ಅರವಿಂದ್ ಕೇಜ್ರಿವಾಲ್ ಏನೂ ತಿಳಿಯದ ಅನಕ್ಷರಸ್ಥ- ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ

    

Last Updated : Jun 17, 2018, 05:44 PM IST
 ಅರವಿಂದ್ ಕೇಜ್ರಿವಾಲ್ ಏನೂ ತಿಳಿಯದ ಅನಕ್ಷರಸ್ಥ- ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ title=

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರನ್ನು ಬಿಜೆಪಿ ನಾಯಕ ಸುಬ್ರಮಣ್ಯಸ್ವಾಮಿ ಏನೂ ತಿಳಿಯದ ಅನಕ್ಷರಸ್ಥ ಎಂದು ಟೀಕಿಸಿದ್ದಾರೆ.

ಕಳೆದ ಆರು ದಿನಗಳಿಂದ  ಲೆಫ್ಟಿನೆಂಟ್ ಗವರ್ನರ್ ನಿವಾಸದಲ್ಲಿ ಪ್ರತಿಭಟನೆ ಕೈಗೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ಅವರ ನಿಲುವನ್ನು ಖಂಡಿಸಿದ್ದಾರೆ. 

ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿಭಟನೆ ಮಾಡುವದಕ್ಕೆ ಒಂದು ಕ್ರಮಬದ್ಧವಾದ ಮಾರ್ಗವಿದೆ. ಸಂವಿಧಾನದಲ್ಲಿ ಸಾಂಸ್ಕೃತಿಕ ತತ್ವಗಳಿವೆ. ಆದ್ದರಿಂದ ಈ ರೀತಿ ವರ್ತನೆ ತೋರುತ್ತಿರುವ ವ್ಯಕ್ತಿಗೆ 4ರಾಜ್ಯಗಳು ಮುಖ್ಯಮಂತ್ರಿಗಳಿಗೆ ಬೆಂಬಲ ನೀಡಬಾರದು ಎಂದು ಸ್ವಾಮಿ ತಿಳಿಸಿದರು.

ಇನ್ನು ಮುಂದುವರೆದು ಮಾತನಾಡಿದ ಅವರು ಕೇಜ್ರಿವಾಲ್ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ನಡೆಸಿದವರು ಮತ್ತು ನಂತರ ಅಣ್ಣಾ ಹಜಾರೆಯ ಹೆಗಲ ಮೇಲೆ ಕುಳಿತು ಕೊನೆಗೆ ಅವರನ್ನು ಹೊರಗೆ ಹಾಕಿದರು.ಆದ್ದರಿಂದ ಕೆಜ್ರಿವಾಲ್ ಹುಟ್ಟುತ್ತಲೇ ನಕ್ಸಲೈಟ್ ಆಗಿ ಹುಟ್ಟಿದ್ದಾರೆ. ಅವರೊಬ್ಬ ಏನೂ ತಿಳಿಯದ ಅನಕ್ಷರಸ್ಥ ಎಂದು ಅವರು ಕಿಡಿ ಕಾರಿದ್ದಾರೆ.

Trending News