ನಕ್ಸಲರೊಂದಿಗೆ ನನಗೆ ಸಂಬಂಧವಿದ್ದರೆ ನನ್ನನ್ನು ಬಂಧಿಸಿ: ದಿಗ್ವಿಜಯ ಸಿಂಗ್

ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಎಡಪಕ್ಷದ ಕಾರ್ಮಿಕರ ಬಂಧನ 'ಗುಜರಾತ್ ಮಾದರಿಯ ನಿಯಮ'ದ ಒಂದು ಉದಾಹರಣೆ ಎಂದು ಆರೋಪಿಸಿದ್ದಾರೆ.

Last Updated : Sep 5, 2018, 10:43 AM IST
ನಕ್ಸಲರೊಂದಿಗೆ ನನಗೆ ಸಂಬಂಧವಿದ್ದರೆ ನನ್ನನ್ನು ಬಂಧಿಸಿ: ದಿಗ್ವಿಜಯ ಸಿಂಗ್ title=
File Photo

ಸತ್ನಾ (ಮಧ್ಯ ಪ್ರದೇಶ): ಮಾವೊವಾದಿಗಳೊಂದಿಗೆ ನಾನು ಯಾವುದೇ ಸಂಬಂಧ ಹೊಂದಿಲ್ಲ. ಒಂದು ವೇಳೆ ನಾನು ನಕ್ಸರರೊಂದಿಗೆ ಸಂಬಂಧ ಹೊಂದಿದ್ದರೆ ಸರ್ಕಾರ ನನ್ನನ್ನು ಬಂಧಿಸಲಿ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ. 

"ನನ್ನನ್ನು ತಪ್ಪಿತಸ್ಥರೆಂದುಕೊಂಡಿದ್ದಲ್ಲಿ, ನನ್ನನ್ನು ಬಂಧಿಸಲು ಕೇಂದ್ರೀಯ ಮತ್ತು ರಾಜ್ಯ ಸರಕಾರಕ್ಕೆ ನಾನು ಸವಾಲು ಮಾಡುತ್ತೇನೆ" ಎಂದು ಸತ್ನಾದಲ್ಲಿ ಸಿಂಗ್ ಹೇಳಿದರು. "ಈ ಹಿಂದೆ ನನ್ನನ್ನು ರಾಷ್ಟ್ರ ವಿರೋಧಿ ಎಂದಿದ್ದರು. ಈಗ ನನಗೆ ನಕ್ಸಲರೊಂದಿಗೆ ಸಂಬಂಧವಿದೆ ಎಂದು ಹೇಳುತ್ತಿದ್ದಾರೆ. ಹಾಗಿದ್ದಲ್ಲಿ ನನ್ನನ್ನು ಬಂಧಿಸಿ" ಎಂದ ಸಿಂಗ್, ಎಡಪಕ್ಷದ ಕಾರ್ಮಿಕರ ಬಂಧನ 'ಗುಜರಾತ್ ಮಾದರಿ ನಿಯಮ'ದ ಒಂದು ಉದಾಹರಣೆ ಎಂದು ಆರೋಪಿಸಿದ್ದಾರೆ. .

ವಾಸ್ತವವಾಗಿ, ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸಖ್ತ್ ಪಾತ್ರಾ ಕಾಂಗ್ರೆಸ್ "ಮಾವೋವಾದ ಮತ್ತು ನಕ್ಸಲಿಸಮ್ ಅನ್ನು ಮುಖ್ಯವಾಹಿನಿಯಲ್ಲಿ ತರಲು" ಯತ್ನಿಸುತ್ತಿದೆ ಎಂದು ಆರೋಪಿಸಿದ್ದರು ಮತ್ತು ಆ ಪಕ್ಷಕ್ಕೆ (ರಾಷ್ಟ್ರೀಯ ಕಾಂಗ್ರೆಸ್) "ಕಾಂಗ್ರೆಸ್ ಮಾವೊವಾದಿ ಪಕ್ಷ" ಎಂದು ಹೆಸರಿಡಬೇಕು ಎಂದಿದ್ದರು.

ಪಾತ್ರಾ ಅವರು ಪತ್ರವೊಂದನ್ನು ವಿವರಿಸುತ್ತಾ, ಕಾಂಗ್ರೇಸ್ ತನ್ನ ಚಟುವಟಿಕೆಗಳಿಗೆ ಹಣವನ್ನು ನೀಡಲು ಸಿದ್ಧವಾಗಿದೆ ಮತ್ತು ದಿಗ್ವಿಜಯ ಸಿಂಗ್ ಮೂಲಕ ಸಂಪರ್ಕಿಸಲಾಗುತ್ತಿದೆ. "ರಾಷ್ಟ್ರೀಯ ಭದ್ರತೆ ಸರ್ವೋತ್ಕೃಷ್ಟ ಪ್ರಾಮುಖ್ಯತೆ ಮತ್ತು ರಾಜಕೀಯ ಅವಕಾಶಕ್ಕಾಗಿ ಮಾತ್ರ" ಎಂದು ಪಾತ್ರಾ ಸುದ್ದಿಗಾರರಿಗೆ ಹೇಳಿದರು.

ಸುರೇಂದ್ರ ಎಂಬುವವರು ತಮ್ಮ ಒಡನಾಡಿ ಪ್ರಕಾಶ್ ಅವರಿಗೆ ಸೆಪ್ಟೆಂಬರ್ 25ರಂದು ಪತ್ರವೊಂದನ್ನು ಬರೆದಿದ್ದಾರೆ ಎಂದು ಹೇಳಿದ ಪಾತ್ರಾ, ಈ ಪತ್ರದಲ್ಲಿ ಕಾಂಗ್ರೆಸ್ ನಾಯಕರು ಸಹಾಯ ಮತ್ತು ಹಣವನ್ನು ನೀಡಲು ಸಿದ್ಧರಾಗಿದ್ದಾರೆ ಎಂದು ಹೇಳಿರುವುದಾಗಿ ತಿಳಿಸಿದರು. ಈ ಪತ್ರದಲ್ಲಿ ದಿಗ್ವಿಜಯ ಸಿಂಗ್ ಅವರ ಫೋನ್ ನಂಬರ್ ಕೂಡ ಇದೇ ಎಂದು ಅವರು ಆರೋಪಿಸಿದರು.
 

Trending News