Yash: ರಾಕಿಭಾಯ್‌ ರಾಜಕೀಯಕ್ಕೆ ಎಂಟ್ರೀ ಕೊಡ್ತಾರಾ? ಯಶ್‌ ಹೇಳಿದ್ದೇನು?

Yash Entry to Politics: ಚಂದನವನದ ನಟ ರಾಕಿಂಗ್‌ ಸ್ಟಾರ್‌ ಯಶ್‌ ಇತ್ತೀಚೆಗೆ ಬಳ್ಳಾರಿಯಲ್ಲಿಯ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನದ ಉದ್ಘಾಟನೆ ಆಗಮಿಸಿದಾಗ ರಾಜಕೀಯಕ್ಕೆ ಹೆಜ್ಜೆ ಹಾಕಿವುದರ ಬಗ್ಗೆ ಮಾತನಾಡಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Mar 1, 2024, 12:12 PM IST
  • ನಟ ಯಶ್‌ ಇದಕ್ಕೂ ಮುನ್ನ ಉತ್ತರ ಕರ್ನಾಟಕಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದಾರೆ. ಈ ನಟ ಕೆರೆಯ ಜೀರ್ಣೋದ್ಧಾರ ಕೆಲಸ ಮಾಡಲು ಹೋಗಿದ್ದರು
  • ಕೆಜಿಎಫ್‌ ಚಿತ್ರ ಆಂಧ್ರದಲ್ಲಿ ಹಿಟ್ ಆಗಲು ಸಾಯಿಯವರಿಗಿರುವ ಸಿನಿಮಾ ಮೇಲಿನ ಪ್ರೀತಿ ಹಾಗೂ ವ್ಯಾಮೋಹ.
  • ರಾಕಿಂಗ್‌ ಸ್ಟಾರ್‌ ಬಳ್ಳಾರಿಗೆ ಬಂದಾಗ ಬಿಳಿ ಧೋತಿ ಮತ್ತು ಶಾಲು ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಗಮನ ಸೆಳೆದಿದ್ದಾರೆ.
Yash: ರಾಕಿಭಾಯ್‌ ರಾಜಕೀಯಕ್ಕೆ ಎಂಟ್ರೀ ಕೊಡ್ತಾರಾ? ಯಶ್‌ ಹೇಳಿದ್ದೇನು? title=

Yash At Amrutheshwara Temple Inauguration: ಸ್ಯಾಂಡಲ್‌ವುಡ್‌ ನಟ ರಾಕಿಂಗ್‌ ಸ್ಟಾರ್ ಯಶ್‌ ಇತ್ತೀಚೆಗೆ ಬಳ್ಳಾರಿಗೆ ಹೋಗಿದ್ದರು. ಈ ನಟ ಬೆಂಗಳೂರಿನಿಂದ ಸ್ಪೆಷಲ್‌ ಪ್ರಯಾಣ ಮಾಡಿದ್ದು, ಅಲ್ಲಿಯ ಜನರು ನೆಚ್ಚಿನ ನಟನನ್ನು ನೋಡಿ ಹುಚ್ಚೆದ್ದು ಕುಣಿದಿದ್ದಾರೆ. ಬಳ್ಳಾರಿಯಲ್ಲಿ ಮೊದಲೇ ಧೂಳು, ಬಿಸಿಲು ಹೆಚ್ಚಾಗಿಯೇ ಇದ್ದು, ಅದರಲ್ಲೂ ಇದೀಗ ಬೇಸಿಗೆ ಕಾಲ. ಆದರೂ ಸಹ ಜನರು ಬಿಸಿಲನ್ನು ಮರೆತು ಜನರು ಸೇರಿದ್ದರು.
 
ನಟ ಯಶ್‌ ಇದಕ್ಕೂ ಮುನ್ನ ಉತ್ತರ ಕರ್ನಾಟಕಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದಾರೆ. ಈ ನಟ ಕೆರೆಯ ಜೀರ್ಣೋದ್ಧಾರ ಕೆಲಸ ಮಾಡಲು ಹೋಗಿದ್ದರು. ಆದರೇ ಈ ಬಾರಿ ರಾಕಿಭಾಯ್‌ ಬಳ್ಳಾರಿಗೆ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನದ ಉದ್ಘಾಟನೆ ಆಗಮಿಸಿದ್ದರು. ಇದಕ್ಕೆ ಕಾರಣ ಹಂಚಿಕೆದಾರ ಸಾಯಿಯವರು. ನಟ ಯಶ್‌ ಅಭಿನಯದ ಕೆಜಿಎಫ್ ಚಾಪ್ಟರ್-1 ಅನ್ನು ಅದ್ಧೂರಿಯಾಗಿ ಅಷ್ಟೇ ಪ್ಯಾಶಿನೇಟ್ ರೀತಿಯಲ್ಲಿ ಸಾಯಿ ರಿಲೀಸ್‌ ಮಾಡಿದ್ದರು.

ಇದನ್ನೂ ಓದಿ: Watch: ಬಳ್ಳಾರಿಯ ಅಮೃತೇಶ್ವರ ದೇವಸ್ಥಾನದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗಿಯಾದ ರಾಜಮೌಳಿ, ಯಶ್.. ವಿಡಿಯೋ ವೈರಲ್!‌

ಕೆಜಿಎಫ್‌ ಚಿತ್ರ ಆಂಧ್ರದಲ್ಲಿ ಹಿಟ್ ಆಗಲು ಸಾಯಿಯವರಿಗಿರುವ ಸಿನಿಮಾ ಮೇಲಿನ ಪ್ರೀತಿ ಹಾಗೂ ವ್ಯಾಮೋಹವೂ. ಇದಕ್ಕಾಗಿಯೇ ತುಫಾನ್‌ ದೇವಸ್ಥಾನದ ಉದ್ಘಾಟನೆಗೆ ಬರುತ್ತೇನೆ ಎಂದಿದ್ದು, ಆ ಮಾತನ್ನು ಇದೀಗ ಉಳಿಸಿಕೊಂಡಿದ್ದಾರೆ. ಸದ್ಯ ಟಾಕ್ಸಿಕ್‌ ಕೆಲಸ ಶುರುವಾಗಬೇಕು ಎನ್ನುವಾಗಲೇ ರಾಕಿಭಾರ್‌ ಬಳ್ಳಾರಿಗೆ ಬಂದು ಭಿಮಾನಿಗಳ ಕಣ್ಣಲ್ಲಿ ಮಳೆ ಸುರಿಸಿದ್ದಾರೆ. 

ರಾಕಿಂಗ್‌ ಸ್ಟಾರ್‌ ಬಳ್ಳಾರಿಗೆ ಬಂದಾಗ ಬಿಳಿ ಧೋತಿ ಮತ್ತು ಶಾಲು ಧರಿಸಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಇದ ನೋಡ್ತಾಯಿದ್ದರೇ ಯಶ್‌ ರಾಜಕೀಯ ಎಂಟ್ರಿ ಎಂಬುದರ ಬಗ್ಗೆ ಪ್ರಶ್ನೆ ಕಾಡ್ತಾಯಿದ್ದು, ಸದ್ಯ ಈ ನಟ ಪ್ರತಿಕ್ರಿಯಿಸಿದ್ದಾರೆ. ನಟ ಯಶ್‌ "ನಾನು ರಾಜಕೀಯಕ್ಕೆ ಬರಲ್ಲ. ನನಗೆ ಆಸಕ್ತಿ ಇಲ್ಲ.‘ಟಾಕ್ಸಿಕ್’ ಸಿನಿಮಾ ಬಿಟ್ಟು ಯಾವುದರ ಕಡೆ ಕೂಡ ಗಮನ ಕೊಡುತ್ತಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News