PM Kisan: ಜ.28ರಂದು ಈ ಜನರ ಖಾತೆಗೆ ಬೀಳಲಿದೆ 2000 ರೂ: ಆದರೆ ಹಣ ಸಿಗೋದು ಈ ನಿಯಮ ಪಾಲಿಸಿದ್ದರೆ ಮಾತ್ರ!

PM Kisan Scheme 13th Installment Date 2023: ರೈತ ಫಲಾನುಭವಿಗಳು ಜನವರಿ 28, 2023 ರೊಳಗೆ ಇ-ಕೆವೈಸಿ ಪರಿಶೀಲನೆಯನ್ನು ಪಡೆಯುವುದು ಅಗತ್ಯವಾಗಿದೆ ಎಂದು ಕೃಷಿ ಸಚಿವಾಲಯ ಟ್ವೀಟ್ ಮಾಡಿದೆ. ಪರಿಶೀಲಿಸದ ರೈತರು ಇದರ ಪ್ರಯೋಜನವನ್ನು ಪಡೆಯುವುದಿಲ್ಲ. 13ನೇ ಕಂತಿನ ಹಣವನ್ನು ಶೀಘ್ರವೇ ರೈತರಿಗೆ ನೀಡಲಾಗುವುದು ಎಂದು ತಿಳಿಸಿದರು.

Written by - Bhavishya Shetty | Last Updated : Jan 23, 2023, 07:39 AM IST
    • ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 13 ನೇ ಕಂತಿನ ಬಗ್ಗೆ ಮಾಹಿತಿ
    • 13ನೇ ಕಂತಿಗೆ 2000 ರೂಪಾಯಿ ಸಿಗಬೇಕೆಂದರೆ ಮಹತ್ವದ ಮಾಹಿತಿಯೊಂದನ್ನು ಸರ್ಕಾರ ನೀಡಿದೆ
    • 28 ಜನವರಿ 2023ರಂದು ರೈತರಿಗೆ ಬಹಳ ಮುಖ್ಯವಾದ ದಿನಾಂಕ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದೆ
PM Kisan: ಜ.28ರಂದು ಈ ಜನರ ಖಾತೆಗೆ ಬೀಳಲಿದೆ 2000 ರೂ: ಆದರೆ ಹಣ ಸಿಗೋದು ಈ ನಿಯಮ ಪಾಲಿಸಿದ್ದರೆ ಮಾತ್ರ! title=
PM Kisan Samman

PM Kisan Scheme 13th Installment Date 2023: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 13 ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಸುದ್ದಿಯಿದೆ. ಈ ಸಂಬಂಧ ಟ್ವೀಟ್ ಮೂಲಕ ಸಚಿವಾಲಯ ಸೂಚನೆಯೊಂದನ್ನು ನೀಡಿದೆ. ಜನವರಿ ತಿಂಗಳಲ್ಲೇ ಕೇಂದ್ರ ಸರ್ಕಾರ ಈ ಹಣವನ್ನು ರೈತರ ಖಾತೆಗೆ ವರ್ಗಾಯಿಸುವ ಸಾಧ್ಯತೆ ಇದೆ. ಇದರೊಂದಿಗೆ, ಕೃಷಿ ಸಚಿವಾಲಯವು 28 ಜನವರಿ 2023ರಂದು ರೈತರಿಗೆ ಬಹಳ ಮುಖ್ಯವಾದ ದಿನಾಂಕ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದೆ.

ರೈತ ಫಲಾನುಭವಿಗಳು ಜನವರಿ 28, 2023 ರೊಳಗೆ ಇ-ಕೆವೈಸಿ ಪರಿಶೀಲನೆಯನ್ನು ಪಡೆಯುವುದು ಅಗತ್ಯವಾಗಿದೆ ಎಂದು ಕೃಷಿ ಸಚಿವಾಲಯ ಟ್ವೀಟ್ ಮಾಡಿದೆ. ಪರಿಶೀಲಿಸದ ರೈತರು ಇದರ ಪ್ರಯೋಜನವನ್ನು ಪಡೆಯುವುದಿಲ್ಲ. 13ನೇ ಕಂತಿನ ಹಣವನ್ನು ಶೀಘ್ರವೇ ರೈತರಿಗೆ ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಸೈಕಲ್‌ ಮೇಲಿಂದ ಬಿದ್ದ ವೃದ್ಧ ಶಿಕ್ಷಕನನ್ನು ಥಳಿಸಿದ ಪೊಲೀಸ್‌..! ಆʼರಕ್ಷಕʼರಾ ಇವರು..

ಪಿಎಂ ಕಿಸಾನ್ ಯೋಜನೆಯಡಿ ಫಲಾನುಭವಿಗಳಿಗೆ ಇ-ಕೆವೈಸಿ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ರೈತರಿಗೆ ತಿಳಿಸಲಾಗಿದೆ ಎಂದು ಬಿಹಾರ ಸರ್ಕಾರದ ಕೃಷಿ ಇಲಾಖೆ ಟ್ವೀಟ್‌ನಲ್ಲಿ ಬರೆದಿದೆ. ಇನ್ನೂ 16.74 ಲಕ್ಷ ಫಲಾನುಭವಿಗಳು ಪರಿಶೀಲನೆ ನಡೆಸಿಲ್ಲ ಎಂದು ಬಿಹಾರ ಸರ್ಕಾರ ತಿಳಿಸಿದೆ. ಈ ಕೆಲಸ ಮಾಡಲು ಡಿಬಿಟಿ ಕೃಷಿ ಇಲಾಖೆಯಿಂದ ಫಲಾನುಭವಿಗಳಿಗೆ ಎಸ್‌ಎಂಎಸ್ ಕಳುಹಿಸಲಾಗಿದೆ.

ಹಣ ಯಾವಾಗ ಬರಬಹುದು:

ಮಾಧ್ಯಮ ವರದಿಗಳ ಪ್ರಕಾರ, ಸರ್ಕಾರವು ರೈತರ ಖಾತೆಗಳಿಗೆ ಇಂದು ಅಂದರೆ ಜನವರಿ 23 ಅಥವಾ ಜನವರಿ 26 ರಂದು ಹಣವನ್ನು ವರ್ಗಾಯಿಸಬಹುದು. ಸದ್ಯ ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ನಿಮ್ಮ ಕಂತು ಸ್ಥಿತಿಯನ್ನು ಹೀಗೆ ಪರಿಶೀಲಿಸಿ:

>> ಕಂತಿನ ಸ್ಥಿತಿಯನ್ನು ನೋಡಲು, ನೀವು PM ಕಿಸಾನ್ ವೆಬ್‌ಸೈಟ್‌ಗೆ ಹೋಗಿ

>> ಈಗ ರೈತರ ಕಾರ್ನರ್ ಕ್ಲಿಕ್ ಮಾಡಿ

>> ಈಗ Beneficiary Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

>> ಈಗ ಹೊಸ ಪುಟ ತೆರೆದುಕೊಳ್ಳುತ್ತದೆ.

>> ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

>> ಇದರ ನಂತರ ಕಂತಿನ ಸ್ಥಿತಿಯನ್ನು ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ.

ಇದನ್ನೂ ಓದಿ: ಭಕ್ತಾಧಿಗಳ ಗಮನಕ್ಕೆ : ತಿರುಪತಿ ದೇಗಲುದ ವಸತಿ ನಿಲಯಗಳ ದರ ಏರಿಕೆ..!

ಪಿಎಂ ಕಿಸಾನ್ ಯೋಜನೆ ಸಂಬಂಧಿತ ದೂರುಗಳನ್ನು ಇಲ್ಲಿ ಸಲ್ಲಿಸಿ:

ಯೋಜನೆಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೆ, ನೀವು ಸಹಾಯವಾಣಿ ಸಂಖ್ಯೆ 155261 ಅಥವಾ 1800115526 ಅಥವಾ ಈ ಸಂಖ್ಯೆ 011-23381092 ಅನ್ನು ಸಂಪರ್ಕಿಸಬಹುದು. ಇದಲ್ಲದೆ pmkisan-ict@gov.in ಇಮೇಲ್ ಐಡಿಗೆ ಮೇಲ್ ಮಾಡುವ ಮೂಲಕ ನಿಮ್ಮ ಸಮಸ್ಯೆಯನ್ನು ನೀವು ಹೇಳಬಹುದು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News