ಉಗ್ರರಿಗೆ ಕಾಂಗ್ರೆಸ್ ಬಿರಿಯಾನಿ ತಿನ್ಸಿದ್ರೆ, ನಾವು ಬುಲೆಟ್ ತಿನ್ನಿಸ್ತೀವಿ: ಯೋಗಿ ಆದಿತ್ಯನಾಥ್

ಕಾಂಗ್ರೆಸ್ ಉಗ್ರರಿಗೆ ಬಿರಿಯಾನಿ ನೀಡಿ ಬೆಳೆಸಿದೆ, ಆದರೆ ನಾವು ಬುಲೆಟ್ ಪ್ರಾಶನ ಮಾಡಿಸುತ್ತೇವೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

Last Updated : Nov 26, 2018, 06:39 PM IST
ಉಗ್ರರಿಗೆ ಕಾಂಗ್ರೆಸ್ ಬಿರಿಯಾನಿ ತಿನ್ಸಿದ್ರೆ, ನಾವು ಬುಲೆಟ್ ತಿನ್ನಿಸ್ತೀವಿ: ಯೋಗಿ ಆದಿತ್ಯನಾಥ್ title=

ಮಕ್ರಾನ: ರಾಜಸ್ತಾನದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ರಾಜಸ್ತಾನದ ಮಕ್ರಾನಾದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿಭಜನಾತ್ಮಕ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಉಗ್ರರಿಗೆ ಬಿರಿಯಾನಿ ನೀಡಿ ಬೆಳೆಸಿದೆ, ಆದರೆ ನಾವು ಬುಲೆಟ್ ಪ್ರಾಶನ ಮಾಡಿಸುತ್ತೇವೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಬಿಜೆಪಿಯು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದನೆಯನ್ನು ನಿಯಂತ್ರಿಸಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ದೇಶವನ್ನು ಭಯೋತ್ಪಾದನೆಯಿಂದ ರಕ್ಷಿಸಲು ಎಂದು ಪಕ್ಷ ಬದ್ಧವಾಗಿದೆ ಎಂದಿರುವ ಬಿಜೆಪಿ ಸೆಪ್ಟೆಂಬರ್ 2016 ರಲ್ಲಿ ನಡೆಸಿದ ಸರ್ಜಿಕಲ್ ಮುಷ್ಕರವನ್ನು ಉದಾಹರಣೆಯಾಗಿ ನೀಡಿದೆ. 

Trending News