ಸದಾ 'ಬಂಡಾಯ'ದ ಝಂಡಾ ಹಿಡಿದಿದ್ದ ಜಾರ್ಜ್

ದೇಶದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸರ್ಕಾರದ  ವಿರುದ್ಧ ಬಂಡೆದ್ದವರು ಜಾರ್ಜ್ ಫರ್ನಾಂಡೀಸ್. 

Last Updated : Jan 29, 2019, 12:32 PM IST
ಸದಾ 'ಬಂಡಾಯ'ದ ಝಂಡಾ ಹಿಡಿದಿದ್ದ ಜಾರ್ಜ್ title=
File Image

ನವದೆಹಲಿ:  ಟ್ರೇಡ್ ಯೂನಿಯನ್ ನಾಯಕರಾಗಿ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ಜಾರ್ಜ್ ಫರ್ನಾಂಡಿಸ್ ಇಂದು ನಮ್ಮೆಲ್ಲರನ್ನು ಅಗಲಿದ್ದಾರೆ. ಆದರೆ ಸ್ವಾತಂತ್ರ್ಯದ ನಂತರ ಅವರ ಪ್ರಜಾಪ್ರಭುತ್ವದ ಯುಗದ ಮಸುಕಾದ ಚಿತ್ರವು ಜನರ ದೃಷ್ಟಿಯಲ್ಲಿ ಇನ್ನೂ ಗಟ್ಟಿಯಾಗಿದೆ. ದೇಶದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸರ್ಕಾರದ  ವಿರುದ್ಧ ಬಂಡೆದ್ದವರು ಜಾರ್ಜ್ ಫರ್ನಾಂಡೀಸ್. 

ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಎಲ್.ಕೆ.ಆಡ್ವಾಣಿ ಅವರು ಜಾರ್ಜ್ ಫೆರ್ನಾಂಡಿಸ್ 'ರೆಬೆಲ್ ಲೀಡರ್' ಎಂದು ಕರೆದರು. ದೇಶದ ಅಭಿವೃದ್ಧಿಗೆ ಅಂತಹ ನಾಯಕರು ಅಗತ್ಯವೆಂದು ಅಡ್ವಾಣಿ ಹೇಳಿದರು. "ಯಾವುದೇ ದಂಗೆ ಇಲ್ಲದಿದ್ದರೆ, ದೇಶವು ಸ್ವಾತಂತ್ರ್ಯ ಪಡೆಯುತ್ತಿರಲಿಲ್ಲ. ಆದ್ದರಿಂದ ದೇಶದ ಪ್ರಗತಿಗೆ ಮತ್ತು ಅಭಿವೃದ್ಧಿಗೆ ಜಾರ್ಜ್ ರಂತಹ ಮಹಾನ್ ಕ್ರಾಂತಿಕಾರಿ ನಾಯಕರು ಬರುವ ಅಗತ್ಯವಿದೆ'' ಎಂದು ಅವರು ನುಡಿದಿದ್ದರು. 

ತುರ್ತು ಪರಿಸ್ಥಿತಿ:
1971 ರ ಸಾರ್ವತ್ರಿಕ ಚುನಾವಣೆಯಲ್ಲಿ 'ಗರೀಬಿ ಹಟಾವೊ' ಎಂಬ ಘೋಷಣೆಯೊಂದಿಗೆ, ಬೃಹತ್ ಬಹುಮತವನ್ನು (518 ರಲ್ಲಿ 352 ಸ್ಥಾನಗಳು) ಗೆದ್ದ ಇಂದಿರಾ ಗಾಂಧಿ ಅವರು ವರ್ಷದ ಅಂತ್ಯದಲ್ಲಿ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿದಾಗ ಮತ್ತು ಬಾಂಗ್ಲಾದೇಶವು ವಿಶ್ವ ಭೂಪಟಕ್ಕೆ ಬಂದಿತು. 'ಗುಂಗಿ ಗುಡಿಯಾ' ಎಂದೂ ಕರೆಯಲ್ಪಡುತ್ತಿದ್ದ ಇಂದಿರಾ ಗಾಂಧಿಯನ್ನು 'ಮಾ ದುರ್ಗಾ' ಎಂದು ಕರೆಯಲಾಯಿತು. ಅವರನ್ನು 'ಐರನ್ ಲೇಡಿ' ಎಂದು ಕರೆಯಲಾಗುತ್ತಿತ್ತು. ಅದೇ ವರ್ಷದಲ್ಲಿ ಅವರು 'ಭಾರತ ರತ್ನ' ಪ್ರಶಸ್ತಿ ಪಡೆದರು. ಆದರೆ ಮುಂದಿನ ಕೆಲವು ವರ್ಷಗಳಲ್ಲಿ, ಇಂದಿರಾ ಗಾಂಧಿಯವರ ಅಧಿಕಾರವು ಅಷ್ಟೇನೂ ಪ್ರಭಾವ ಬೀರಲಿಲ್ಲ. ಆದ್ದರಿಂದ, 1975 ರ ಜೂನ್ 25-26ರ ಮಧ್ಯರಾತ್ರಿಯಂದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು.

1975ರ ಜೂನ್ 25-26 ರಂದು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ವಿಧಿಸಲಾಯಿತು ಮತ್ತು ವಿರೋಧಿ ನಾಯಕರು ಜಾರ್ಜ್ ಫೆರ್ನಾಂಡೀಸ್ ಅವರನ್ನು ಜೈಲಿನಲ್ಲಿ ಬಂಧಿಸಲಾಯಿತು. (ಫೈಲ್ ಫೋಟೋ)

ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಸರ್ಕಾರದ ಶಿಫಾರಸಿನ ಮೇರೆಗೆ ಭಾರತೀಯ ಸಂವಿಧಾನದ ಸೆಕ್ಷನ್ 352 ರ ಅಡಿಯಲ್ಲಿ 'ಆಂತರಿಕ ಅಶಾಂತಿ' ಅಡಿಯಲ್ಲಿ ಆಗಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಭಾರತವು ಜೂನ್ 26, 1975 ರಿಂದ ಮಾರ್ಚ್ 21, 1977 ರವರೆಗೆ 21 ತಿಂಗಳುಗಳ ಕಾಲ ತುರ್ತು ಪರಿಸ್ಥಿತಿಯನ್ನು ಹೊಂದಿತ್ತು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದು ಅತ್ಯಂತ ವಿವಾದಾತ್ಮಕ ಅವಧಿಯಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಚುನಾವಣೆಗಳು ಮುಂದೂಡಲ್ಪಟ್ಟವು. ತುರ್ತುಪರಿಸ್ಥಿತಿಯಲ್ಲಿ, ಜನರ ಮೂಲಭೂತ ಹಕ್ಕುಗಳು ಅಮಾನತುಗೊಳಿಸಲ್ಪಟ್ಟಿರಲಿಲ್ಲ, ಆದರೆ ಜೀವನದ ಹಕ್ಕನ್ನು ಸಹ ನಿರಾಕರಿಸಲಾಗಿದೆ. ಪ್ರಜಾಪ್ರಭುತ್ವದಿಂದ ಚುನಾಯಿತ ಸರ್ಕಾರ ಏಕೆ ಪ್ರಜಾಪ್ರಭುತ್ವವನ್ನು ಸಾಂವಿಧಾನಿಕ ಸರ್ವಾಧಿಕಾರಕ್ಕೆ ಪರಿವರ್ತಿಸಿತು ಎಂಬ ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ?

ಯಾವ ಘಟನೆಗಳು ವಾತಾವರಣವನ್ನು ಬದಲಿಸಿದವು:
1971ರಲ್ಲಿ ಇಂದಿರಾ ಯುಗ ಆರಂಭದಿಂದಲೂ, ಅವರ ವ್ಯಕ್ತಿತ್ವ ಸೃಷ್ಟಿ ಆರಂಭವಾಗಿದೆ. ಅದೇ ಸಂಚಿಕೆಯಲ್ಲಿ, ಇಂದಿರಾ ಸರ್ಕಾರ, ನ್ಯಾಯಾಂಗ ಮತ್ತು ಮಾಧ್ಯಮಗಳನ್ನು ಕೂಡಾ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದವು. 1967 ರಲ್ಲಿ 'ಗೋಲಖ್ ನಾತ್' ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್'ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದಂತೆ ಸಂಸತ್ ಗೆ ಯಾವುದೇ ರೀತಿಯ ಅಧಿಕಾರವಿಲ್ಲ, ಒಂದು ವೇಳೆ ಮಾಡಿದರೆ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿದಂತಾಗುತ್ತದೆ' ಎಂದು ಆದೇಶ ನೀಡಿತು. ಇದರ ವಿರುದ್ದವಾಗಿ 1971 ರಲ್ಲಿ ಇಂದಿರಾ ಸರ್ಕಾರ ಅಧಿಕಾರಯುತವಾಗಿ ಸಂವಿಧಾನದ 24 ನೇ ವಿಧಿಯನ್ನು ತಿದ್ದುಪಡಿ ಮಾಡಿತು. ಇದರ ಪ್ರಕಾರ 'ಸರ್ಕಾರ ರಾಜರ ಸ್ವಂತ ವೆಚ್ಚಕ್ಕೆ ತನ್ನ ಬೊಕ್ಕಸದಿಂದ ಹಣ ಕೊಡುವುದು' ಇದನ್ನು ತಿದ್ದುಪಡಿ ಮಾಡಿ ಸಂಸತ್ 26 ನೇ ವಿಧಿಯನ್ನು ಜಾರಿಗೆ ತಂದಿತು.ಈ ವಿಧಿಯ ಮೂಲಕ ಸಂವಿಧಾನವು ತನ್ನದೇ ಆದ ಬೆಲೆ ಪಡೆದುಕೊಂಡಿತು ಮತ್ತು ಸರ್ಕಾರ'ರಾಜ ಧನ' ಪದ್ದತಿಯನ್ನು ರದ್ದು ಮಾಡಿತು.

ಈ ನ್ಯಾಯ ನಿಯಂತ್ರಣವು 24 ನೇ ವಿಧಿ ಯ ಪ್ರಕಾರ 'ಕೇಶವಾನಂದ ಭಾರತಿ'ಯ ಪ್ರಕರಣ ವನ್ನು ಪ್ರಶ್ನಿಸಿತು. ಇದರಿಂದ ಸುಪ್ರಿಂಕೋರ್ಟ್ ನ 6-7 ಜನ ನ್ಯಾಯಾಧಿಶರ ಪೀಠವು  'ಸಂವಿಧಾನದ ಮೂಲವನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಸಂಸತ್ತಿಗೆ ನೀಡಬಾರದು' ಎಂದು ಹೇಳಿತು. ಇದರಿಂದಾಗಿ ಇಂದಿರಾಗಾಂಧಿ ಸರ್ಕಾರದ ಪ್ರಯತ್ನ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ತೀರ್ಪು ನೀಡುವ ಮೊದಲೇ ಇದ್ದ ಜೆ.ಎಮ್.ಶೀಲತ್, ಗ್ರೋವರ್ ರವರ ಬದಲಾಗಿ ಎ.ಎನ್.ರಾಯ್ ರವರನ್ನು ಮುಖ್ಯ ನ್ಯಾಯಧೀಶರನ್ನಾಗಿ ನೇಮಕ ಮಾಡಿದರು. ಇಂದಿರಾರವರ ಈ ವರ್ತನೆ ಜೆ.ಪಿ.ಸೇರಿದಂತೆ ಹಲವರ ಟೀಕೆಗೆ ಒಳಗಾಯಿತು.

ಅಲಹಾಬಾದ್ ಹೈಕೋರ್ಟ್ ಚುನಾವಣೆಯಲ್ಲಿ ಇಂದಿರಾರವರ ಭ್ರಷ್ಟಚಾರವನ್ನು ಸಾಬೀತುಪಡಿಸಿ ತೀರ್ಪು ನೀಡಿತು. (ಫೈಲ್ ಫೋಟೋ)

ವಿದ್ಯಾರ್ಥಿ ಚಳುವಳಿ:
1973 ರಲ್ಲಿ ಅಹಮದಾಬಾದ್ನ ಎಲ್ಡಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾಸ್ಟೆಲ್ ಮೆಸ್ ಶುಲ್ಕ ಹೆಚ್ಚಳದ ನಂತರ, ವಿದ್ಯಾರ್ಥಿಗಳು ಆಂದೋಲನವನ್ನು ಪ್ರಾರಂಭಿಸಿದರು. ರಾಜ್ಯ ಶಿಕ್ಷಣ ಮಂತ್ರಿಯ ವಿರುದ್ಧ ಪ್ರಾರಂಭವಾದ ಈ ಹೊಸ ಚಳುವಳಿ, ನಂತರ ಭ್ರಷ್ಟಾಚಾರ ಮತ್ತು ಆರ್ಥಿಕ ಬಿಕ್ಕಟ್ಟಿನ ವಿರುದ್ಧ ತೀವ್ರವಾದ ನೋಟವನ್ನು ತೆಗೆದುಕೊಂಡಿತು. ಮುಖ್ಯಮಂತ್ರಿ 'ಚಿಮನ್ ಭಾಯ್ ಪಟೇಲ್'ರ ವಿರುದ್ದ ಸಿಡಿದೆದ್ದು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಗಾಗಿ ಅಗ್ರಹಿಸಿದರು. 1975ರ ಜೂನ್ ನಲ್ಲಿ ನಡೆದ ಮರುಚುನಾವಣೆಯಲ್ಲಿ ಗಾಂಧಿ ಪಾರ್ಟಿಯು, ಜನತಾ ಪಾರ್ಟಿಯಿಂದ ಸೋಲಲ್ಪಟ್ಟಿತು.

ಅದೇ ಅವಧಿಯಲ್ಲಿ, 1974 ರಲ್ಲಿ ಮಾರ್ಚ್,ಏಪ್ರಿಲ್ ನಲ್ಲಿ'ಬಿಹಾರದ ಚತ್ರ ಸಂಘರ್ಷ ಸಮಿತಿಯ' ವಿದ್ಯಾರ್ಥಿ ಸಂಘಟನೆಯು, ಗಾಂಧಿವಾದಿಯು, ಸಮಾಜವಾದಿಯು ಆದ 'ಜಯ ಪ್ರಕಾಶ್ ನಾರಯಣ್' ರ ಸಹಯೋಗದಲ್ಲಿ ಬಿಹಾರದ ಸರ್ಕಾರದ ವಿರುದ್ದ ಚಳುವಳಿ ಹೂಡಿದರು. ಇದನ್ನು ಜೆ.ಪಿ.ಚಳುವಳಿ ಎಂದೂ ಸಹ ಕರೆಯುತ್ತಾರೆ. 1974 ರ ಏಪ್ರಿಲ್ ನಲ್ಲಿ ಜೆ.ಪಿ.ಯವರು ಪಾಟ್ನ ದಲ್ಲಿ, ದೇಶದಲ್ಲಿ ಶಾಂತಿಸ್ಥಾಪನೆಗಾಗಿ ಕರೆಕೊಟ್ಟು 'ಟೋಟಲ್ ರೆವಲ್ಯುಶನ್' ಅನ್ನು ಪ್ರಾರಂಭಿಸಿದರು.ಇದಕ್ಕಾಗಿ ವಿಧ್ಯಾರ್ಥಿಗಳ, ಬಡ ಕಾರ್ಮಿಕರ, ಕಾರ್ಮಿಕ ಸಂಘಟನೆಗಳ ಸಹಾಯವನ್ನು ಕೋರಿದರು. ಒಂದು ತಿಂಗಳ ನಂತರ ದೇಶದ ಅತಿದೊಡ್ದ ಕಾರ್ಮಿಕ ಸಂಘಟನೆಯಾದ ರೈಲ್ವೆ ಕಾರ್ಮಿಕರ ಸಂಘಟನೆಯು ದೇಶಾದ್ಯಂತ ಮುಷ್ಕರಗಳನ್ನು ಹೂಡಿತು. ಏಕೆಂದರೆ ಸರ್ಕಾರ ಸಾವಿರಾರು ಕುಟುಂಬಗಳನ್ನು ವಸತಿನಿಲಯಗಳಿಂದ ಹೊರಗಟ್ಟಿತು. ಈ ಪ್ರತಿಭಟನೆಯು ಇಂದಿರಾಗಾಂಧಿ ಸರ್ಕಾರಕ್ಕೆ ಬಹುದೊಡ್ದ ಸಮಸ್ಯೆಯಾಯಿತು. ಇದಲ್ಲದೇ ಸಂಸತ್ತಿನ ಒಳಗು ಸಹ ಸರ್ಕಾರದ ವಿರುದ್ದ ಟೀಕೆಗಳು ಬಂದವು. ಈ ಎಲ್ಲ ಕಾರಣಗಳಿಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಇಂದಿರಾ ಗಾಂಧಿಯವರ ಚಿತ್ರಣದ ಮೇಲೆ ಪರಿಣಾಮ ಬೀರಿತು. ಇಂದಿರಾ ಗಾಂಧಿ ಸರ್ಕಾರಕ್ಕೆ ಲೋಕಸಭೆಯಲ್ಲಿ ಬಹುಮತದ ಭೀತಿ ಎದುರಾಯಿತು.

ಜಯಪ್ರಕಾಶ್ ನಾರಾಯಣ್(ಫೈಲ್ ಫೋಟೋ)

ರಾಜ್ ನಾರಾಯಣ್ ಕೇಸ್:
ಸಮಾಜವಾದಿ ನಾಯಕ ರಾಜ್ ನಾರಾಯಣ ಅಲಹಾಬಾದ್ ಹೈಕೋರ್ಟ್ನಲ್ಲಿ ಇಂದಿರಾ ಗಾಂಧಿಯವರ ಲೋಕಸಭಾ ಚುನಾವಣೆಯ ವಿಜಯವನ್ನು (1971) ಪ್ರಶ್ನಿಸಿದರು. 1971 ರ ಚುನಾವಣೆಯಲ್ಲಿ ಇಂದಿರಾ ಗಾಂಧಿ ರಾಯ್ಬರೇಲಿಯಲ್ಲಿ ರಾಜ್ ನಾರಾಯಣನನ್ನು ಸೋಲಿಸಿದರು. ಚುನಾವಣಾ ವಂಚನೆ ಮತ್ತು ಸರ್ಕಾರಿ ಯಂತ್ರೋಪಕರಣಗಳ ದುರುಪಯೋಗದ ಕಾರಣ ಇಂದಿರಾ ಗಾಂಧಿಯವರು ಆ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದು ರಾಜ್ ನಾರಾಯಣ್ ಆರೋಪಿಸಿದ್ದಾರೆ. ಜೂನ್ 12, 1975 ರಂದು, ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಜಗ್ಮೋಹನ್ ಲಾಲ್ ಸಿನ್ಹಾ ಚುನಾವಣೆಯಲ್ಲಿ ಇಂದಿರಾರವರ ಭ್ರಷ್ಟಚಾರವನ್ನು ಸಾಬೀತುಪಡಿಸಿ ತೀರ್ಪು ನೀಡಿತು.

ಇಂದಿರಾರವರು ಹೈಕೋರ್ಟ್ ನ ಈ ತೀರ್ಪನ್ನು ಪ್ರಶ್ನಿಸಿ,ಸುಪ್ರಿಂಕೋರ್ಟ್ ನಲ್ಲಿ ಪ್ರಕರಣ ದಾಖಲು ಮಾಡಿದರು. ಆದರು 1975 ಜೂನ್ 24 ರಂದು ನ್ಯಾಯಾದೀಶ 'ವಿ.ಆರ್.ಕ್ರಿಷ್ಣ ಲಯರ್'ರವರು ಹೈಕೋರ್ಟ್ ನ ತೀರ್ಪನ್ನು ಎತ್ತಿ ಹಿಡಿದರು. ಅದಲ್ಲದೇ ನ್ಯಾಯಾಲಯ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಮತ್ತು ಲೋಕಸಭೆಯಲ್ಲಿ ಯಾವುದೇ ರೀತಿಯ ಅಧಿಕಾರವನ್ನು ನೀಡಬಾರದೆಂದು ಆದೇಶ ನೀಡಿತು. ಪ್ರಧಾನಿ ಕಚೇರಿಯಲ್ಲಿ ಉಳಿಯಲು ಅವರಿಗೆ ಅವಕಾಶ ನೀಡಲಾಗಿತ್ತು. 

1975 ರ ಜೂನ್ 25 ರಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ, ಇಂದಿರಾ ಗಾಂಧಿ ಮತ್ತೆ ಪ್ರಧಾನಿ ಹುದ್ದೆ ಅಲಂಕರಿಸದಂತೆ ಜೆಪಿ  ರಾಷ್ಟ್ರವ್ಯಾಪಿ ಅನಿರ್ದಿಷ್ಟ ಆಂದೋಲನಕ್ಕೆ ಕರೆ ನೀಡಿದರು. ಮಹಾತ್ಮಗಾಂಧಿಯವರ ಸ್ವಾತಂತ್ರ್ಯ ಹೋರಾಟದ ಧ್ಯೇಯದಂತೆ ಎಲ್ಲಿ ನಿಯಮಗಳು ಅನೈತಿಕವಾಗಿರುತ್ತವೆಯೊ ಅಂತಹ ಸರ್ಕಾರದ ನಿಯಮಗಳನ್ನು ಪೋಲೀಸ್ ಅಧಿಕಾರಿಗಳು ಉಲ್ಲಂಘಿಸಬೇಕು ಎಂದು ಹೇಳಿದರು. ಆ ರಾತ್ರಿ "ಆಂತರಿಕ ಅಶಾಂತಿ" ಯನ್ನು ಉದಾಹರಿಸುತ್ತಾ, ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು. 1976 ರಲ್ಲಿ ಸಾಮಾಜಿಕ ಕಾರ್ಮಿಕರ ಗುಂಪಿನ ನಾಯಕ ಜಾರ್ಜ್ ಫರ್ನಾಂಡಿಸ್ ಪ್ರತಿಭಟಿಸುತ್ತಾ ಬಂಧಿತರಾದರು. ಅದು ತುರ್ತುಪರಿಸ್ಥಿತಿಯ ಮೂರ್ತ ರೂಪದ ಚಿತ್ರಣ.

Trending News