ ಚುನಾವಣೆಯಲ್ಲಿ ಯಾರೇ ಇಲ್ಲಿಗೆ ಮತ ಕೇಳಲು ಬಂದರೂ ಕಾಂಗ್ರೆಸ್ ಅಥವಾ ಬಿಜೆಪಿಯವರೇ ಆಗಿರಲಿ, ಅವರನ್ನು ಜನರು ಬಿದಿರಿನ ಕೋಲಿನಿಂದ ಹೊಡೆಯಲಿದ್ದಾರೆ' ಎಂದಿದ್ದಾರೆ ,

ಇದನ್ನೂ ಓದಿ-Manipur Clash: ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಎರಡು ಸಮುದಾಯಗಳ ಮಧ್ಯೆ ಭಾರಿ ಘರ್ಷಣೆ

ಮಮತಾ ಬ್ಯಾನರ್ಜಿ ಅವರ ಸೋದರಳಿಯ ಮತ್ತು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಕಾರ್ಯಕ್ರಮದ ತಯಾರಿಗಾಗಿ ನುಸ್ರತ್ ಜಹಾನ್ ಅವರು ಬಸಿರ್ಹತ್‌ನಲ್ಲಿ ಮಾತನಾಡುತ್ತಿದ್ದ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು. ಮುಂದಿನ ದಿನಗಳಲ್ಲಿ ಅವರ ಕಾರ್ಯಕ್ರಮ ನಡೆಯಲಿದೆ. ಆದರೆ ನುಸ್ರತ್ ಜಹಾನ್ ಹೇಳಿಕೆ ಬಳಿಕ ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಟಿಎಂಸಿ ಸಂಸದರ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News