ಕೇಂದ್ರ ಬಜೆಟ್‌ಗೂ ಮುನ್ನ ವಿತ್ತ ಸಚಿವರ ಮಹತ್ವದ ಸಭೆ

ಮಾಹಿತಿಯ ಪ್ರಕಾರ, ಈವರೆಗೆ ಬಜೆಟ್‌ನಲ್ಲಿ ಘೋಷಿಸಿರುವ ಎಂಡಿಆರ್ ತೆಗೆಯುವಿಕೆಯನ್ನು ಎಷ್ಟು ಬ್ಯಾಂಕುಗಳು ಜಾರಿಗೆ ತಂದಿವೆ ಎಂದು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಹೇಳಲಾಗುತ್ತಿದೆ.

Last Updated : Dec 28, 2019, 12:25 PM IST
ಕೇಂದ್ರ ಬಜೆಟ್‌ಗೂ ಮುನ್ನ ವಿತ್ತ ಸಚಿವರ ಮಹತ್ವದ ಸಭೆ title=

ನವದೆಹಲಿ: ಕೇಂದ್ರ ಬಜೆಟ್‌ಗೂ ಮುನ್ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸರ್ಕಾರಿ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕುಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ (ಸಿಇಒ) ಸಭೆ ನಡೆಸಿ ತಮ್ಮ ವ್ಯವಹಾರದ ಆರ್ಥಿಕ ಸಾಧನೆ ಮತ್ತು ಬೆಳವಣಿಗೆಯನ್ನು ಪರಿಶೀಲಿಸಲಿದ್ದಾರೆ. ಸೀತಾರಾಮನ್ ತಮ್ಮ ಎರಡನೇ ಪೂರ್ಣ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸುವ ನಿರೀಕ್ಷೆಯಿದೆ. ಬೆಳಿಗ್ಗೆ 11 ಗಂಟೆಗೆ ಪಟೇಲ್ ಚೌಕ್‌ನ ಡಿಎಫ್‌ಎಸ್‌ನಲ್ಲಿ ಈ ಸಭೆ ನಡೆಯಲಿದೆ.

ಮಾಹಿತಿಯ ಪ್ರಕಾರ, ಈವರೆಗೆ ಬಜೆಟ್‌ನಲ್ಲಿ ಘೋಷಿಸಿರುವ ಎಂಡಿಆರ್ ತೆಗೆಯುವಿಕೆಯನ್ನು ಎಷ್ಟು ಬ್ಯಾಂಕುಗಳು ಜಾರಿಗೆ ತಂದಿವೆ ಎಂದು ಸಭೆಯಲ್ಲಿ ಬ್ಯಾಂಕುಗಳಿಂದ ಮಾಹಿತಿ ಪಡೆಯಲಾಗುವುದು. ವಾಸ್ತವವಾಗಿ, ಬಜೆಟ್ ಸಮಯದಲ್ಲಿ, ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಬ್ಯಾಂಕುಗಳಿಗೆ 50 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ಮಾಡುವ ಬ್ಯಾಂಕ್ ಗಳಿಗೆ ವ್ಯಾಪಾರಿ ರಿಯಾಯಿತಿ ದರವನ್ನು ತೆಗೆದುಹಾಕುವುದಾಗಿ ಸರ್ಕಾರ ಘೋಷಿಸಿತು.

ರುಪೇ(RuPay) ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸುವುದು ಮತ್ತು ರುಪೇ ಡೆಬಿಟ್ ಕಾರ್ಡ್ ನೀಡುವ ಬಗ್ಗೆಯೂ ಚರ್ಚೆ ನಡೆಯಲಿದೆ. ರುಪೇ ಕಾರ್ಡ್ ಮೂಲಕ ಜನ ಧನ್ ಖಾತೆದಾರರಿಗೆ ಓವರ್‌ಡ್ರಾಫ್ಟ್ ಸೌಲಭ್ಯ ನೀಡುವ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

SARFAESI ACT ಅಡಿಯಲ್ಲಿ ಎನ್‌ಪಿಎ ಆದ ನಂತರ ಆಸ್ತಿಯನ್ನು ಹರಾಜು ಮಾಡಲು ಆನ್‌ಲೈನ್ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ರೀತಿಯಾಗಿ ಸಾಧ್ಯವಿರುವ ಎಲ್ಲೆಡೆ ಆನ್‌ಲೈನ್ ಪ್ಲಾಟ್‌ಫಾರ್ಮ್ ಅನ್ನು ಉತ್ತೇಜಿಸುವ ಬಗ್ಗೆ ಚರ್ಚೆ ನಡೆಯಲಿದೆ.

Trending News