ನಾನು ʼಕಂಗ್ರಾಂಟ್ಸ್‌ʼ ಅಂತಾ ಮೆಸೇಜ್‌ ಮಾಡಿದ್ರೆ ರಾಹುಲ್‌ ಗಾಂಧಿ ರಿಪ್ಲೈ ಮಾಡಿಲ್ಲವೆಂದ ದೀದಿ!

Lok Sabha Election Results 2024: ಮಂಗಳವಾರ ಫಲಿತಾಂಶ ಪ್ರಕಟಗೊಂಡ ನಂತರ ನಾನು ರಾಹುಲ್ ಗಾಂಧಿ ಅವರಿಗೆ ಅಭಿನಂದನೆಯ ಸಂದೇಶವನ್ನು ಕಳುಹಿಸಿದ್ದೇನೆ. ಆದರೆ ರಾಹುಲ್ ನನ್ನ ಮೆಸೇಜ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Written by - Puttaraj K Alur | Last Updated : Jun 5, 2024, 04:05 PM IST
  • ಫಲಿತಾಂಶದ ಬಳಿಕ ನಾನು ರಾಹುಲ್ ಗಾಂಧಿಗೆ Congrats ಸಂದೇಶ ಕಳುಹಿಸಿದೆ
  • ಆದರೆ ರಾಹುಲ್‌ ಗಾಂಧಿಯವರು ನನಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ
  • ನನ್ನನ್ನು ಸಂಪರ್ಕಿಸದಿದ್ದರೂ ನಾನು ಹೆದರುವುದಿಲ್ಲವೆಂದ ಮಮತಾ ಬ್ಯಾನರ್ಜಿ
ನಾನು ʼಕಂಗ್ರಾಂಟ್ಸ್‌ʼ ಅಂತಾ ಮೆಸೇಜ್‌ ಮಾಡಿದ್ರೆ ರಾಹುಲ್‌ ಗಾಂಧಿ ರಿಪ್ಲೈ ಮಾಡಿಲ್ಲವೆಂದ ದೀದಿ!    title=
ರಾಹುಲ್‌ ರಿಪ್ಲೈ ಮಾಡಿಲ್ಲವೆಂದ ದೀದಿ!

Lok Sabha Election Results 2024: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಪ್ರಧಾನಿ ಮೋದಿಯವರ ʼಚಾರ್‌ ಸೌ ಪಾರ್‌ʼ ಕನಸಾಗಿಯೇ ಉಳಿದಿದೆ. ಕಳೆದ ಬಾರಿಗಿಂತಲೂ ೬೩ ಸ್ಥಾನಗಳನ್ನು ಕಳೆದುಕೊಂಡಿರುವ ಬಿಜೆಪಿ ೨೪೦ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಏಕಾಂಗಿಯಾಗಿ ಸರ್ಕಾರ ರಚಿಸಲು ವಿಫಲವಾಗಿದೆ. NDA ಮೈತ್ರಿಕೂಟವು 292 ಸ್ಥಾನಗಳನ್ನು ಪಡೆದುಕೊಂಡಿದ್ದು, ಸರ್ಕಾರ ರಚಿಸುವ ಕಸರತ್ತು ನಡೆಯುತ್ತಿದೆ.

ಇನ್ನು ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ 234 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದು, ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದೆ. ಹೀಗಾಗಿ ಯಾರು ಸರ್ಕಾರ ರಚಿಸುತ್ತಾರೆ? ಯಾರು ಪ್ರಧಾನಿಯಾಗುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ೩ನೇ ಅವಧಿಗೂ ನರೇಂದ್ರ ಮೋದಿಯವರೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆಂದು ಬಿಜೆಪಿ ಹೇಳಿಕೊಂಡಿದೆ. ಇದರ ನಡುವೆ ಪಶ್ಚಿಮ ಬಂಗಾಳದ ಸಿಎಂಮಮತಾ ಬ್ಯಾನರ್ಜಿ ನೀಡಿರುವ ಒಂದೇ ಒಂದು ಹೇಳಿಕೆ ಸಂಚಲವನ್ನು ಮೂಡಿಸಿದೆ.

ಇದನ್ನೂ ಓದಿ: PM Modi Resign: ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನರೇಂದ್ರ ಮೋದಿ

ಮಂಗಳವಾರ ಫಲಿತಾಂಶ ಪ್ರಕಟಗೊಂಡ ನಂತರ ನಾನು ರಾಹುಲ್ ಗಾಂಧಿ ಅವರಿಗೆ ಅಭಿನಂದನೆಯ ಸಂದೇಶವನ್ನು ಕಳುಹಿಸಿದ್ದೇನೆ. ಆದರೆ ರಾಹುಲ್ ನನ್ನ ಮೆಸೇಜ್‌ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ʼಬಹುಶಃ ಅವರು ಚುನಾವಣಾ ಫಲಿತಾಂಶದಲ್ಲಿ ನಿರತರಾಗಿದ್ದರು ಅನ್ನಿಸುತ್ತದೆ. ಅವರು ಇಲ್ಲಿಯವರೆಗೂ ನನ್ನನ್ನು ಸಂಪರ್ಕಿಸಿಲ್ಲ. ಅವರು ನನ್ನನ್ನು ಸಂಪರ್ಕಿಸದಿದ್ದರೂ ನಾನು ಹೆದರುವುದಿಲ್ಲʼ ಅಂತಾ ದೀದಿ ಹೇಳಿದ್ದಾರೆ.  

ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವು ಬರೋಬ್ಬರಿ 29 ಸ್ಥಾನಗಳನ್ನು ಗೆದ್ದಿದ್ದು, ಇಂಡಿಯಾ ಮೈತ್ರಿಕೂಟದ ಸರ್ಕಾರ ರಚನೆ ಮಾಡಬೇಕಾದರೆ ನಿರ್ಣಾಯಕ ಪಾತ್ರವನ್ನು ವಹಿಸಲಿದೆ. ಇದೀಗ ದೀದಿಯವರ ಮೆಸೇಜ್‌ಗೆ ರಾಹುಲ್‌ ಗಾಂಧಿ ರಿಪ್ಲೈ ಮಾಡದಿರುವುದರಿಂದ ಅವರು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. 

ಇದನ್ನೂ ಓದಿ: ಮಗನ ಕ್ಷೇತ್ರಕ್ಕೆ ಅಪ್ಪನ ಉಸ್ತುವಾರಿ: ಗಡಿ ಜಿಲ್ಲೆಯಲ್ಲಿ ಕೈ ಅಭ್ಯರ್ಥಿಯ ದಾಖಲೆಯ ಜಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News