ಆದಾಯ ತೆರಿಗೆ ಪಾವತಿದಾರರಿಗೆ ನೆಮ್ಮದಿಯ ಸುದ್ದಿ ಪ್ರಕಟಿಸಿದ ನಿರ್ಮಲಾ ಸಿತಾರಾಮನ್

ಆದಾಯ ತೆರಿಗೆ ರಿಟರ್ನ್ ಪಾವತಿಸುವ ಗಡುವನ್ನು ಹೆಚ್ಚಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಈ ಗಡುವನ್ನು ಜುಲೈ 31 ರಿಂದ ಸೆಪ್ಟೆಂಬರ್ 30 ಕ್ಕೆ ವಿಸ್ತರಿಸಲಾಗಿದೆ. ಜೊತೆಗೆ 'ವಿವಾದ ಸೆ ವಿಶ್ವಾಸ್' ಯೋಜನೆಯ ಗಡುವನ್ನು 2020 ಡಿಸೆಂಬರ್ 31 ಕ್ಕೆ ವಿಸ್ತರಿಸಲಾಗಿದೆ. ಇದಕ್ಕೂ ಮೊದಲು ಜೂನ್ 30 ಇದರ ಅಂತಿಮ ತಿಥಿಯಾಗಿತ್ತು.

Last Updated : May 13, 2020, 07:20 PM IST
ಆದಾಯ ತೆರಿಗೆ ಪಾವತಿದಾರರಿಗೆ ನೆಮ್ಮದಿಯ ಸುದ್ದಿ ಪ್ರಕಟಿಸಿದ ನಿರ್ಮಲಾ ಸಿತಾರಾಮನ್ title=

ನವದೆಹಲಿ:ಕೊರೊನಾ ವೈರಸ್ ಬಿಕ್ಕಟ್ಟಿನ ನಡುವೆ ಕೇಂದ್ರ ಸರ್ಕಾರ ದೇಶದ ಸಾಮಾನ್ಯ ನಾಗರಿಕರಿಗೆ ಭಾರಿ ನೆಮ್ಮದಿಯನ್ನು ನೀಡುವ ಕೆಲಸ ಮಾಡಿದೆ. ಅಂದರೆ, ಆದಾಯ ತೆರಿಗೆ ಸಲ್ಲಿಸುವ ದಿನಾಂಕವನ್ನು ಸರ್ಕಾರ ವಿಸ್ತರಿಸಿದೆ. ಇದರಿಂದ ತೆರಿಗೆ ಪಾವತಿದಾರರು ನವೆಂಬರ್ 30ರವರೆಗೆ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಪಾವತಿಸಲು ಸಾಧ್ಯವಾಗಲಿದೆ. ಈ ಕುರಿತು ಬುಧವಾರ ಸುದ್ದಿಗೋಷ್ಠಿ ನಡೆಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರ್ಥಿಕ ವರ್ಷ 2020-21 ರಲ್ಲಿ TDS-TCS ದರವನ್ನು ಶೇ.25ರಷ್ಟು ಕಡಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ದಿನಾಂಕವನ್ನೂ ಕೂಡ ನವೆಂಬರ್ 30, 2020ರವರೆಗೆ ವಿಸ್ತರಿಸಲಾಗುವುದು ಹಾಗೂ ವಿವಾದದಿಂದ ವಿಶ್ವಾಸ ಯೋಜನೆಯ ಗಡುವನ್ನು ಕೂಡ ಡಿಸೆಂಬರ್ 31, 2020ಕ್ಕೆ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು, ಕರೋನಾ ಬಿಕ್ಕಟ್ಟಿನ ನಡುವೆ ಸೊರಗಿದ ಆರ್ಥಿಕತೆಗೆ ಉತ್ತೇಜನ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 20 ಲಕ್ಷ ಕೋಟಿ ರೂ.ಗಳ ಬೃಹತ್ ಪ್ಯಾಕೇಜ್ ಘೋಷಿಸಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಈ ಪ್ಯಾಕೇಜ್ ಬಗ್ಗೆ ವಿಸ್ತೃತ  ಮಾಹಿತಿಯನ್ನು ನೀಡಿದ್ದಾರೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಗಡುವನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನು ಜುಲೈ 31 ರಿಂದ ಸೆಪ್ಟೆಂಬರ್ 30 ಕ್ಕೆ ಹೆಚ್ಚಿಸಲಾಗಿದೆ. ಅಂತೆಯೇ, ವಿವಾದ ಸೆ ವಿಶ್ವಾಸ್  ಯೋಜನೆಯ ಗಡುವನ್ನು 2020 ಡಿಸೆಂಬರ್ 31 ಕ್ಕೆ ವಿಸ್ತರಿಸಲಾಗಿದೆ. ಈ ಹಿಂದೆ ಅದು ಜೂನ್ 30 ಕ್ಕೆ ನಿಗದಿಪಡಿಸಲಾಗಿತ್ತು.

ಇದೇ ವೇಳೆ 2021 ರ ಮಾರ್ಚ್ 31 ರವರೆಗೆ ತೆರಿಗೆ ಪಾವತಿದಾರರಿಗೆ ಟಿಡಿಎಸ್ ಕಡಿತದಲ್ಲಿ ಶೇ.25ರಷ್ಟು  ವಿನಾಯ್ತಿ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಟಿಡಿಎಸ್ ಮೂಲಕ ಸರ್ಕಾರ ತೆರಿಗೆ ಸಂಗ್ರಹಿಸುತ್ತದೆ ಎಂದು ವಿವರಿಸಿರುವ ಸಿತಾರಾಮನ್, ಟಿಡಿಎಸ್ ಅನ್ನು ವಿವಿಧ ಆದಾಯದ ಮೂಲಗಳಲ್ಲಿ ಕಡಿತಗೊಳಿಸಲಾಗುತ್ತದೆ. ಯಾವುದೇ ಹೂಡಿಕೆಯ ಮೇಲೆ ಪಡೆದ ಸಂಬಳ, ಬಡ್ಡಿ ಅಥವಾ ಆಯೋಗ ಇತ್ಯಾದಿಗಳನ್ನು ಇದು ಒಳಗೊಂಡಿದೆ ಎಂದಿದ್ದಾರೆ.

Trending News