ಚಂದ್ರಶೇಖರ್ ಆಜಾದ್ ಜೈಲಿನಿಂದ ಬಿಡುಗಡೆ, ಆದರೆ ದೆಹಲಿಯಲ್ಲಿ ಉಳಿಯುವಂತಿಲ್ಲ...!

ಜನಸಮೂಹವನ್ನು ಪ್ರಚೋದಿಸಿದ ಆರೋಪದ ಮೇಲೆ ಬಂಧನಕ್ಕೊಳಗಾದ 25 ದಿನಗಳ ನಂತರ ಭೀಮ್ ಸೇನಾ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ತಿಹಾರ್ ಜೈಲಿನಿಂದ ಹೊರನಡೆಯಲಿದ್ದಾರೆ ಆದರೆ ಅವರು ದೆಹಲಿಯಲ್ಲಿ ಉಳಿಯುವುದಾಗಲಿ ಅಥವಾ ಯಾವುದೇ ಪ್ರತಿಭಟನೆಗಳನ್ನು ನಡೆಸುವಂತಿಲ್ಲ ಎಂದು ಕೋರ್ಟ್ ಆದೇಶಿಸಿದೆ. 

Last Updated : Jan 15, 2020, 06:47 PM IST
ಚಂದ್ರಶೇಖರ್ ಆಜಾದ್ ಜೈಲಿನಿಂದ ಬಿಡುಗಡೆ, ಆದರೆ ದೆಹಲಿಯಲ್ಲಿ ಉಳಿಯುವಂತಿಲ್ಲ...! title=

ನವದೆಹಲಿ: ಜನಸಮೂಹವನ್ನು ಪ್ರಚೋದಿಸಿದ ಆರೋಪದ ಮೇಲೆ ಬಂಧನಕ್ಕೊಳಗಾದ 25 ದಿನಗಳ ನಂತರ ಭೀಮ್ ಸೇನಾ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ತಿಹಾರ್ ಜೈಲಿನಿಂದ ಹೊರನಡೆಯಲಿದ್ದಾರೆ ಆದರೆ ಅವರು ದೆಹಲಿಯಲ್ಲಿ ಉಳಿಯುವುದಾಗಲಿ ಅಥವಾ ಯಾವುದೇ ಪ್ರತಿಭಟನೆಗಳನ್ನು ನಡೆಸುವಂತಿಲ್ಲ ಎಂದು ಕೋರ್ಟ್ ಆದೇಶಿಸಿದೆ. 

ಫೆಬ್ರವರಿ 8 ರಂದು ನಡೆಯಲಿರುವ ದೆಹಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ಬಿಡುಗಡೆಯನ್ನು ಭದ್ರಪಡಿಸಿಕೊಳ್ಳಲು ಆಜಾದ್ ಒಪ್ಪಿಕೊಂಡರು. ನಂತರ ಅವರು ಆದೇಶಕ್ಕೆ ಮಾರ್ಪಾಡುಗಳನ್ನು ಪಡೆಯುವ ನಿರೀಕ್ಷೆಯಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕಾಮಿನಿ ಲಾ ಅವರು ವಿಧಿಸಿರುವ ಷರತ್ತುಗಳ ಪ್ರಕಾರ, ಚಂದ್ರಶೇಖರ್ ಆಜಾದ್ ಅವರು ಬಿಡುಗಡೆಯಾದ ನಂತರ ರವಿದಾಸ್ ದೇವಸ್ಥಾನ, ಜೋರ್ ಬಾಗ್ ಹಜರತ್ ಅಲಿ ದೇಗುಲ ಮತ್ತು ನಂತರ ಜಮಾ ಮಸೀದಿಗೆ ಭೇಟಿ ನೀಡಲು ದೆಹಲಿಯಲ್ಲಿ 24 ಗಂಟೆಗಳ ಕಾಲ ಇರಲು ಸಾಧ್ಯವಾಗುತ್ತದೆ. ನಂತರ ಅವರನ್ನು ಪೊಲೀಸರು ಉತ್ತರ ಪ್ರದೇಶಕ್ಕೆ ಕರೆದೊಯ್ಯಲಿದ್ದಾರೆ. ಆಜಾದ್ ಅವರು ತಮ್ಮ ಸಲಹೆಗಾರ ಮಹಮೂದ್ ಪ್ರಚಾ ಮೂಲಕ ಸಹರಾನ್ಪುರಕ್ಕೆ ಹೋಗುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.  

ನ್ಯಾಯಾಧೀಶರು, ವಿಚಾರಣೆಯ ಸಮಯದಲ್ಲಿ, ಅವರು ಅವನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಒಲವು ತೋರುತ್ತಿದ್ದರು ಆದರೆ ಅವರು ಎರಡು ಅಡೆ ತಡೆಗಳನ್ನು ಸೂಚಿಸಿದ್ದರು. ಅದರಲ್ಲಿ ಆಜಾದ್ ಹಿಂದೆ ಇದೇ ರೀತಿಯ ಅಪರಾಧಗಳಲ್ಲಿ ಭಾಗಿಯಾಗಿರುವುದು ಮತ್ತೆ ಆಪಾದಿತ ಅಪರಾಧಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಎನ್ನುವುದು ಅವರ ವಾದವಾಗಿತ್ತು.ಈಗ ನ್ಯಾಯಾಧೀಶರು ವಿಧಿಸಿದ ಷರತ್ತುಗಳನ್ನು ಅವಳಿ ಉದ್ದೇಶಗಳನ್ನು ಸಾಧಿಸಲು ಸಿದ್ದಪಡಿಸಲಾಗಿದೆ ಎನ್ನಲಾಗಿದೆ.

ಆಜಾದ್ ಅವರ ಜಾಮೀನು ಅರ್ಜಿಯ ಎರಡು ದಿನಗಳ ವಿಚಾರಣೆಯ ಸಮಯದಲ್ಲಿ, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕಾಮಿನಿ ಲಾವು ಪ್ರತಿಭಟಿಸುವ ಜನರ ಹಕ್ಕನ್ನು ಒತ್ತಿಹೇಳಿದ್ದರು, ಪೊಲೀಸರು ಕ್ರಿಮಿನಲ್ ಪ್ರೊಸೀಜರ್ ಕೋಡ್ ನ ಸೆಕ್ಷನ್ 144 ರ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸುವ ಅಭ್ಯಾಸವನ್ನು ವಿರೋಧಿಸಿದರು ಮತ್ತು ಪೊಲೀಸರು ಆಜಾದ್ ವಿರುದ್ಧ ಯಾವುದೇ ಪುರಾವೆಗಳನ್ನು ಸಲ್ಲಿಸುವಲ್ಲಿ ವಿಫಲವಾಗಿರುವ ಹಿನ್ನಲೆಯಲ್ಲಿ ಅವರ ಮೇಲೆ ತರಾಟೆಗೆ ತೆಗೆದುಕೊಂಡಿದ್ದರು. 

ಬುಧವಾರ ಅವರು ಚಂದ್ರಶೇಖರ್ ಆಜಾದ್ ಅವರಿಗೂ ಸ್ವಲ್ಪ ಸಲಹೆಯನ್ನು ನೀಡಿ ಬೀದಿ ಪ್ರತಿಭಟನೆ ಕೊನೆಯ ಉಪಾಯವಾಗಿರಬೇಕು ಎಂದು ನ್ಯಾಯಾಧೀಶರು ಆಜಾದ್‌ಗೆ ತಿಳಿಸಿದರು. ಸಂವಾದ ಮೊದಲು ಇರಬೇಕು, ಯಾರಾದರೂ ಪ್ರತಿಭಟನೆಯನ್ನು ಮುನ್ನಡೆಸಿದರೆ, ಪ್ರತಿಭಟನೆಯಲ್ಲಿ ಸೇರುವ ಜನರಿಂದ ಉಂಟಾಗುವ ಹಾನಿಗಳನ್ನು ಭರಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ಸೂಚಿಸಲಾಗಿದೆ.

ಆದರೆ ಅವರ ಬೆಂಬಲಿಗರು ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ ಎಂಬ ಆರೋಪವನ್ನು ಬೆಂಬಲಿಸಲು ಪುರಾವೆಗಳನ್ನು ಸಲ್ಲಿಸಲು ಸಾಧ್ಯವಾಗದ ಕಾರಣ ಪೊಲೀಸರ ಮೇಲೆ ತರಾಟೆ ತೆಗೆದುಕೊಳ್ಳಲಾಯಿತು.

Trending News