69000 ಶಿಕ್ಷಕರ ನೇಮಕಾತಿ ತಡೆಹಿಡಿದ ಹೈಕೋರ್ಟ್

ಇಂದಿನಿಂದ ಅಭ್ಯರ್ಥಿಗಳು ಜಿಲ್ಲಾವಾರು ಕೌನ್ಸಲಿಂಗ್ ನಡೆಸಬೇಕಾಗಿತ್ತು, ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿವೆ. ಹೈಕೋರ್ಟ್‌ನ ಈ ತೀರ್ಪಿನ ನಂತರ ಸದ್ಯಕ್ಕೆ ನೇಮಕಾತಿಯನ್ನು ನಿಲ್ಲಿಸಲಾಗುವುದು ಎಂದು ಹೇಳಲಾಗಿದೆ.

Last Updated : Jun 3, 2020, 12:54 PM IST
69000 ಶಿಕ್ಷಕರ ನೇಮಕಾತಿ ತಡೆಹಿಡಿದ ಹೈಕೋರ್ಟ್ title=

ಪ್ರಯಾಗರಾಜ್:  69000 ಸಹಾಯಕ ಶಿಕ್ಷಕರ ನೇಮಕಾತಿ (Teachers Recruitment)ಯಲ್ಲಿ ಹೈಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ.  ಉತ್ತರ ಪತ್ರಿಕೆಯಲ್ಲಿನ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈ ನಿರ್ಧಾರವನ್ನು ನೀಡಿದೆ. ನ್ಯಾಯಮೂರ್ತಿ ಅಲೋಕ್ ಮಾಥುರ್ ಅವರ ನ್ಯಾಯಪೀಠ 69000 ಶಿಕ್ಷಕರ ನೇಮಕಾತಿಯನ್ನು ತಡೆಹಿಡಿಯಲಾಗಿದೆ.

ಉತ್ತರ ಪ್ರದೇಶದ ಶಾಲೆಗಳಿಗೆ 69000 ಸಹಾಯಕ ಶಿಕ್ಷಕರ ನೇಮಕಾತಿಗೆ ಆಯ್ಕೆಯಾದ ಅಭ್ಯರ್ಥಿಗಳ  ಕೌನ್ಸಿಲಿಂಗ್ ಇಂದಿನಿಂದ ಪ್ರಾರಂಭವಾಗಬೇಕಿತ್ತು. ಇದಕ್ಕಾಗಿ ಜೂನ್ 3 ರಿಂದ 6 ರವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಕೌನ್ಸೆಲಿಂಗ್ ಸಿದ್ಧತೆ ಪೂರ್ಣಗೊಂಡಿದೆ. ಈಗ ಹೈಕೋರ್ಟ್‌ನ ಈ ತೀರ್ಪಿನ ನಂತರ ನೇಮಕಾತಿಗೆ ತಡೆ ಹೇರಲಾಗಿದೆ.

ಇಂದಿನಿಂದ ಅಭ್ಯರ್ಥಿಗಳು ಜಿಲ್ಲಾವಾರು ಕೌನ್ಸಲಿಂಗ್ ನಡೆಸಬೇಕಾಗಿತ್ತು, ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿವೆ. ಹೈಕೋರ್ಟ್‌ನ ಈ ತೀರ್ಪಿನ ನಂತರ ಸದ್ಯಕ್ಕೆ ನೇಮಕಾತಿಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. 

ನ್ಯಾಯಾಲಯದ ವಿಚಾರಣೆ ಮುಂದುವರೆದಿದ್ದರಿಂದ ಅಧಿಕಾರಿಗಳಿಗೆ ಮೆರಿಟ್ ಪಟ್ಟಿ ನೀಡುವಲ್ಲಿ ವಿಳಂಬವಾಯಿತು. ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಬೇಕಿತ್ತು. ಅದೇ ದಿನ, ನ್ಯಾಯಾಲಯವು ತೀರ್ಪಿನ ದಿನಾಂಕವನ್ನು ಜೂನ್ 3 ರಂದು ನಿಗದಿಪಡಿಸಿತು. ನೇಮಕಾತಿಗಾಗಿ ಸರ್ಕಾರವು ಕೌನ್ಸೆಲಿಂಗ್‌ಗೆ ಸಹ ಸಿದ್ಧತೆ ನಡೆಸಿತ್ತು, ಆದರೆ ಹೈಕೋರ್ಟ್‌ನ ಈ ತೀರ್ಪಿನ ನಂತರ ಅದನ್ನು ಈಗ ನಿಲ್ಲಿಸಲಾಗಿದೆ.

Trending News