ಕಿಡ್ನಿ ಸ್ಟೋನ್ ಮೂತ್ರದ ಮೂಲಕವೇ ಹೊರಹೋಗುವಂತೆ ಮಾಡುತ್ತೆ ಪೊದೆಗಳಲ್ಲಿ ಬೆಳೆಯುವ ಈ ಸೊಪ್ಪು!

Pindi kura for Kidney Stones: ಸೊಪ್ಪುಗಳು ಕ್ಯಾಲ್ಸಿಯಂ, ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್-ಸಿನಿಂದ ಸಮೃದ್ಧವಾಗಿದೆ. ಹಸಿರು ತರಕಾರಿಗಳಿಂದ ಸಿಗುವ ಕ್ಯಾರೋಟಿನ್ ದೇಹದಲ್ಲಿ ವಿಟಮಿನ್-ಎ ಆಗಿ ಪರಿವರ್ತನೆಗೊಂಡು ಕುರುಡುತನವನ್ನು ತಡೆಯುತ್ತದೆ.

Written by - Bhavishya Shetty | Last Updated : Jul 12, 2024, 08:03 PM IST
    • ಕ್ಯಾಲ್ಸಿಯಂ, ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್-ಸಿನಿಂದ ಸಮೃದ್ಧವಾಗಿದೆ
    • ರಕ್ತಹೀನತೆ ತಡೆದು ಉತ್ತಮ ಆರೋಗ್ಯ ಪಡೆಯಬಹುದು ಎನ್ನುತ್ತಾರೆ
    • ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ನೆಲಹಿಂಡಿ ಸೊಪ್ಪು ಕಾಣಸಿಗುತ್ತದೆ
ಕಿಡ್ನಿ ಸ್ಟೋನ್ ಮೂತ್ರದ ಮೂಲಕವೇ ಹೊರಹೋಗುವಂತೆ ಮಾಡುತ್ತೆ ಪೊದೆಗಳಲ್ಲಿ ಬೆಳೆಯುವ ಈ ಸೊಪ್ಪು!  title=
Home Remedies for Kidney Stones

Pindi kura for Kidney Stones: ಸೊಪ್ಪುಗಳು ಖನಿಜ ಮತ್ತು ಕಬ್ಬಿಣಾಂಶಗಳಲ್ಲಿ ಸಮೃದ್ಧವಾಗಿದೆ. ದೇಹದಲ್ಲಿ ಕಬ್ಬಿಣದ ಕೊರತೆಯಿಂದ, ರಕ್ತಹೀನತೆಯಿಂದ ಬಳಲುತ್ತಿರುವವರು ತಮ್ಮ ದೈನಂದಿನ ಆಹಾರದಲ್ಲಿ ಖಂಡಿತವಾಗಿಯೂ ಸೊಪ್ಪನ್ನು ಸೇರಿಸಿಕೊಳ್ಳಬೇಕು. ಇದರಿಂದ ರಕ್ತಹೀನತೆ ತಡೆದು ಉತ್ತಮ ಆರೋಗ್ಯ ಪಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

ಇದನ್ನೂ ಓದಿ: ಅಪರ್ಣಾ ಧ್ವನಿಯನ್ನು ಬದಲಾಯಿಸುತ್ತಾ ‘ನಮ್ಮ ಮೆಟ್ರೋ’? ಅಚ್ಚ ಕನ್ನಡತಿ ಅಗಲಿಕೆ ಬೆನ್ನಲ್ಲೇ ನಿರ್ಧಾರ

ಇನ್ನು ಸೊಪ್ಪುಗಳು ಕ್ಯಾಲ್ಸಿಯಂ, ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್-ಸಿನಿಂದ ಸಮೃದ್ಧವಾಗಿದೆ. ಹಸಿರು ತರಕಾರಿಗಳಿಂದ ಸಿಗುವ ಕ್ಯಾರೋಟಿನ್ ದೇಹದಲ್ಲಿ ವಿಟಮಿನ್-ಎ ಆಗಿ ಪರಿವರ್ತನೆಗೊಂಡು ಕುರುಡುತನವನ್ನು ತಡೆಯುತ್ತದೆ. ವಿಟಮಿನ್-ಸಿ ಆರೋಗ್ಯಕರ ಮೂಳೆಗಳು ಮತ್ತು ಹಲ್ಲುಗಳಿಗೆ ಅಗತ್ಯವಾದ ಪೋಷಕಾಂಶವಾಗಿದೆ.

ಅಂದಹಾಗೆ ಹಳ್ಳಿಗಳಲ್ಲಿ ಎಲ್ಲೆಂದರಲ್ಲಿ ನೆಲಹಿಂಡಿ ಸೊಪ್ಪು ಕಾಣಸಿಗುತ್ತದೆ. ಇದನ್ನು ಗೊಂಗೂರ ಅಥವಾ ಪಿಂಡಿ ಸೊಪ್ಪು ಅಂತಲೂ ಕರೆಯುತ್ತಾರೆ. ಈ ನೆಲಹಿಂಡಿ ಸೊಪ್ಪು ಕಿಡ್ನಿಯಲ್ಲಿನ ಕಲ್ಲುಗಳನ್ನು ಕರಗಿಸುವ ಅದ್ಭುತ ಗುಣ ಹೊಂದಿದೆ.

ನೆಲಹಿಂಡಿ ಸೊಪ್ಪು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಇದನ್ನು ಪುಡಿಮಾಡಿ ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕುದಿಸಿ. ಈ ನೀರನ್ನು ಅರ್ಧಕ್ಕೆ ಕುದಿಸಿದ ನಂತರ, ಸ್ಟವ್ ಆಫ್ ಮಾಡಿ. ಇದಕ್ಕೆ ಕೊಂಚ ಬೆಲ್ಲ ಸೇರಿಸಿ. ಈ ಮಿಶ್ರಣವನ್ನು ಪ್ರತಿದಿನ ಕುಡಿಯಿರಿ. ಈ ಮದ್ದು ಕುಡಿದ ನಂತರ ಒಂದು ಗಂಟೆ ಕಾಲ ಯಾವುದೇ ಆಹಾರ ತೆಗೆದುಕೊಳ್ಳಬಾರದು ಎನ್ನುತ್ತಾರೆ ತಜ್ಞರು. ಹೀಗೆ ಮಾಡಿದರೆ ಮೂತ್ರಕೋಶ ಮತ್ತು ಮೂತ್ರಪಿಂಡದಲ್ಲಿರುವ ಕಲ್ಲುಗಳು ಕರಗಿ ಮೂತ್ರದ ಮೂಲಕ ಹೋಗುತ್ತವೆ ಎಂದು ಹೇಳಲಾಗುತ್ತದೆ.

ನೆಲಹಿಂಡಿ ಸೊಪ್ಪನ್ನು ಅನೇಕರು ಬೇಯಿಸಿ ತಿನ್ನುತ್ತಾರೆ. ಇದನ್ನು ಈರುಳ್ಳಿಯೊಂದಿಗೆ ಅಥವಾ ದಾಲ್‌’ನೊಂದಿಗೆ ಬೇಯಿಸಿದರೆ ತುಂಬಾ ರುಚಿಯಾಗಿರುತ್ತದೆ. ಉತ್ತಮ ಆರೋಗ್ಯ ಕೂಡ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಪಾಕಿಸ್ತಾನಕ್ಕೆ ಬಂದ್ರೆ ಭಾರತವನ್ನೇ ಮರೆಯುವಂತೆ ಮಾಡುತ್ತೇವೆ! ಪಾಕ್ ಕ್ರಿಕೆಟಿಗ

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News