Water Unknown Facts : ಏಕೆ ಬಾಯಾರಿಕೆಯಾಗುತ್ತೆ? ಬೇಸಿಗೆಯಲ್ಲಿ ಎಷ್ಟು ನೀರು ಕುಡಿಯಬೇಕು?

ದೇಹಕ್ಕೆ ಸಾಕಷ್ಟು ನೀರು ಸಿಗದಿದ್ದರೆ, ಸಾವು ಸಂಭವಿಸಬಹುದು. ದೇಹಕ್ಕೆ ನೀರಿನ ಪ್ರಾಮುಖ್ಯತೆ ಮತ್ತು ನಮಗೆ ಏಕೆ ಬಾಯಾರಿಕೆಯಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಸಂಗತಿಗಳು ನಿಮಗಾಗಿ ಇಲ್ಲಿದೆ ನೋಡಿ..

Written by - Channabasava A Kashinakunti | Last Updated : Mar 22, 2022, 03:54 PM IST
  • ನೀರಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ
  • ದೇಹಕ್ಕೆ ಸಾಕಷ್ಟು ನೀರು ಸಿಗದಿದ್ದರೆ, ಸಾವು ಸಂಭವಿಸಬಹುದು
  • ನಮಗೆ ಏಕೆ ಬಾಯಾರಿಕೆಯಾಗುತ್ತದೆ?
Water Unknown Facts : ಏಕೆ ಬಾಯಾರಿಕೆಯಾಗುತ್ತೆ? ಬೇಸಿಗೆಯಲ್ಲಿ ಎಷ್ಟು ನೀರು ಕುಡಿಯಬೇಕು? title=

ನವದೆಹಲಿ : ನೀರಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ಕಷ್ಟ. ನೀರಿದ್ದರೆ ಜೀವನ ಎಂಬ ಮಾತೂ ಇದೆ. ಹಾಗೆ ನಮ್ಮ ದೇಹಕ್ಕೆ ನೀರಿನ ಪ್ರಾಮುಖ್ಯತೆಯು ಎಷ್ಟಿದೆ? ದೇಹಕ್ಕೆ ಸಾಕಷ್ಟು ನೀರು ಸಿಗದಿದ್ದರೆ, ಸಾವು ಸಂಭವಿಸಬಹುದು. ದೇಹಕ್ಕೆ ನೀರಿನ ಪ್ರಾಮುಖ್ಯತೆ ಮತ್ತು ನಮಗೆ ಏಕೆ ಬಾಯಾರಿಕೆಯಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಸಂಗತಿಗಳು ನಿಮಗಾಗಿ ಇಲ್ಲಿದೆ ನೋಡಿ..

ದೇಹಕ್ಕೆ ನೀರು ಏಕೆ ಬೇಕು?

ಜಿಡಿ ಗೋಯೆಂಕಾ ವಿಶ್ವವಿದ್ಯಾನಿಲಯ(GD Goenka University)ದ ಸಹ ಪ್ರಾಧ್ಯಾಪಕ ಮತ್ತು ಸಾರ್ವಜನಿಕ ಆರೋಗ್ಯ ವಿಜ್ಞಾನಿ ಡಾ.ಪ್ರಣವ್ ಪ್ರಕಾಶ್ ಹೇಳುವ ಪ್ರಕಾರ, 'ನಮ್ಮ ಒಟ್ಟು ದೇಹದ ತೂಕದ ಸುಮಾರು 60% ನೀರು. ನಮ್ಮ ದೇಹವು ನೀರಿನ ಮೂಲಕ ಆಮ್ಲ-ಬೇಸ್ ಅನ್ನು ಸಮತೋಲನಗೊಳಿಸುತ್ತದೆ. ಗ್ಲೂಕೋಸ್ ಮತ್ತು ಇತರ ಪೋಷಕಾಂಶಗಳು ದೇಹದಲ್ಲಿ ಇರುವ ಸಾಕಷ್ಟು ಪ್ರಮಾಣದ ನೀರಿನ ಮೂಲಕ ಮಾತ್ರ ದೇಹದ ಪ್ರತಿಯೊಂದು ಜೀವಕೋಶವನ್ನು ತಲುಪುತ್ತವೆ. ನೀರಿನ ಕಾರಣದಿಂದಾಗಿ ರಕ್ತದ ಪಿಹೆಚ್ ಮಟ್ಟವನ್ನು ಕಾಪಾಡಿಕೊಳ್ಳಲಾಗುತ್ತದೆ, ನರಗಳು ಮತ್ತು ನೀರಿನ ಕೆಲಸವು ಮೆದುಳು ಮತ್ತು ದೇಹದ ಇತರ ಭಾಗಗಳ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇದನ್ನೂ ಓದಿ : ಮಲಗುವ ಮುನ್ನ ಈ ಆಹಾರ ಸೇವಿಸಿದರೆ ಸುಖ ನಿದ್ದೆ ಪ್ರಾಪ್ತಿಯಾಗುತ್ತದೆ

ಏಕೆ ಬಾಯಾರಿಕೆಯಾಗುತ್ತದೆ?

ಬಾಯಾರಿಕೆಯಾಗುವುದು ಸಹ ಸಂಪೂರ್ಣ ಪ್ರಕ್ರಿಯೆಯಾಗಿದೆ. ದೇಹದಲ್ಲಿ ಶೇಕಡಾ ಒಂದರಷ್ಟು ನೀರಿನ(Water) ಕೊರತೆ ಉಂಟಾದಾಗ ಬಾಯಾರಿಕೆಯ ಅನುಭವವಾಗುತ್ತದೆ. ಈ ಕೊರತೆಯು ಹೆಚ್ಚಾಗಲು ಪ್ರಾರಂಭಿಸಿದಾಗ, ಅದರ ಪರಿಣಾಮವು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಡಾ.ಪ್ರಣವ್ ವಿವರಿಸುತ್ತಾರೆ, 'ದೇಹದಲ್ಲಿ ನೀರಿನ ಮಟ್ಟ ಕಡಿಮೆಯಾದಾಗ, ನಮ್ಮ ಮೆದುಳಿಗೆ ಮಾಹಿತಿ ಸಿಗುತ್ತದೆ. ಮೆದುಳಿನ ಹೈಪೋಥಾಲಮಸ್‌ಗೆ ಜೋಡಿಸಲಾದ ಗ್ರಾಹಕದ ಮೂಲಕ ಈ ಮಾಹಿತಿಯನ್ನು ಸ್ವೀಕರಿಸಲಾಗುತ್ತದೆ. ಇದರಿಂದ ನಮಗೆ ಬಾಯಾರಿಕೆಯಾಗುತ್ತದೆ. ಬಾಯಾರಿಕೆಯ ಈ ಚಿಹ್ನೆಯನ್ನು ನಾವು ದೀರ್ಘಕಾಲದವರೆಗೆ ನಿರ್ಲಕ್ಷಿಸಿದರೆ, ನಮ್ಮ ಗಂಟಲು ಒಣಗಲು ಪ್ರಾರಂಭಿಸುತ್ತದೆ ಮತ್ತು ನಾವು ತಲೆತಿರುಗುವಿಕೆಯನ್ನು ಅನುಭವಿಸಲು ಪ್ರಾರಂಭಿಸುತ್ತೇವೆ. ಈ ರೀತಿ ನೀರು ಕುಡಿಯದಿದ್ದರೆ ನೀರಿನ ಕೊರತೆಯಿಂದ ಮೂರ್ಛೆ ಹೋಗಬಹುದು. ದೇಹದಲ್ಲಿ ಶೇ.20ರಷ್ಟು ನೀರಿನ ಕೊರತೆಯಾದರೆ ವ್ಯಕ್ತಿಯೂ ಸಾಯಬಹುದು ಎಂಬುದಂತೂ ಸತ್ಯ. ತಜ್ಞರ ಪ್ರಕಾರ, ದೇಹಕ್ಕೆ ನೀರು ಬಹಳ ಮುಖ್ಯ, ಅದಕ್ಕಾಗಿಯೇ ಕಾಲಕಾಲಕ್ಕೆ ಬಾಯಾರಿಕೆಯನ್ನು ಅನುಭವಿಸುವ ಈ ಕಾರ್ಯವಿಧಾನವು ದೇಹದಲ್ಲಿ ಅಭಿವೃದ್ಧಿಗೊಂಡಿದೆ.

ಬೇಸಿಗೆಯಲ್ಲಿ ಆರೋಗ್ಯ ಕಾಳಜಿ ವಹಿಸುವುದು ಹೇಗೆ?

ಡಾ.ಪ್ರಣವ್ ಪ್ರಕಾರ, ದೇಹದಲ್ಲಿ ಆಸಿಡ್-ಬೇಸ್ ಸಮತೋಲನವು ತುಂಬಾ ಮುಖ್ಯವಾಗಿದೆ. ಅದು ಬದಲಾದರೆ ಅದು ಜೀವಕ್ಕೆ ಅಪಾಯವಾಗಬಹುದು. ನೀರಿನ ಕೊರತೆಯಿಂದ ತಲೆಸುತ್ತು ಬಂದರೆ ಅಥವಾ ಇನ್ಯಾವುದೇ ಸಮಸ್ಯೆ ಎದುರಾದರೆ ಮೊದಲು ಎಲೆಕ್ಟ್ರೋಲೈಟ್ ತೆಗೆದುಕೊಂಡು ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಅದರಲ್ಲೂ ಬೇಸಿಗೆ ಕಾಲದಲ್ಲಿ ಉಪ್ಪು ಮತ್ತು ಸಕ್ಕರೆ(Salt and Sugar) ಬೆರೆಸಿದ ನೀರನ್ನು ಕುಡಿಯಿರಿ. ಇದರಿಂದ ದೇಹದಲ್ಲಿ ನೀರಿನ ಮಟ್ಟ ಉಳಿಯುತ್ತದೆ ಮತ್ತು ನಿರ್ಜಲೀಕರಣದ ಸಮಸ್ಯೆ ಇರುವುದಿಲ್ಲ.

ಇದನ್ನೂ ಓದಿ : Diabetes: ಟೈಪ್ 2 ಡಯಾಬಿಟಿಸ್ ರೋಗಿಗಳು ಬ್ಲಡ್ ಶುಗರ್ ನಿಯಂತ್ರಿಸಲು ಈ 4 ಬಗೆಯ ಎಲೆಗಳನ್ನು ತಪ್ಪದೇ ಸೇವಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News