Gadchiroli Encounter: ಗಡಚಿರೋಲಿ ಬಳಿ ಕಮಾಂಡೋ ಪೊಲೀಸ್ ಹಾಗೂ ನಕ್ಸಲರ ಮಧ್ಯೆ ಗುಂಡಿನ ಚಕಮಕಿ 13 ನಕ್ಸಲರ ಹತ್ಯೆ

Naxali Encounter In Gadchiroli - ಘಟನೆಯ ಕುರಿತು ಮಾಹಿತಿ ನೀಡಿರುವ ಗಡಚಿರೋಲಿ DIG ಸಂದೀಪ್ ಪಾಟೀಲ್, ಈ ಪೊಲೀಸ್ ಆಪರೇಶನ್ ನಲ್ಲಿ ಕನಿಷ್ಠ ಅಂದರೆ 13 ನಕ್ಸಲರನ್ನು ಮಟ್ಟಹಾಕಲಾಗಿದ್ದು, ಈ ಘರ್ಷಣೆ ಗಡಚಿರೋಲಿಯ ಪಟಾಪಲ್ಲಿ ಅರಣ್ಯ ಪ್ರದೇಶದಲ್ಲಿ ನಡೆದಿದೆ ಎಂದಿದ್ದಾರೆ.

Written by - Nitin Tabib | Last Updated : May 21, 2021, 12:33 PM IST
  • ಗಡಚಿರೋಲಿಯಲ್ಲಿ ಕಮಾಂಡೋ ಪೋಲೀಸರ ಭಾರಿ ಕಾರ್ಯಾಚರಣೆ.
  • ಈ ಎನ್ಕೌಂಟರ್ ನಲ್ಲಿ ಒಟ್ಟು 13 ನಕ್ಸಲರನ್ನು ಹತ್ಯೆಗೈಯಲಾಗಿದೆ.
  • ನಕ್ಸಲರ ವಿರುದ್ಧ ನಡೆಸಲಾಗಿರುವ ಒಂದು ಯಶಸ್ವಿ ಕಾರ್ಯಾಚರಣೆ ಇದಾಗಿದೆ ಎಂದ ಪೊಲೀಸ್ DIG
Gadchiroli Encounter: ಗಡಚಿರೋಲಿ ಬಳಿ ಕಮಾಂಡೋ ಪೊಲೀಸ್ ಹಾಗೂ ನಕ್ಸಲರ ಮಧ್ಯೆ ಗುಂಡಿನ ಚಕಮಕಿ 13 ನಕ್ಸಲರ ಹತ್ಯೆ title=
Gadchiroli Naxali Encounter(Photo Courtesy-PTI)

ಗಡಚಿರೋಲಿ: Naxali Encounter In Gadchiroli - ಮಹಾರಾಷ್ಟ್ರದ (Maharashtra) ಗಡಚಿರೋಲಿಯಲ್ಲಿ C-60 ಕಮಾಂಡೋ ಪೊಲೀಸರು ಹಾಗೂ ನಕ್ಸಲರ ನಡುವೆ ಭಾರಿ ಗುಂಡಿನ ಕಾಳಗ ಸಂಭವಿಸಿದ್ದೆ. C-60 ಕಮಾಂಡೋಗಳು (C-60 Commando Police Operation) ನಡೆಸಿರುವ ಈ ಕಾರ್ಯಾಚರಣೆಯಲ್ಲಿ 13 ನಕ್ಸಲರು ಹತ್ಯೆಗೀಡಾಗಿದ್ದಾರೆ. ನಕ್ಸಲರ ಜೊತೆಗಿನ ಈ ಘರ್ಷಣೆ ಗಡಚಿರೋಲಿಯ ಪಟಾಪಲ್ಲಿ ತಾಲೂಕಿನ ಪೈದಿ-ಕೊಟಮಿ ಅರಣ್ಯ ಪ್ರದೇಶ (Paidi Kotami Forest Area)ದಲ್ಲಿ ಸಂಭವಿಸಿದೆ.

ಗಡಚಿರೋಲಿ (Gadchiroli)ಯಲ್ಲಿ ನಕ್ಸಲರ ಎನ್ಕೌಂಟರ್
C-60 ಕಮಾಂಡೋ ಪೊಲೀಸರು ಹಾಗೂ ನಕ್ಸಲರ ನಡುವಿನ ಈ ಎನ್ಕೌಂಟರ್ (Patapalli Encounter) ಶುಕ್ರವಾರ ಇದ್ದಕ್ಕಿದ್ದಂತೆ ಅರಣ್ಯ ಪ್ರದೇಶದಲ್ಲಿ ಆರಂಭಗೊಂಡಿದೆ. ಈ ಕಾರ್ಯಾಚರಣೆಯನ್ನು ನಡೆಸಲು ಕಮಾಂಡೋ ಪೊಲೀಸರು ನಡೆದುಕೊಂಡೇ ಅರಣ್ಯಕ್ಕೆ ನುಗ್ಗಿದ್ದಾರೆ. ಇದರಿಂದ ನಕ್ಸಲರಿಗೆ ಕಾಡಿನೊಳಗೆ ಪೊಲೀಸರು ಬಂದ ಸುಳಿವೇ ದೊರೆತಿಲ್ಲ ಎನ್ನಲಾಗಿದೆ.

ಘರ್ಷಣೆಯಲ್ಲಿ 13 ನಕ್ಸಲರ ಹತ್ಯೆ
ಘಟನೆಯ ಕುರಿತು ಮಾಹಿತಿ ನೀಡಿರುವ ಗಡಚಿರೋಲಿ DIG ಸಂದೀಪ್ ಪಾಟೀಲ್, ಈ ಪೊಲೀಸ್ ಆಪರೇಶನ್ ನಲ್ಲಿ ಕನಿಷ್ಠ ಅಂದರೆ 13 ನಕ್ಸಲರನ್ನು ಮಟ್ಟಹಾಕಲಾಗಿದ್ದು, ಈ ಘರ್ಷಣೆ ಗಡಚಿರೋಲಿಯ ಪಟಾಪಲ್ಲಿ ಅರಣ್ಯ ಪ್ರದೇಶದಲ್ಲಿ ನಡೆದಿದೆ  ಎಂದಿದ್ದಾರೆ.

ಇದನ್ನೂ ಓದಿ-ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿಸಲು ಇಂದೇ ಕೊನೆಯ ಅವಕಾಶ

ಇದನ್ನೂ ಓದಿ- ಭಾರತೀಯ ವಾಯುಸೇನೆಯ ಯುದ್ಧ ವಿಮಾನ Mig-21 ಅಪಘಾತ, ಪೈಲೆಟ್ ದುರ್ಮರಣ

ಶೋಧ ಕಾರ್ಯಾಚರಣೆ ಮುಂದುವರೆದಿದೆ
ಕಮಾಂಡೋ ಪೊಲೀಸರು ನಡೆಸಿರುವ ಈ ಕಾರ್ಯಾಚರಣೆಯ ಬಳಿಕ 13 ನಕ್ಸಲರ ಶವಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಸಂದೀಪ್ ಪಾಟೀಲ್ ನಕ್ಷಲರ ವಿರುದ್ಧ ನಡೆಸಲಾಗಿರುವ ಒಂದು ಯಶಸ್ವಿ ಕಾರ್ಯಾಚರಣೆ ಇದಾಗಿದೆ ಎಂದು ಬಣ್ಣಿಸಿದ್ದಾರೆ. ಪ್ರಸ್ತುತ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಏಕೆಂದರೆ ನಕ್ಸಲರ ಜೊತೆಗೆ ನಡೆದ ಈ ಗುಂಡಿನ ಕಾಳಗದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಕ್ಷಲರು ಹತ್ಯೆಗೀಡಾಗಿರುವ ಸಾಧ್ಯತೆ ಇದೆ ಎಂದು ಸಂದೀಪ್ ಪಾಟಿಲ್ ಹೇಳಿದ್ದಾರೆ.

ಇದನ್ನೂ ಓದಿ- ಮನೆಯ ಕಿಟಕಿ ಬಾಗಿಲು ತೆರೆದಿಡಿ, ಸ್ವಚ್ಛ ಗಾಳಿ ಬರುತ್ತಿದ್ದರೆ ಕರೋನಾ ಅಪಾಯ ಇಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News