ಪ್ರತಿದಿನ 3 ಗಂಟೆ ವರ್ಕೌಟ್ ಮಾಡುತ್ತಿದ್ದ ಸಿದ್ಧಾರ್ಥ್ ಶುಕ್ಲಾ: ಡಾಕ್ಟರ್ ನೀಡಿದ್ದರು ಎಚ್ಚರಿಕೆ..!

ಕೋವಿಡ್ ನಿಯಮಗಳ ಪ್ರಕಾರ ಮುಂಬೈನ ಒಶಿವರ ಚಿತಾಗಾರದಲ್ಲಿ ‘ಬಾಲಿಕಾ ವಧು’ ಖ್ಯಾತಿಯ ನಟ ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆ ನೆರವೇರಿದೆ.

Written by - Puttaraj K Alur | Last Updated : Sep 4, 2021, 09:47 AM IST
  • ಹೆಚ್ಚುಹೊತ್ತು ವರ್ಕೌಟ್ ಮಾಡದಂತೆ ನಟ ಸಿದ್ಧಾರ್ಥ್ ಶುಕ್ಲಾಗೆ ಸಲಹೆ ನೀಡಿದ್ದ ವೈದ್ಯರು
  • ಕೋವಿಡ್ ನಿಯಮಗಳ ಪ್ರಕಾರ ಮುಂಬೈನ ಒಶಿವರ ಚಿತಾಗಾರದಲ್ಲಿ ನೆರವೇರಿದ ನಟನ ಅಂತ್ಯಕ್ರಿಯೆ
  • ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆ ಮುಗಿಯುವವರೆಗೂ ಬಿಕ್ಕಿ ಬಿಕ್ಕಿ ಅತ್ತ ಪ್ರೇಯಸಿ ಶೆಹನಾಜ್ ಗಿಲ್
ಪ್ರತಿದಿನ 3 ಗಂಟೆ ವರ್ಕೌಟ್ ಮಾಡುತ್ತಿದ್ದ ಸಿದ್ಧಾರ್ಥ್ ಶುಕ್ಲಾ: ಡಾಕ್ಟರ್ ನೀಡಿದ್ದರು ಎಚ್ಚರಿಕೆ..!  title=
ಮುಂಬೈನಲ್ಲಿ ನಟ ಸಿದ್ಧಾರ್ಥ್ ಶುಕ್ಲಾ ಅಂತ್ಯಕ್ರಿಯೆ ನೆರವೇರಿದೆ (Photo Courtesy: @Zee News)

ನವದೆಹಲಿ: ಬಿಗ್​ ಬಾಸ್ ಸೀಸನ್​ 13ರ ವಿನ್ನರ್, ‘ಬಾಲಿಕಾ ವಧು’ ಖ್ಯಾತಿಯ ನಟ ಸಿದ್ಧಾರ್ಥ್ ಶುಕ್ಲಾ(Sidharth Shukla) ತಮ್ಮ 40ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬ್ರಹ್ಮಕುಮಾರಿ ನಿಯಮಗಳ ಪ್ರಕಾರ ಮುಂಬೈನಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿದೆ. ಪ್ರಸಿದ್ಧ ನಟನ ಸಾವಿಗೆ ಇಡೀ ಬಾಲಿವುಡ್ ಚಿತ್ರರಂಗಕ್ಕೆ ಕಂಬನಿ ಮಿಡಿದಿದೆ. ಸಿದ್ಧಾರ್ಥ್ನಿಧನಕ್ಕೆ ಲಕ್ಷಾಂತರ ಅಭಿಮಾನಿಗಳು ಕೂಡ ಕಣ್ಣೀರಿಟ್ಟಿದ್ದಾರೆ. ಕೋವಿಡ್ ನಿಯಮಗಳ ಪ್ರಕಾರ ಮುಂಬೈನ ಒಶಿವರ ಚಿತಾಗಾರದಲ್ಲಿ ನಟನ ಅಂತ್ಯಕ್ರಿಯೆ ನೆರವೇರಿದೆ.

ಹೃದಯಾಘಾತ(Heart attack)ದಿಂದ ಸಣ್ಣವಯಸ್ಸಿನಲ್ಲಿಯೇ ಸಿದ್ಧಾರ್ಥ್ ಸಾವನ್ನಪ್ಪಿದ್ದು ಅನೇಕರಿಗೆ ಆಘಾತವಾಗಿದೆ. ನಟನಿಗೆ ಗುರುವಾರ(ಸೆ.2) ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಮುಂಬೈನ ಕೂಪರ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಾಗಲೇ ನಟನ ಪ್ರಾಣಪಕ್ಷಿ ಹಾರಿಹೊಗಿತ್ತು. ‘ಬಾಲಿಕಾ ವಧು’ ಧಾರವಾಹಿ ಮೂಲಕ ಮೋಡಿಮಾಡಿದ್ದ ನಟನ ನಿಧನಕ್ಕೆ ಬಾಲಿವುಡ್(Bollywood) ಅನೇಕ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಅಂತಿಮ ವಿದಾಯ ಹೇಳಿದ್ದರು. ಕುಟುಂಬದವರು ಅಂತಿಮ ಕಾರ್ಯಗಳನ್ನು ನೆರವೇರಿಸುವ ಮೂಲಕ ನಟನ ಅಂತ್ಯಕ್ರಿಯೆ ನಡೆಯಿತು.

ಇದನ್ನೂ ಓದಿ: Viral Video : ಹೀಗೂ ಇದಾವ ಡೆನಿಮ್ ಜಾಕೆಟ್ : ಇದು ಬಾಲಿವುಡ್ ನಟಿ ಉರ್ಫಿ ಜಾವೇದ್ ಫ್ಯಾಷನ್ 

ಆರೋಗ್ಯದ ದೃಷ್ಟಿಯಿಂದ ಫಿಟ್ ಆಗಿದ್ದ ಸಿದ್ಧಾರ್ಥ್ ಶುಕ್ಲಾ(Sidharth Shukla )ಗೆ ಇಷ್ಟು ಸಣ್ಣ ವಯಸ್ಸಿನಲ್ಲಿ ಹೃದಯಾಘಾತವಾಗಲು ಕಾರಣವೇನು ಎಂಬುದು ಇದೀಗ ಯಕ್ಷ ಪ್ರಶ್ನೆಯಾಗಿದೆ. ಸೆಪ್ಟೆಂಬರ್ 1ರ ಬುಧವಾರ ರಾತ್ರಿ 8 ಗಂಟೆಗೆ ಸಿದ್ಧಾರ್ಥ್ ಮೀಟಿಂಗ್ ವೊಂದರಲ್ಲಿ ಭಾಗವಹಿಸಿ ಮರಳಿದ್ದರು. ರಾತ್ರಿ 10ರ ಸುಮಾರಿಗೆ ತಮ್ಮ ಕಟ್ಟಡದ ಆವರಣದಲ್ಲಿ ಜಾಗಿಂಗ್‌ಗೆ ಹೋಗಿದ್ದರಂತೆ. ಮನೆಗೆ ಮರಳಿದ ಬಳಿಕ ಅವರು ಸ್ವಲ್ಪ ಆಹಾರವನ್ನು ಸೇವಿಸಿದ್ದರು. ನಂತರ  ಮಲಗಲು ಅವರ ಕೋಣೆಗೆ ಹೋಗಿದ್ದರಂತೆ. ಸದಾ ಫಿಟ್ ಆಗಿರಲು ಬಯಸುತ್ತಿದ್ದ ಸಿದ್ದಾರ್ಥ್ ಪ್ರತಿದಿನ ವರ್ಕೌಟ್ ಮಾಡುವುದನ್ನು ರೂಢಿಸಿಕೊಂಡಿದ್ದರು. ಹೀಗಾಗಿ ಅವರು ವರ್ಕೌಟ್ ತಪ್ಪಿಸಿಕೊಂಡಿದ್ದು ಅಪರೂಪವಾಗಿತ್ತು.  

ಬೆಳಗಿನ ಜಾವ 3 ಗಂಟೆ ಸುಮಾರಿಗೆ ಎಚ್ಚರಗೊಂಡ ಸಿದ್ಧಾರ್ಥ್ ಅವರು ಅಸ್ವಸ್ಥಗೊಂಡಿದ್ದರಂತೆ. ತಮ್ಮ ತಾಯಿ ರೀಟಾ ಶುಕ್ಲಾರನ್ನು ಕರೆದು ಎದೆ ನೋವು ಬರುತ್ತಿದೆ ಎಂದು ಹೇಳಿದ್ದರಂತೆ. ಕೂಡಲೇ ಆತನಿಗೆ ತಾಯಿ ಕುಡಿಯಲು ನೀರು ಕೊಟ್ಟಿದ್ದರಂತೆ. ನೀರು ಕುಡಿದ ನಂತರ ಮಲಗಿದ ನಟ ಮತ್ತೆ ಮೇಲಕ್ಕೆ ಏಳಲಿಲ್ಲವಂತೆ. ಸಿದ್ಧಾರ್ಥ್ ವ್ಯಾಯಾಮ ಮತ್ತು ಧ್ಯಾನದ ಬಗ್ಗೆ ವಿಶೇಷ ಗಮನಹರಿಸುತ್ತಿದ್ದರಂತೆ. ಅವರು ಪ್ರತಿದಿನ 3 ಗಂಟೆಗಳ ಕಾಲ ವರ್ಕೌಟ್ ಮಾಡುತ್ತಿದ್ದರು. ನಿಧಾನವಾಗಿ ವರ್ಕೌಟ್(Workout) ಮಾಡುವಂತೆ ವೈದ್ಯರು ಅವರಿಗೆ ಸೂಚಿಸಿದ್ದರು ಎಂದು ಮೂಲಗಳು ತಿಳಿಸಿವೆ. ಪ್ರತಿನಿತ್ಯ ತಪ್ಪದಂತೆ ವ್ಯಾಯಾಮ ಮಾಡುತ್ತಿದ್ ಸಿದ್ಧಾರ್ಥ್ ಗೆ ಹೆಚ್ಚುಹೊತ್ತು ವರ್ಕೌಟ್ ಮಾಡದಂತೆ ಸಲಹೆ ನೀಡಲಾಗಿತ್ತು ಎಂಬುದು ತಿಳಿದುಬಂದಿದೆ. ಆದರೆ ಬಾಲಿವುಡ್ ಲೋಕದಲ್ಲಿ ಮಿಂಚಬೇಕಾಗಿದ್ದ ಸಿದ್ಧಾರ್ಥ್ ಬಹುಬೇಗನೆ ಬಾರದ ಲೋಕಕ್ಕೆ ತೆರಳಿದ್ದಾರೆ. ಶುಕ್ಲಾ ಅವರ ತಾಯಿ ಮತ್ತು ಇಬ್ಬರು ಹಿರಿಯ ಸಹೋದರಿಯರನ್ನು ಅಗಲಿದ್ದಾರೆ.

ಇದನ್ನೂ ಓದಿ: ಹೃದಯಾಘಾತಕ್ಕೆ ಒಳಗಾಗಿದ್ದ ಸೈರಾ ಬಾನು ಆರೋಗ್ಯದಲ್ಲಿ ಚೇತರಿಕೆ

ಶುಕ್ಲಾ ನಿಧನದಿಂದ ಕಂಗೆಟ್ಟ ಪ್ರೇಯಸಿ ಶೆಹನಾಜ್ ಗಿಲ್  

ನಟ ಸಿದ್ಧಾರ್ಥ್ ಶುಕ್ಲಾ ಹಠಾತ್ ನಿಧನದಿಂದ ಅವರ ಪ್ರೇಯಸಿ ಶೆಹನಾಜ್ ಗಿಲ್(Shehnaaz Kaur Gill) ಕಂಗೆಟ್ಟು ಹೋಗಿದ್ದಾರೆ. ಸಿದ್ಧಾರ್ಥ್ ಸಾವಿನ ಸುದ್ದಿ ನಟಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗೆಳೆಯನನ್ನು ಕಳೆದುಕೊಂಡು ಶೆಹನಾಜ್ ಕುಸಿದು ಹೋಗಿದ್ದಾರೆ. ಸಿದ್ಧಾರ್ಥ್ ಅಂತಿಮ ವಿಧಿವಿಧಾನದ ವೇಳೆ ಶೆಹನಾಜ್ ಬಿಕ್ಕಿಬಿಕ್ಕಿ ಅಳುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ನಟಿಯ ಪರಿಸ್ಥಿತಿ ನೋಡಿ ನೆಟಿಜನ್ ಗಳು ಮರುಕಪಟ್ಟಿದ್ದಾರೆ. ಸಿದ್ಧಾರ್ಥ್ ನಿವಾಸದಿಂದ ಪಾರ್ಥಿವ ಶರೀರ ಹೊರಡುವಾಗ ಮನೆಯಿಂದ ಹೊರ ಬಂದ ಶೆಹನಾಜ್ ಜೋರಾಗಿ ಅತ್ತಿದ್ದಾರೆ. ಜೊತೆಯಲ್ಲಿಯೇ ಇದ್ದ ಸಹೋದರ ಆಕೆಗೆ ಸಮಾಧಾನ ಹೇಳಿದ್ದಾರೆ. ಅಂತ್ಯಕ್ರಿಯೆ ಮುಗಿಯುವವರೆಗೂ ನಟಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News