Actress suicide: ಗಂಡನಿಂದ ಕಿರುಕುಳ ಆರೋಪ, ಯುವ ನಟಿ ನಿಗೂಢ ಸಾವು..!

ಕನ್ನಡದ ‘ಲಾಕ್​ಡೌನ್’ ಸಿನಿಮಾದಲ್ಲಿ ನಟಿಸಿದ್ದ ನಟಿ ಶಹಾನಾ ಗುರುವಾರ ರಾತ್ರಿ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

Written by - Zee Kannada News Desk | Last Updated : May 13, 2022, 08:06 PM IST
  • ರೂಪದರ್ಶಿ ಹಾಗೂ 20 ವರ್ಷದ ಯುವ ನಟಿ ಶಹಾನಾ ನಿಗೂಢ ರೀತಿಯಲ್ಲಿ ಸಾವು
  • ಕೋಝಿಕ್ಕೋಡ್ ಬಳಿಯ ಅಪಾರ್ಟ್​ಮೆಂಟ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಟಿ ಪತ್ತೆ
  • ನಟಿಯ ಪತಿ ವಿರುದ್ಧ ಕಿರುಕುಳ ಆರೋಪ ಮಾಡಿರುವ ಶಹಾನಾ ಪೋಷಕರು
Actress suicide: ಗಂಡನಿಂದ ಕಿರುಕುಳ ಆರೋಪ, ಯುವ ನಟಿ ನಿಗೂಢ ಸಾವು..! title=
ನಟಿ ಶಹಾನಾ ನಿಗೂಢ ರೀತಿಯಲ್ಲಿ ಸಾವು

ನವದೆಹಲಿ: ರೂಪದರ್ಶಿ ಹಾಗೂ ಕಾಸರಗೋಡು ಮೂಲದ 20 ವರ್ಷದ ಯುವ ನಟಿ ಶಹಾನಾ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಕೋಝಿಕ್ಕೋಡ್ ಬಳಿಯ ತಮ್ಮ ಅಪಾರ್ಟ್​ಮೆಂಟ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ. ಕಿರುಕುಳ ಆರೋಪ ಹಿನ್ನೆಲೆ ಆಕೆಯ 31 ವರ್ಷದ ಪತಿಯನ್ನು ವಿಚಾರಣೆಗಾಗಿ ಕೇರಳ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಕನ್ನಡದ ‘ಲಾಕ್​ಡೌನ್’ ಸಿನಿಮಾದಲ್ಲಿ ನಟಿಸಿದ್ದ ನಟಿ ಶಹಾನಾ ಗುರುವಾರ ರಾತ್ರಿ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಗುರುವಾರ ರಾತ್ರಿ ನಮಗೆ ಮಾಹಿತಿ ದೊರೆಯಿತು. ಸದ್ಯಕ್ಕೆ ನಾವು ಸಿಆರ್‌ಪಿಸಿಯ ಸೆಕ್ಷನ್ 174ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸಿಬಿಐನವರಂತೆ ನಟಿಸಿ ಕೋಟಿಗಟ್ಟಲೇ ಹಣಕ್ಕೆ ಬೇಡಿಕೆ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಪ್ಪ-ಮಗ!

ನಟಿಯ ಪತಿ ಸಜ್ಜದ್‍ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈತನ ವಿರುದ್ಧ ಶಹಾನಾ ಕುಟುಂಬದವರು ಹಲ್ಲೆ, ಕೊಲೆ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ. ಸಜ್ಜದ್ ತನ್ನ ಮಗಳಿಗೆ ಚಿತ್ರಹಿಂಸೆ ನೀಡುತ್ತಿದ್ದ ಎಂದು ಶಹಾನಾ ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ಮಾಡೆಲಿಂಗ್‌ಗಾಗಿ ಪಡೆದ ಕೆಲವು ಚೆಕ್‌ಗೆ ಸಂಬಂಧಿಸಿದಂತೆ ಗಂಡ-ಹೆಂಡತಿ ಜಗಳವಾಡಿದ್ದಾರೆ ಎಂಬ ಮಾಹಿತಿ ನಮಗೆ ತಿಳಿದುಬಂದಿದೆ. ತಾನೊಬ್ಬ ದೊಡ್ಡ ನಟಿಯಾಗಿ ಹೆಸರು ಮಾಡಬೇಕೆಂದು ಕನಸು ಕಂಡಿದ್ದ ಯುವನಟಿ ಕಿಟಕಿ ಸರಳಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ದೊಡ್ಡ ಸಾಧನೆ ಮಾಡಬೇಕೆಂಬ ಕನಸು ಹೊತ್ತಿದ್ದ ಯುವನಟಿ ಇದ್ದಕ್ಕಿದ್ದ ಹಾಗೇ ಈ ರೀತಿ ಮಾಡಿಕೊಂಡಿರುವುದು ನಿಜಕ್ಕೂ ದುರಂತವೇ ಸರಿ. ಕೇವಲ 20 ವರ್ಷದ ನಟಿ ಈ ರೀತಿ ಸಾವನ್ನಪ್ಪುತ್ತಾಳೆಂದು ಆಕೆಯ ಕುಟುಂಬಸ್ಥರು ಅಂದುಕೊಂಡಿರಲಿಲ್ಲ.

ಇದನ್ನೂ ಓದಿ: Shocking Video: ಕಾರು ಚಲಾಯಿಸುತ್ತಿದ್ದಂತೆಯೇ ಪ್ರಜ್ಞೆ ಕಳೆದುಕೊಂಡ ಮಹಿಳೆ.! ಮುಂದೆ ?

ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆಯೇ ಅಥವಾ ಆಕೆಯನ್ನು ಕೊಲೆ ಮಾಡಲಾಗಿದೆಯೇ ಎಂಬುದರ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಎಸಿಪಿ ಸುದರ್ಶನ್ ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News