ಕೋಟಿ ಗಟ್ಟಲೇ ಕಾರು ತಗೋಂಡು ಶೋಕಿ ಮಾಡೋರ ನಡುವೆ, ಪ್ರತಿದಿನ 350 ಬಡವರ ಹೊಟ್ಟೆ ತುಂಬಿಸುತ್ತಿದ್ದಾನೆ ಈ ನಟ..!

Actors social work : ಸಿನಿಮಾ ತಾರೆಯರಿಗೆ ಕೋಟಿಗಟ್ಟಲೆ ಆಸ್ತಿ ಇರುತ್ತದೆ... ಕೆಲವರು ಎಂಜಾಯ್‌ ಮಾಡೋಕೆ ಅದನ್ನ ಬಳಸಿದ್ರೆ ಇನ್ನೂ ಕೆಲವು ನಟರು, ತಮ್ಮನ್ನ ಬೆಳೆಸಿದ ಅಭಿಮಾನಿಗಳಿಗೆ ಏನಾದರೂ ಸಹಾಯ ಮಾಡ್ಬೇಕು ಎನ್ನುವ ದಾರಿ ಹಿಡಿಯುತ್ತಾರೆ.. ಈ ಪೈಕಿ ಇಲ್ಲೊಬ್ಬ ನಟ, ಪ್ರತಿ ದಿನ 350 ಜನರ ಹೊಟ್ಟೆ ತುಂಬಿಸುವ ಮೂಲಕ ಮಾದರಿಯಾಗಿದ್ದಾರೆ..

Written by - Krishna N K | Last Updated : Jul 24, 2024, 09:38 PM IST
    • ಸಿನಿಮಾ ತಾರೆಯರಿಗೆ ಕೋಟಿಗಟ್ಟಲೆ ಆಸ್ತಿ ಇರುತ್ತದೆ.
    • ಕೆಲವರು ಎಂಜಾಯ್‌ ಮಾಡೋಕೆ ಅದನ್ನ ಬಳಸುತ್ತಾರೆ..
    • ಕೆಲವು ನಟರು ಸಾಮಾಜಿಕ ಒಳಿತಿಗಾಗಿ ಖರ್ಚು ಮಾಡುತ್ತಾರೆ..
ಕೋಟಿ ಗಟ್ಟಲೇ ಕಾರು ತಗೋಂಡು ಶೋಕಿ ಮಾಡೋರ ನಡುವೆ, ಪ್ರತಿದಿನ 350 ಬಡವರ ಹೊಟ್ಟೆ ತುಂಬಿಸುತ್ತಿದ್ದಾನೆ ಈ ನಟ..! title=
Sundeep Kishan

Sundeep Kishan : ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಕಿಚ್ಚ ಸುದೀಪ್‌, ಮೆಗಾಸ್ಟಾರ್ ಚಿರಂಜೀವಿ, ದಳಪತಿ ವಿಜಯ್‌ ಸೇರಿದಂತೆ ಹಲಾವರು ನಟರು ನಟನೆ ಜೊತೆ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ.. ಕೆಲವು ಹೀರೋಗಳು ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ. ಟಾಲಿವುಡ್‌ನ ಪ್ರತಿಭಾವಂತ ನಾಯಕ ಸಂದೀಪ್ ಕಿಶನ್ ಈ ವರ್ಗಕ್ಕೆ ಸೇರಿದ್ದಾರೆ.

ಸದ್ಯ ಕಿಶನ್‌ ಕಾಲಿವುಡ್ ಸ್ಟಾರ್ ಧನುಷ್ ಅಭಿನಯದ ʼರಾಯನ್ʼ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಜುಲೈ 26 ರಂದು ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಸಂದೀಪ್ ಕಿಶನ್ ಈ ಸಿನಿಮಾದ ಪ್ರಚಾರದ ಭಾಗವಾಗಿ ಮಾಧ್ಯಮಗಳ ಜೊತೆ ಸಂವಾದ ನಡೆಸಿದರು. 

ಇದನ್ನೂ ಓದಿ:ಕೆಜಿಎಫ್ 3ಗೆ ತಮಿಳು ನಟ ಅಜಿತ್ ಹೀರೋ..!? ಕನ್ನಡಿಗ ಯಶ್‌ ಗತಿ..? ಈ ಸುದ್ದಿ ನಿಜವೇ..? 

ಈ ವೇಳೆ ನಟ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಅನೇಕ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡರು. ಅದರ ಭಾಗವಾಗಿ ಅವರು ನಡೆಸುತ್ತಿರುವ ವಿವಾಹ ಭೋಜನಂಬು ಎಂಬ ರೆಸ್ಟೋರೆಂಟ್ ಕುರಿತು ಹಲವು ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ರೆಸ್ಟೋರೆಂಟ್ ಏಳು ಶಾಖೆಗಳನ್ನು ಹೊಂದಿದ್ದು, ಪ್ರತಿ ಶಾಖೆಯ ರೆಸ್ಟೋರೆಂಟ್‌ನಿಂದ ಪ್ರತಿದಿನ 50 ಜನರಿಗೆ ಉಚಿತ ಊಟವನ್ನು ಕಳುಹಿಸುತ್ತಿದ್ದಾರೆ. ಪ್ರತಿ ರೆಸ್ಟೊರೆಂಟ್‌ ಪ್ರತಿದಿನ ಬಡವರು, ಕಾರ್ಮಿಕರು, ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳಿಗೆ ಆಹಾರ ಕಳುಹಿಸುತ್ತದೆ. ಅಂದರೆ ಪ್ರತಿದಿನ ಸುಮಾರು 350 ಬಡವರ ಹೊಟ್ಟೆ ತುಂಬಿಸುತ್ತಿದ್ದಾರೆ ಕಿಶನ್‌.

ಇದನ್ನೂ ಓದಿ:ಈ ಬಿಗ್ ಬಾಸ್ ಬೆಡಗಿ ಯಾರು ಅಂತ ಗೊತ್ತಾಯ್ತಾ..? ನಿಮ್ಮ ಫೇವರಿಟ್‌ ಇರಬಹುದು.. ಗೆಸ್‌ ಮಾಡಿ..

ಅಲ್ಲದೇ ತಿಂಗಳಿಗೆ ಸುಮಾರು ನಾಲ್ಕೂವರೆ ಲಕ್ಷ ಮೌಲ್ಯದ ಉಚಿತ ಆಹಾರ ವಿತರಿಸುತ್ತಿದ್ದೇವೆ ಎಂದು ಸಂದೀಪ್ ಕಿಶನ್ ತಿಳಿಸಿದರು. ನಾನು ಹೀರೋ ಆಗಿ ಜನರಿಗೆ ಏನು ಮಾಡಬಹುದು ಎಂದು ಯೋಚಿಸಿದಾಗ ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಿದೆ. ಈ ಮೂಲಕ ಅನೇಕರಿಗೆ ಉದ್ಯೋಗ ನೀಡಿದ್ದೇನೆ. ಜತೆಗೆ ಎಷ್ಟೋ ಜನರ ಹೊಟ್ಟೆ ತುಂಬಿಸುತ್ತಿದ್ದೇನೆ ಎಂದು ಹೇಳಿಕೊಂಡರು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News