ಅಮಿತ್ ಶಾ ಹೇಳಿದ್ರೆ ಕರ್ನಾಟಕಕ್ಕೆ ಸರ್ಕಾರ ರಚಿಸಲು ಹೋಗುವೆ!- ಸುಬ್ರಮಣ್ಯ ಸ್ವಾಮಿ

   

Last Updated : Jul 16, 2018, 03:57 PM IST
ಅಮಿತ್ ಶಾ ಹೇಳಿದ್ರೆ ಕರ್ನಾಟಕಕ್ಕೆ ಸರ್ಕಾರ ರಚಿಸಲು ಹೋಗುವೆ!- ಸುಬ್ರಮಣ್ಯ ಸ್ವಾಮಿ  title=

ನವದೆಹಲಿ: ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರಿಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ "ಈ ದುಖಪಡುವ ಸಂಗತಿ ಹೆಚ್ಚು ದಿನ ಇರಲಾರದು ಸದ್ಯದಲ್ಲೇ ಅದಕ್ಕೆ ಪರಿಹಾರ ಸಿಗುತ್ತದೆ" ಎಂದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಾ " ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಕನಸು ನನಸಾಗಿದೆ,ಅವರು ಸಂತಸದಲ್ಲಿಲ್ಲ ಎನ್ನುವುವುದು ಬಹಳ ದಿನಗಳ ಕಾಲ ಇರಲಾರದು, ಸದ್ಯದಲ್ಲೇ ಅದಕ್ಕೆ ಪರಿಹಾರ ಸಿಗುತ್ತದೆ. ಒಂದು ವೇಳೆ ಅಮಿತ್ ಶಾ ಹೇಳಿದರೆ ಕರ್ನಾಟಕಕ್ಕೆ ಹೋಗಿ ಸರ್ಕಾರ ರಚಿಸಿ ಎಂದು ಹೇಳಿದ್ರೆ ನಾನು ಸಂತಸವಾಗಿ ಆ ಕೆಲಸವನ್ನು ಮಾಡುತ್ತೇನೆ" ಎಂದು ಸುಬ್ರಮಣ್ಯ ಸ್ವಾಮಿ ತಿಳಿಸಿದರು.

ಸುಬ್ರಮಣ್ಯ ಸ್ವಾಮೀಯವರ ಹೇಳಿಕೆಯು ಪ್ರಮುಖವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ವಿಷಕಂಠನಾಗಿ ಸರ್ಕಾರದ ನೋವನ್ನು ನುಂಗುತ್ತಿದ್ದೇನೆ ಎಂದು ಹೇಳಿದ ನಂತರಬಂದಿದೆ.

ಸುಬ್ರಮಣ್ಯ ಸ್ವಾಮೀ ಕಾಂಗ್ರೆಸ್ ಕುರಿತು ಟಿಕಿಸುತ್ತಾ " ಕೆಲವು ಸಾರಿ  ಕಾಂಗ್ರೆಸ್ ನಾಯಕರು ದೇವಸ್ತಾನಗಳಿಗೆ ಭೇಟಿ ನೀಡುತ್ತಾರೆ ಇನ್ನು ಕೆಲವು ದಿನಗಳಲ್ಲಿ ಮುಸ್ಲಿಮರಿಗೆ ಬೆಂಬಲಿಸುತ್ತಾರೆ.ಇದರಿಂದಾಗಿ ಅವರು ಅವಮಾನಕ್ಕೆ ಒಳಗಾಗುವಂತಾಗಿದೆ" ಎಂದು ಅವರು ತಿಳಿಸಿದರು.

Trending News