ಮೆಹಂದಿ ಫಂಕ್ಷನ್​​ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವಧು ದುರಂತ ಸಾವು..!

ದೆಹಲಿ ಮೂಲದ ಶ್ರೇಯಾರ ಕುಟುಂಬವು ಡೆಹ್ರಾಡೂನ್‌ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗಾಗಿ ಐಷಾರಾಮಿ ರೆಸಾರ್ಟ್ ಬುಕ್ ಮಾಡಿತ್ತು. ಮದುವೆಗೆ 2 ದಿನಗಳ ಮೊದಲು ಶ್ರೇಯಾ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಕುಚಿಯಾಟಲ್‌ನಲ್ಲಿರುವ ಐಷಾರಾಮಿ ರೆಸಾರ್ಟ್‌ಗೆ ಹೋಗಿದ್ದಳು.

Written by - Puttaraj K Alur | Last Updated : Jun 20, 2024, 02:03 PM IST
  • ಭವಿಷ್ಯದ ಬಗ್ಗೆ ಹಲವಾರು ಕನಸು ಕಂಡಿದ್ದ ಯುವತಿಯ ಬಾಳಿನಲ್ಲಿ ದುರಂತ!
  • ಮೆಹಂದಿ ಫಂಕ್ಷನ್​​ನಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಕುಸಿದುಬಿದ್ದು ಸಾವನ್ನಪ್ಪಿದ ವಧು
  • ವಧುವಿನ ಹಠತ್ ನಿಧನದಿಂದ ಮದುವೆಗೆ ಬಂದಿದ್ದವರಿಗೆ ಬಿಗ್‌ ಶಾಕ್‌ ಉಂಟಾಗಿದೆ
ಮೆಹಂದಿ ಫಂಕ್ಷನ್​​ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವಧು ದುರಂತ ಸಾವು..!   title=
ಯುವತಿಯ ಬಾಳಿನಲ್ಲಿ ದುರಂತ!

Delhi bride collapses and dies: ಮೆಹಂದಿ ಫಂಕ್ಷನ್​​ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವಧು ದುರಂತ ಸಾವನ್ನಪ್ಪಿರುವ ಘಟನೆ ನಡೆದಿದೆ. ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಭವಿಷ್ಯದ ಬಗ್ಗೆ ಹಲವಾರು ಕನಸು ಕಂಡಿದ್ದ ಈ ಯುವತಿ ಹೊಸ ಬದುಕಿನ ಕನಸು ಕಾಣುತ್ತ ಸಂಭ್ರಮಿಸುತ್ತಿರುವಾಗಲೇ ಕೊನೆಯುಸಿರೆಳೆದಿದ್ದಾಳೆ.

ಮೃತಳನ್ನು ದೆಹಲಿ ಮೂಲದ ಶ್ರೇಯಾ ಜೈನ್ (28) ಎಂದು ಗುರುತಿಸಲಾಗಿದೆ. ಎಂಬಿಎ ಮುಗಿಸಿರುವ ಈಕೆಯನ್ನು ಮದುವೆಯಾಗಬೇಕಿದ್ದ ವರ ಲಕ್ನೋದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಜೋಡಿ ಸತಿ-ಪತಿಗಳಾಗಿ ಸುಂದರ ಬದುಕಿನ ಬಗ್ಗೆ ಹಲವಾರು ಕನಸುಗಳನ್ನು ಕಂಡಿತ್ತು. ಆದರೆ ವಧು ದುರಂತವಾಗಿ ಸಾವನ್ನಪ್ಪಿದ್ದು, ಎರಡೂ ಕುಟುಂಬಕ್ಕೆ ದೊಡ್ಡ ಶಾಕ್‌ ಉಂಟಾಗಿದೆ. 

ಇದನ್ನೂ ಓದಿ: ದೇಶದಲ್ಲೇ ಅತಿ ಹೆಚ್ಚು ವೇತನ ಪಡೆಯುವ ಮುಖ್ಯಮಂತ್ರಿ ಯಾರು ಗೊತ್ತೆ..? ಸಿದ್ದರಾಮಯ್ಯರ ಸಂಬಳ ಎಷ್ಟಿದೆ..?

ಅಂದಹಾಗೆ ದೆಹಲಿ ಮೂಲದ ಶ್ರೇಯಾರ ಕುಟುಂಬವು ಡೆಹ್ರಾಡೂನ್‌ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗಾಗಿ ಐಷಾರಾಮಿ ರೆಸಾರ್ಟ್ ಬುಕ್ ಮಾಡಿತ್ತು. ಮದುವೆಗೆ 2 ದಿನಗಳ ಮೊದಲು ಶ್ರೇಯಾ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಕುಚಿಯಾಟಲ್‌ನಲ್ಲಿರುವ ಐಷಾರಾಮಿ ರೆಸಾರ್ಟ್‌ಗೆ ಹೋಗಿದ್ದಳು.

ವಿವಾಹದ ಹಿನ್ನೆಲೆ ಅದ್ಧೂರಿ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಗೀತದೊಂದಿಗೆ ಮೆಹೆಂದಿ ಕಾರ್ಯಕ್ರಮ ಸಹ ಆರಂಭವಾಗಿತ್ತು. ಆದರೆ ಮೆಹಂದಿ ಸಂಭ್ರಮದ ಮಧ್ಯೆ ಡ್ಯಾನ್ಸ್ ಮಾಡುವಾಗ ವಧು ಶ್ರೇಯಾ ಇದ್ದಕ್ಕಿದ್ದಂತೆಯೇ ಕುಸಿದು ಬಿದಿದ್ದಾಳೆ. 

ಇದನ್ನೂ ಓದಿ: ಬದರಿನಾಥ್ ಹೆದ್ದಾರಿ ಬಳಿ ಕಂದಕಕ್ಕೆ ಟೆಂಪೋ ಉರುಳಿ 13 ಜನರ ದಾರುಣ ಸಾವು  

ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅದಾಗಲೇ ಯುವತಿ ಸಾವನ್ನಪ್ಪಿದ್ದಾಳೆ ಅಂತಾ ವೈದ್ಯರು ಘೋಷಿಸಿದರು. ಹೃದಯರಕ್ತನಾಳದ ತೊಂದರೆಯಿಂದ ಶ್ರೇಯಾ ಸಾವನ್ನಪ್ಪಿದ್ದಾಳೆಂದು ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಶ್ರೇಯಾಳ ಹಠಾತ್‌ ಸಾವಿನಿಂದ ಎರಡೂ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News