ಕೇರಳ : ಬಿಸಿಲಿನ ತಾಪಕ್ಕೆ 90 ವರ್ಷದ ಮಹಿಳೆ ಸಾವು, ಮೂರು ಜಿಲ್ಲೆಗಳಿಗೆ ಐಎಂಡಿ ಎಚ್ಚರಿಕೆ

Kerala : ಕೇರಳದಲ್ಲಿ ಬಿಸಿಲಿನ ಶಾಖಕ್ಕೆ  90 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಏಪ್ರಿಲ್ 29 ಕೇರಳದ ಮೂರು ಜಿಲ್ಲೆಗಳಲ್ಲಿ ಬಿಸಿಗಾಳಿ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ  ನೀಡಿದೆ. 

Written by - Zee Kannada News Desk | Last Updated : Apr 28, 2024, 08:53 PM IST
  • ಏಪ್ರಿಲ್ 28 ರ ಭಾನುವಾರದಂದು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು
  • ವರದಿ ಪ್ರಕಾರ ಅಧಿಕ ತೀವ್ರತೆಯ ಬಿಸಿಗಾಳಿಯ ಪರಿಣಾಮದಿಂದ ಸಾವನ್ನಪ್ಪಿರುವುದು ಎಂದು ತಿಳಿದು ಬಂದಿದೆ.
  • ಏಪ್ರಿಲ್ 29 ರಂದು ಬಿಸಿಗಾಳಿಯನ್ನು ಮುನ್ಸೂಚಿಸಿದೆ.
ಕೇರಳ : ಬಿಸಿಲಿನ ತಾಪಕ್ಕೆ 90 ವರ್ಷದ ಮಹಿಳೆ ಸಾವು, ಮೂರು ಜಿಲ್ಲೆಗಳಿಗೆ ಐಎಂಡಿ ಎಚ್ಚರಿಕೆ  title=

IMD : ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಏಪ್ರಿಲ್ 27ರಂದು  ಶನಿವಾರ  90 ವರ್ಷದ ಮಹಿಳೆಯೊಬ್ಬರು  ಸೂರ್ಯನ ಬಿಸಿಗಾಳಿಯನ್ನು ತಡೆಯಲಾಗದೆ ಸಾವನ್ನಪ್ಪಿರುವ ಘಟನೆ ನಡೆದಿದೆ.  ಏಪ್ರಿಲ್ 28 ರ ಭಾನುವಾರದಂದು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ಅಧಿಕ ತೀವ್ರತೆಯ ಬಿಸಿಗಾಳಿಯ ಪರಿಣಾಮದಿಂದ ಸಾವನ್ನಪ್ಪಿರುವುದು ಎಂದು ತಿಳಿದು ಬಂದಿದೆ. 

ಮೃತರನ್ನು  ಲಕ್ಷ್ಮಿ ಎಂದು ಗುರುತಿಸಲಾಗಿದ್ದು, ಮಹಿಳೆಯನ್ನು ಕಾಲುವೆಯೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತದನಂತರ ಆಕೆ ಮರಣಹೊಂದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಪ್ರಕಾರ ಬಿಸಿಲನ ಕಾರಣದಿಂದ ಮಹಿಳೆ ಸಾವನ್ನಪ್ಪಿರುವದು ತಿಳಿದುಬಂದಿದೆ. 

ಇದನ್ನು ಓದಿ : ದಕ್ಷಿಣ ಏಷ್ಯಾದಲ್ಲಿಯೇ ಸುಧೀರ್ಘ ಶಾಖವನ್ನು ಎದುರಿಸುತ್ತಿದೆ ಬಾಂಗ್ಲಾದೇಶ

ಕೆಲವು ದಿನಗಳಿಂದ ಹಲವು ಕಡೆಗಳಲ್ಲಿ ಬಿಸಿಲಿನ ಪ್ರಮಾಣ ಜಾಸ್ತಿಯಾಗಿದ್ದು, ಶಾಲೆಗಳನ್ನು ಮುಚ್ಚಲಾಗುತ್ತಿರುವ ಸುದ್ದಿಗಳು ಕೇಳಿಬರುತ್ತಿವೆ. ಕೇರಳದಲ್ಲಿಯೂ ಕೆಲವು ದಿನಗಳಿಂದ ತಾಪಮಾನವು ತೀವ್ರ ಮಟ್ಟಕ್ಕೆ ತಲುಪುತ್ತಿದ್ದು, ಸಾಮಾನ್ಯ ಮಿತಿಗಿಂತ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಕೊಲ್ಲಂ, ಪಾಲಕ್ಕಾಡ್ ಮತ್ತು ತ್ರಿಶೂರ್‌ನ ಕೆಲವು ಪ್ರದೇಶಗಳಲ್ಲಿ  ಏಪ್ರಿಲ್ 29 ರಂದು ಬಿಸಿಗಾಳಿಯನ್ನು ಮುನ್ಸೂಚಿಸಿದೆ.  

ಇದನ್ನು ಓದಿ : ವಿಷ್ಣು ನೆನಪಲ್ಲಿ ಮತ್ತೆ ಶುರು YPL..! ಮೇ‌4 ಮತ್ತು ಮೇ‌ 5ಕ್ಕೆ ʼಯಜಮಾನ ಪ್ರೀಮಿಯರ್ ಲೀಗ್ʼ

ಏಪ್ರಿಲ್ 28 ರಿಂದ ಮೇ 2 ರವರೆಗೆ ಪಾಲಕ್ಕಾಡ್ ಗರಿಷ್ಠ 41 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಮತ್ತು ಕೊಲ್ಲಂ ಮತ್ತು ತ್ರಿಶೂರ್ ಜಿಲ್ಲೆಗಳು ಸುಮಾರು 40 ಡಿಗ್ರಿ ಸೆಲ್ಸಿಯಸ್‌ ತಾಪಮಾನವನ್ನು ಪಡೆಯಬಹುದು ಮತ್ತು  ಪತ್ತನಂತಿಟ್ಟ, ಕೋಯಿಕ್ಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ತಾಪಮಾನವು ಸುಮಾರು 38 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಅಲಪ್ಪುಳ, ಎರ್ನಾಕುಲಂ, ಮಲಪ್ಪುರಂ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು 37 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ. ತಿರುವನಂತಪುರಂ ಜಿಲ್ಲೆಯಲ್ಲಿ ತಾಪಮಾನ ಸುಮಾರು 36 ಡಿಗ್ರಿ ಸೆಲ್ಸಿಯಸ್‌ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News