ದಲಿತನ ಮೇಲೆ ಮಲ ಎರೆಚಿಕೆ; ದಿನೇ ದಿನೇ ಹೆಚುತ್ತಿರುವ ಶೋಷಣೆ... ಕಣ್ಮುಚ್ಚಿ ಕುಳಿತ ಸರ್ಕಾರ..!

Exploitation Of Dalits: ದಲಿತರ ಮೇಲೆ ದಿನೇ ದಿನೇ ನಾನಾ ರೀತಿಯಲ್ಲಿ ಶೋಷಣೆಗಳು  ನಡೆಯುತ್ತಿವೆ. ಇತ್ತಿಚೇಗಷ್ಟೆ ದಲಿತ ಯುವಕರಿಗೆ ಚಪ್ಪಲಿಹಾರ ಹಾಕಿ, ಮಲ ತಿನ್ನಿಸಿದ ಹೀನ ಕೃತ್ಯ ಮಧ್ಯಪ್ರದೇಶ ಶಿವಪುರಿಯಲ್ಲಿ ನಡೆದಿತ್ತು. ಇದೀಗ ಅದೇ ರಾಜ್ಯದಲ್ಲಿ ದಲಿತ ಯುವಕನೊಬ್ಬನಿಗೆ ಮೇಲೆ ಮಲ ಎರೆಚಿರುವ ಘಟನೆ ಸಂಭವಿಸಿದೆ. 

Written by - Zee Kannada News Desk | Last Updated : Jul 24, 2023, 01:43 PM IST
  • ದಿನೇ ದಿನೇ ಹೆಚುತ್ತಿರುವ ದಲಿತರ ಶೋಷಣೆ
  • ಆಕಸ್ಮಿಕ ಮೈ ಮುಟ್ಟಿದ್ದಕ್ಕೆ ದಲಿತನ ಮೇಲೆ ಮಲ ಎರೆಚಿದ ಒಬಿಸಿ ಕಮ್ಯೂನಿಟಿ ಯುವಕ
  • ದಲಿತರ ಶೋಷಣೆ ಪ್ರಕರಣ ಬೆಳಕಿಗೆ ಬಂದರೂ ಕಣ್ಮುಚ್ಚಿ ಕುಳಿತ ಸರ್ಕಾರ
 ದಲಿತನ ಮೇಲೆ ಮಲ ಎರೆಚಿಕೆ; ದಿನೇ ದಿನೇ ಹೆಚುತ್ತಿರುವ  ಶೋಷಣೆ... ಕಣ್ಮುಚ್ಚಿ ಕುಳಿತ ಸರ್ಕಾರ..! title=

ಮಧ್ಯಪ್ರದೇಶ: ದಲಿತರ ಮೇಲೆ ದಿನೇ ದಿನೇ ನಾನಾ ರೀತಿಯಲ್ಲಿ ಶೋಷಣೆಗಳು  ನಡೆಯುತ್ತಿವೆ. ಇತ್ತಿಚೇಗಷ್ಟೆ ದಲಿತ ಯುವಕರಿಗೆ ಚಪ್ಪಲಿಹಾರ ಹಾಕಿ, ಮಲ ತಿನ್ನಿಸಿದ ಹೀನ ಕೃತ್ಯ ಮಧ್ಯಪ್ರದೇಶ ಶಿವಪುರಿಯಲ್ಲಿ ನಡೆದಿತ್ತು.

ಹಾಗೆ ಸಂಸದ ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಯುವಕನ ಮೇಲೆ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆ, ಇದೀಗ ಅದೇ ರಾಜ್ಯದ ಛತ್ತರ್‌ಪುರ ಜಿಲ್ಲೆಯಲ್ಲಿ ದಲಿತ ಯುವಕನೊಬ್ಬನಿಗೆ ಮೇಲೆ ಮಲ ಎರೆಚಿರುವ ಮತ್ತೊಂದು ಘಟನೆ ಸಂಭವಿಸಿದೆ. 

ಛತ್ತರ್‌ಪುರ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಮೀ ದೂರದಲ್ಲಿರುವ ಬಿಕೌರಾ ಗ್ರಾಮದಲ್ಲಿ ಪಂಚಾಯತ್‌ಗೆ ವತಿಯಿಂದ ಚರಂಡಿ ನಿರ್ಮಾಣ ಮಾಡುವ ವೇಳೆ  ಆರೋಪಿ ರಾಮಕೃಪಾಲ್ ಪಟೇಲ್ ಹಾಗೂ ಅಹಿರ್ವಾರ್ ಮತ್ತು ಇತರ ಕೆಲಸಗಾರರೊಂದಿಗೆ ಚರಂಡಿ ನಿರ್ಮಾಣ ವೇಳೆ ತಮಾಷೆಗಾಗಿ ಗ್ರೀಸ್ ನ್ನು ದಲಿತ  ಪುರುಷ ಅಹಿರ್ವಾರ್  ರಾಮಕೃಪಾಲ್ ಮೇಲೆ ಹಾಕಿದ್ದಾನೆ.

ಇದನ್ನೂ ಓದಿ: ಇನ್ನ್ಮುಂದೆ ಲೈಂಗಿಕ ಕ್ರಿಯೆಗೆ ಪುರುಷ-ಮಹಿಳೆಯರೇ ಬೇಡ, ಅದಕ್ಕೂ ಬಂತು ರೋಬೋಟ್!

ಇದರಿಂದ ಕೋಪಗೊಂಡ ಆರೋಪಿ ರಾಮಕೃಪಾಲ್  ಮಾನವ ಮಲವನ್ನು ಬಳಿದಿದ್ದಾರೆಂದು ದೂರು ನೀಡಿದ್ದಾನೆ. ಮೇಲ್ವರ್ಗದ ವ್ಯಕ್ತಿ ಸ್ಪರ್ಶಿಸಿದಕ್ಕಾಗಿ ದಲಿತ  ಪುರುಷ ಅಹಿರ್ವಾರ್ ಗೆ 600 ರೂಪಾಯಿ ದಂಡವನ್ನು ಪಂಚಾಯಿತಿ ವಿಧಿಸಿದೆ, ಎಂದು ಅಹಿರ್ವಾರ್ ಆರೋಪಿಸಿದ್ದಾರೆ.

ಇನ್ನು ಘಟನೆ ಸಂಬಂಧ, ಆರೋಪಿ"ರಾಮಕೃಪಾಲ್ ಪಟೇಲ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು ಅಥವಾ ಸಾರ್ವಜನಿಕ ಪದಗಳಿಗೆ ಶಿಕ್ಷೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಪೊಲೀಸ್ ಉಪವಿಭಾಗಾಧಿಕಾರಿ ಸಿಂಗ್ ಮನ್ಮೋಹನ್ ಮಾಹಿತಿ ನೀಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News