Shivarajkumar : ನಾನು ಹಣ ತೆಗೆದುಕೊಂಡು ಪ್ರಚಾರಕ್ಕೆ ಬಂದಿಲ್ಲ, ಮನುಷ್ಯನಿಗಾಗಿ ಬಂದಿದ್ದೇನೆ..!

ಕನ್ನಡಪರ ಹೋರಾಟಗಾರ ಪ್ರಶಾಂತ್‌ ಸಂಬರ್ಗಿ ಹೇಳಿಕೆ ವಿಚಾರವಾಗಿ ನಟ ಡಾ. ಶಿವರಾಜಕುಮಾರ್‌ ಅವರು ಗುಡುಗಿದ್ದಾರೆ. ಪ್ರಶಾಂತ ಸಂಬರಗಿ ಹಾಗೆ ಮಾತಾಡೋದು ಸರಿ ಅಲ್ಲ. ಅದನ್ನು ವಾಪಸ್ ತಗೆದುಕೊಳ್ಳಬೇಕು. ನಮ್ಮ ಹತ್ರ ಹಣನೇ ಇಲ್ವಾ ಎಂದ ಶಿವಣ್ಣ ಪ್ರಶ್ನೆ ಮಾಡಿದ್ದಾರೆ.

Written by - Krishna N K | Last Updated : May 6, 2023, 06:47 PM IST
  • ಶಿವಣ್ಣ ಕುರಿತು ಪ್ರಶಾಂತ್‌ ಸಂಬರ್ಗಿ ಹೇಳಿಕೆ.
  • ಹಾಗೇ ಮಾತಾಡೋದು ಸರಿಯಲ್ಲ ಎಂದ ನಟ.
  • ಪ್ರಶಾಂತ್‌ ತಮ್ಮ ಮಾತನ್ನು ವಾಪಾಸ್‌ ಪಡೆಯಬೇಕು ಎಂದ ಹ್ಯಾಟ್ರಿಕ್‌ ಹೀರೋ.
Shivarajkumar : ನಾನು ಹಣ ತೆಗೆದುಕೊಂಡು ಪ್ರಚಾರಕ್ಕೆ ಬಂದಿಲ್ಲ, ಮನುಷ್ಯನಿಗಾಗಿ ಬಂದಿದ್ದೇನೆ..! title=

ಹುಬ್ಬಳ್ಳಿ : ಶಿವಣ್ಣ ಯಾವತ್ತೂ ಸ್ಕ್ರಿಪ್ಟ್‌ ಕೇಳೋದೇ ಇಲ್ಲ. ಆದರೆ, ಪೇಮೆಂಟ್‌ ತುಂಬಾನೇ ಮುಖ್ಯ ಎಂಬ ಪ್ರಶಾಂತ ಸಂಬರ್ಗಿ ಹೇಳಿಕೆಗೆ ನಟ ಡಾ. ಶಿವರಾಜಕುಮಾರ್‌ ಅವರು ಪ್ರತಿಕ್ರಿಯೆ ನೀಡಿದ್ದು, ಹಾಗೇ ಮಾತಾಡೋದು ಸರಿಯಲ್ಲ. ಅವರು ತಮ್ಮ ಮಾತನ್ನು ವಾಪಾಸ್‌ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ್‌ ಶೆಟ್ಟರ್‌ ಅವರ ಪರ ಚುನಾವಣಾ ಪ್ರಚಾರ ಕೈಗೊಂಡ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಶಾಂತ ಸಂಬರಗಿ ಹಾಗೆ ಮಾತಾಡೋದು ಸರಿ ಅಲ್ಲ. ಅದನ್ನು ವಾಪಸ್ ತಗೆದುಕೊಳ್ಳಬೇಕು. ನಮ್ಮ ಹತ್ರ ಹಣನೇ ಇಲ್ವಾ ಎಂದ ಶಿವಣ್ಣ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ನಾನು ಹಣ ಪಡೆದು ಇಲ್ಲಿ ಬಂದಿಲ್ಲ, ವ್ಯಾಪರಕ್ಕೆ ಬಂದವನಲ್ಲ. ಹೃದಯದಿಂದ ನಾನು ಬಂದಿರೋದು, ಮನುಷ್ಯನಿಗಾಗಿ ಬಂದಿದ್ದೇನೆ. ಯಾರನ್ನೂ ಟೀಕೆ ಮಾಡೋಕು ನಾನು ಬಂದಿಲ್ಲ. ನೀವೇ ಆನ್ಸರ್ ಮಾಡಿ ನೋಡೋಣ. ನಾನು ಎಲ್ಲ ಪ್ರಶ್ನೆಗೂ‌ ಉತ್ತರ ಕೊಡಲ್ಲ ಎಂದು ಶಿವರಾಜ್ ಕುಮಾರ್ ಹೇಳಿದರು.

ಇದನ್ನೂ ಓದಿ:  ಸಧೃಡ ಕೂದಲಿಗೆ ಕಾಡಲ್ಲಿರುವ ಸೊಪ್ಪು ಬೇಡ.. ಈ ವ್ಯಾಯಾಮ ಮಾಡಿ ಸಾಕು..!

ಇನ್ನು ಪ್ರಚಾರದ ವಿಚಾರಕ್ಕೆ ಶಿವರಾಜ್ ಕುಮಾರ್ ಟ್ರೋಲ್ ಕುರಿತು ಮಾತನಾಡಿ, ಟ್ರೋಲ್ ಮಾಡೋದು ಸರಿನಾ..? ಯಾತಕ್ಕೆ ಟ್ರೋಲ್..? ನಾನೇನು ಮಾಡಬೇಕು ಇದಕ್ಕೆ.. ? ನೀವೆ ಮನಸ್ಸಿಂದ ನೋಡಿ ಟ್ರೋಲ್ ಮಾಡೋದು ಸರಿನಾ ಅಂತ ಇಲ್ಲಿರೋರ ಎಲ್ಲ ಟ್ರೋಲ್ ಮಾಡೋಕೆ ಬಂದೀದಾರಾ. ಇಲ್ಲಿ ಬಂದಿರೋರು ಎಲ್ಲ ಕಾಂಗ್ರೆಸ್‌ನವರಾ. ಎಲ್ಲ ಪಕ್ಷದವರು ಇರ್ತಾರೆ.. ಟ್ರೋಲ್ ಯಾಕೆ, ಮನುಷ್ಯನನ್ನ ಅರ್ಥ ಮಾಡಕೊಬೇಕು. ಎಷ್ಟು ದಿನ ಟ್ರೋಲ್‌ ಮಾಡ್ತಾರೆ, ಹೃದಯದಿಂದ ಥಿಂಕ್ ಮಾಡಿ ನೋಡಬೇಕಿದೆ ಎಂದು ಶಿವಣ್ಣ ಬೇಸರ ವ್ಯಕ್ತಪಡಿಸಿದರು.

ಅಲ್ಲದೆ, ಮೈಂಡ್ ಇಂದ ಯೋಚನೆ ಮಾಡಬಾರದು, ಹೃದಯದಿಂದ ಮಾಡಬೇಕು. ಸಾವಿರ ಜನ ಹೇಳ್ತಾರೆ ಅಂತಾ ಫಾಲೋ ಮಾಡಬಾರದು ಎಂದರು. ಅಲ್ಲದೆ, ಅಣ್ಣವ್ರ ಯಾವ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ ಅನ್ನೋ ಹೇಳಿಕೆಗೆ ಶಿವಣ್ಣ ಗರಂ ಆದರು. ಪದೇ ಪದೇ ಅದೇ ಪ್ರಶ್ನೆ ಯಾಕೆ ಎಂದು ಮಾಧ್ಯಮದವರ ಮೇಲೆ ಗರಂ ಆದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News