Yuva: ʻಯುವʼ ಪ್ರೀ-ರಿಲೀಸ್‌ ಇವೆಂಟ್‌ನಲ್ಲಿ ಕಣ್ಣೀರಿಟ್ಟ ಅಶ್ವಿನಿ ಪುನೀತ್‌ ರಾಜ್‌ಕುಮಾರ್:‌ ಅಪ್ಪು ಮಡದಿ ಅತ್ತಿದ್ದೇಕೆ??

Yuva Pre-release Event: ಚಂದನವನದ ಹೊಸ ಪ್ರತಿಭಾನ್ವಿತ ನಟ ಯುವ ರಾಜ್‌ಕುಮಾರ್‌ ನಾಯಕ ನಟನಾಗಿ ಕಾಣಿಸಿಕೊಂಡಿರುವ ʻಯುವʼ ಸಿನಿಮಾದ ಪ್ರೀ-ರಿಲೀಸ್‌ ಇವೆಂಟ್‌ನಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಕಣ್ಣಿರು ಹಾಕಿದ್ದಾರೆ. ಇದಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ.

Written by - Zee Kannada News Desk | Last Updated : Mar 24, 2024, 09:09 PM IST
  • ʻಯುವʼ ಸಿನಿಮಾದ ಪ್ರೀ-ರಿಲೀಸ್‌ ಇವೆಂಟ್‌ ನಿನ್ನೆ ಮಾರ್ಚ್‌ 23 ರಂದು ಶನಿವಾರ ಹೊಸಪೇಟೆಯ ಡಾ ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು
  • ಯುವ ಪ್ರೀ-ರಿಲೀಸ್‌ ಸಮಾರಂಭದಲ್ಲಿ ಗಾಯಕ ವಿಜಯ್‌ ಪ್ರಕಾಶ್‌ ವೇದಿಕೆ ಮೇಲೆ ʻರಾಜಕುಮಾರʼ ಚಿತ್ರದ ಬೊಂಬೆ ಹೇಳುತೈತೆ...' ಹಾಡುನ್ನು ವೇದಿಕೆ ಮೇಲೆ ಹಾಡಿದ್ದಾರೆ.
  • ವೇದಿಕೆ ಮೇಲೆ ನಿಂತು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ " ಯುವ ಚಿತ್ರತಂಡಕ್ಕೆ ಒಳ್ಳೆಯದಾಗಲಿ" ಎಂದು ಶುಭ ಹಾರೈಸಿದರು.
Yuva: ʻಯುವʼ ಪ್ರೀ-ರಿಲೀಸ್‌ ಇವೆಂಟ್‌ನಲ್ಲಿ ಕಣ್ಣೀರಿಟ್ಟ ಅಶ್ವಿನಿ ಪುನೀತ್‌ ರಾಜ್‌ಕುಮಾರ್:‌ ಅಪ್ಪು ಮಡದಿ ಅತ್ತಿದ್ದೇಕೆ?? title=

Ashwini Puneeth Rajkumar At Yuva Pre-release Event: ಸ್ಯಾಂಡಲ್‌ವುಡ್‌ ನೂತನ ಪ್ರತಿಭೆ ದೊಡ್ಮನೆ ಕುಡಿ ನಟ ಯುವ ರಾಜ್‌ಕುಮಾರ್‌ ಅಭಿನಯದ ʻಯುವʼ ಸಿನಿಮಾದ ಪ್ರೀ-ರಿಲೀಸ್‌ ಇವೆಂಟ್‌ ನಿನ್ನೆ ಮಾರ್ಚ್‌ 23 ರಂದು ಶನಿವಾರ ಹೊಸಪೇಟೆಯ ಡಾ ಪುನೀತ್‌ ರಾಜಕುಮಾರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಪ್ಪು ಪತ್ನಿ ಅಶ್ವಿನಿನ ಪುನೀತ್‌ ರಾಜ್‌ಕುಮಾರ್‌ ಭಾವುಕರಾಗಿದ್ದರು.

ಯುವ ಪ್ರೀ-ರಿಲೀಸ್‌ ಸಮಾರಂಭದಲ್ಲಿ ಗಾಯಕ ವಿಜಯ್‌ ಪ್ರಕಾಶ್‌  ವೇದಿಕೆ ಮೇಲೆ ʻರಾಜಕುಮಾರʼ ಚಿತ್ರದ ಬೊಂಬೆ ಹೇಳುತೈತೆ...' ಹಾಡುನ್ನು ವೇದಿಕೆ ಮೇಲೆ ಹಾಡಿದ್ದಾರೆ. ಅದೇ ಸಂದರ್ಭದಲ್ಲಿ ವೇದಿಕೆ ಎದುರು ಕೂತಿದ್ದ ಅಶ್ವಿನಿ ಪುನೀತ್‌ ರಾಜಕುಮಾರ್‌ ಅಪ್ಪು ಅವರನ್ನು ನೆನೆದು ಕಣ್ಣೀರು ಹಾಕಿದರು. ನಂತರ ಅವರು ವೇದಿಕೆ ಬಂದು ಮಾತನ್ನು ಶುರು ಮಾಡುತ್ತಿದ್ದಂತೆ ಅಭಿಮಾನಿಗಳು ಅಪ್ಪು ಅಪ್ಪು ಎಂದು ಜಯಘೋಷ ಹಾಕಲು ಶುರುಮಾಡಿದರು.

ಇದನ್ನೂ ಓದಿ: ಯುವ ನನ್ನ ಮಗನಲ್ಲ, ಅಪ್ಪು ಮಗ : ತಮ್ಮನನ್ನು ನೆನೆದು ರಾಘಣ್ಣ ಭಾವುಕ

ವೇದಿಕೆ ಮೇಲೆ ನಿಂತು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ " ಯುವ ಚಿತ್ರತಂಡಕ್ಕೆ ಒಳ್ಳೆಯದಾಗಲಿ" ಎಂದು ಶುಭ ಹಾರೈಸಿದರು. ಬಳಿಕ ವೇದಿಕೆ ಮೇಲೆ ಮಾತನಾಡಿದ ಯುವ ರಾಜ್‌ಕುಮಾರ್‌ ಯುವ ಸಿನಿಮಾ ತಮ್ಮ ಚಿಕ್ಕಪ್ಪ ಪುನೀತ್‌ ರಾಜ್‌ಕುಮಾರ್ ಕಾರಣ‌ ಎಂದಿದ್ದಾರೆ. ಯುವ ರಾಜ್‌ಕುಮಾರ್‌, "ಅಪ್ಪು ನನ್ನನ್ನು ಇಲ್ಲಿವರೆಗೆ ತಂದು ನಿಮ್ಮ ಮಡಿಲಿಗೆ ಹಾಕಿದ್ದಾರೆ. ಮುಂದೆ ನನ್ನನ್ನು ನೀವೇ ನೋಡಿಕೊಳ್ಳಬೇಕು. ನೀವು ಹೇಗೆ ಮುನ್ನಡೆಸುತ್ತಿರೋ ಹಾಗೇ ನಾನು ಸಾಗುತ್ತೇನೆ" ಎಂದಿದ್ದಾರೆ.

ಯುವ ರಾಜ್‌ಕುಮಾರ್‌ ಮಾತನ್ನು ಮುಂದುವರೆಸುತ್ತಾ "ಡಾ ರಾಜ್‌ ಕುಟುಂಬದಲ್ಲಿ ಹುಟ್ಟಿದ ಮಾತ್ರಕ್ಕೆ ನಟನಾ ಅವಕಾಶಗಳು ಸುಲಭವಾಗಿ ಸಿಗುತ್ತವೆ ಎಂಬುದು ಸುಳ್ಳು. ನಾನು ನಟನಾಗುತ್ತೇನೆ ಎಂದು ಚಿಕ್ಕವನಿದ್ದಾಗಲೇ ಮನೆಯಲ್ಲಿ ನಿರ್ಧರಿಸಿಬಿಟ್ಟಿದ್ದರು. ಆದರೆ ನಾನು ಇಷ್ಟು ದಿವಸ ಅವಕಾಶಕ್ಕಾಗಿ ಕಾದಿದ್ದೆ. ಕೊನೆಗೆ ಸಮರ್ಥವಾಗಿ ಇಷ್ಟವಾಗುವ ರೀತಿಯಲ್ಲೂ ಸಿದ್ಧವಾಗಿ ಸಿನಿಮಾ ಮಾಡಿದ್ದೇನೆ. ಈ ಸಿನಿಮಾ ಆಗಿದ್ದಕ್ಕೆ ನಮ್ಮ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಕಾರಣ. ಮಾರ್ಚ್‌ 29ಕ್ಕೆ ನಮ್ಮ ಸಿನಿಮಾ ರಿಲೀಸ್ ಆಗುತ್ತಿದೆ, ನೀವೆಲ್ಲರೂ ಹರಸಿ, ಹಾರೈಸಿ" ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News