Kantara 1: ರಿಷಬ್‌ ಶೆಟ್ಟಿಯ ಕಾಂತಾರ ಪ್ರೀಕ್ವೆಲ್‌ನಿಂದ ಸಪ್ತಮಿ ಗೌಡ ಔಟ್!

Sapthami Gowda In Kantara 1: ಕಾಂತಾರ ಚಾಪ್ಟರ್‌ 1  ರೇಸ್‌ನಿಂದ ನಟಿ ಸಪ್ತಮಿ ಗೌಡ ಸಿನಿಮಾದಿಂದ ಹೊರ ಬಿದ್ದಿದ್ದಾರೆ ಎಂಬ ಮಾಹಿತಿ ರಿವೀಲ್‌ ಆಗಿದೆ. ಇನ್ನೂ ಈ ರೇಸ್‌ನಲ್ಲಿ ಮೂವರು ನಾಯಕಿಯರು ಇದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 1, 2024, 10:00 PM IST
  • 'ಕಾಂತಾರ' ಚಿತ್ರದ ಜನಪ್ರಿಯತೆಯನ್ನು ಕಂಡು ಪರಭಾಷೆಗಳಿಗೂ ಡಬ್ ಮಾಡಿ ರಿಲೀಸ್‌ ಮಾಡಲಾಗಿತ್ತು.
  • ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್ ನಾಲ್ಕು ಜನ ನಾಯಕಿಯರ ಬಗ್ಗೆ ಆಸಕ್ತಿ ತೋರಿಸಿದೆ ಎಂಬ ಸುದ್ದಿ ಹರಿದಾಡಿತ್ತು.
  • 'ಕಾಂತಾರ' ಚಿತ್ರದಿಂದ ನಟ ರಿಷಬ್ ಶೆಟ್ಟಿಗೆ ಎಷ್ಟೂ ಜನಪ್ರಿಯತೆ ಸಿಕ್ಕಿದೆಯೋ ಅಷ್ಟೇ ಸಪ್ತಮಿ ಗೌಡಗೂ ದೊರಕಿತ್ತು.
Kantara 1: ರಿಷಬ್‌ ಶೆಟ್ಟಿಯ ಕಾಂತಾರ ಪ್ರೀಕ್ವೆಲ್‌ನಿಂದ ಸಪ್ತಮಿ ಗೌಡ ಔಟ್! title=

Sapthami Gowda Out From Kantara 1 Race: ಸ್ಯಾಂಡಲ್‌ವುಡ್‌ನಲ್ಲಿ ಕನ್ನಡ ಪ್ರೇಕ್ಷಕರಿಗಂತಲೇ ಮಾಡಿದ 'ಕಾಂತಾರ' ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದ ಮೇಲೆ  ಪ್ಯಾನ್ಸ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಚಿತ್ರದ ಜನಪ್ರಿಯತೆಯನ್ನು ಕಂಡು ಪರಭಾಷೆಗಳಿಗೂ ಡಬ್ ಮಾಡಿ ರಿಲೀಸ್‌ ಮಾಡಲಾಗಿತ್ತು. ಸದ್ಯ ಈಕಥೆಯ ಪ್ರೀಕ್ವೆಲ್‌ ಸೆಟ್ಟಿಗೇರಿದ್ದು ಇನ್ನಷ್ಟು ಕೂತೂಹಲವನ್ನು ಹೆಚ್ಚಿಸಿದೆ.

ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ 'ಕಾಂತಾರ' ಪ್ರೀಕ್ವೆಲ್‌ಗೆ ಕೈ ಹಾಕಿದ್ದು, ಈಗಾಗಲೇ  ಫಸ್ಟ್ ಲುಕ್‌ ಕೂಡ ರಿವೀಲ್‌ ಆಗಿದೆ. ಇದರ ಮಧ್ಯೆ ಚಿತ್ರದ ನಾಯಕಿ ಯಾರಾಗಲಿದ್ದಾರೆ ಅನ್ನೋ ಕುತೂಹಲ ಕೂಡ ಶುರುವಾಗಿದೆ. ಅದೇ ವೇಳೆ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ನಾಯಕಿಯರ ಬಗ್ಗೆ ಕುತೂಹಲ ಹೆಚ್ಚಿದೆ. ಇತ್ತೀಚೆಗಷ್ಟೇ ಹೊಂಬಾಳೆ ಫಿಲ್ಮ್ಸ್  ನಾಲ್ಕು ಜನ ನಾಯಕಿಯರ ಬಗ್ಗೆ ಆಸಕ್ತಿ ತೋರಿಸಿದೆ ಎಂಬ ಸುದ್ದಿ ಹರಿದಾಡಿತ್ತು.

ಇದನ್ನೂ ಓದಿ: TV Actress: 20ರ ಕಿರುವಯಸ್ಸಲ್ಲಿ ಮದುವೆ, ಪತಿಯ ಮೇಲೆ ಕಿರುಕುಳ ಆರೋಪ ಮಾಡಿದ ಈ ಕಿರುತೆರೆ ನಟಿ ಈಗೆಲ್ಲಿದ್ದಾಳೆ?

ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಸಾಯಿ ಪಲ್ಲವಿ, ಆಲಿಯಾ ಭಟ್, ಸಪ್ತಮಿಗೌಡ, ರುಕ್ಮಿಣಿ ವಸಂತ್ ಹೆಸರು ಓಡಾಡಿತ್ತು. ಇವರಲ್ಲಿ ಇದೀಗ ನಟಿ ಸಪ್ತಮಿ ಗೌಡ ಸಿನಿಮಾದಿಂದ ಹೊರ ಬಿದ್ದಿದ್ದಾರೆ ಅನ್ನೋ ಮಾಹಿತಿ ಸಿಕ್ಕಿದೆ. 'ಕಾಂತಾರ ಚಾಪ್ಟರ್ 1'ಗೂ ಸಪ್ತಮಿ ಗೌಡ ಆಯ್ಕೆ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ಸ್ಯಾಂಡಲ್‌ವುಡ್‌ನಲ್ಲಿ ನಾಯಕಿಯರ ರೇಸ್‌ನಲ್ಲಿ ಹೊರಬಿದ್ದಿದ್ದಾರೆ.

'ಕಾಂತಾರ' ಚಿತ್ರದಿಂದ ನಟ ರಿಷಬ್ ಶೆಟ್ಟಿಗೆ ಎಷ್ಟೂ ಜನಪ್ರಿಯತೆ ಸಿಕ್ಕಿದೆಯೋ ಅಷ್ಟೇ ಸಪ್ತಮಿ ಗೌಡಗೂ ದೊರಕಿತ್ತು. ಆದರಿಂದ ಕಾಂತಾರ ಚಾಪ್ಟರ್‌ 1 ನಲ್ಲಿ ನಟಿ ಸಪ್ತಮಿ ಗೌಡ  ಕೂಡ ಬಣ್ಣ ಹಚ್ಚಿದ್ದರೇಬ ಅದು ಸಿನಿಮಾಗೆ ಪ್ಲಾಸ್ ಪಾಯಿಂಟ್ ಆಗುವ ಎಲ್ಲಾ ಸಾಧ್ಯತೆ ಇತ್ತು. ಆದರೆ ಸದ್ಯ ಸಪ್ತಮಿ ಗೌಡನೇ ಕಾಂತಾರ' ಪ್ರೀಕ್ವೆಲ್‌ನಲ್ಲಿ ಅಭಿನಯಿಸುತ್ತಿಲ್ಲ ಎಂದು ಕೆಲವು ಕಡೆ ಹೇಳಿಕೊಂಡಿದ್ದಾರೆಂದು ಚರ್ಚೆಯಾಗುತ್ತಿದೆ. ಆದರರ ಇದಕ್ಕೆ ಕಾರಣವೇನುಮ ಎಂಬುದು ಹೊರ ಬಿದ್ದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡ

Trending News