Shakuntalam OTT Release: ಈ ದಿನದಂದು OTT ನಲ್ಲಿ ಶಾಕುಂತಲಂ ಸ್ಟ್ರೀಮಿಂಗ್‌!

Shakuntalam OTT Release: ಸಮಂತಾ ರುತ್‌ ಪ್ರಭು ನಾಯಕಿಯಾಗಿರುವ ಶಾಕುಂತಲಂ ಸಿನಿಮಾ ಒಟಿಟಿನಲ್ಲಿ ಬಿಡುಗಡೆಗೆ ರೆಡಿಯಾಗಿದ್ದು, ಶಕುಂತಲಾ ಮತ್ತು ದುಶ್ಯಂತನ ಪ್ರೇಮಕಥೆಯನ್ನು ಹೊಂದಿದೆ. ಶಕುಂತಲಾ ಪಾತ್ರದಲ್ಲಿ ಸಮಂತಾ ನಟಿಸಿದ್ದು, ದುಷ್ಯಂತನಾಗಿ ಮಲಯಾಳಂ ಹೀರೋ ದೇವ್ ಮೋಹನ್ ನಟಿಸಿದ್ದಾರೆ.  

Written by - Chetana Devarmani | Last Updated : May 5, 2023, 07:25 PM IST
  • ಸಮಂತಾ ರುತ್‌ ಪ್ರಭು ನಾಯಕಿಯಾಗಿರುವ ಸಿನಿಮಾ
  • ಗುಣಶೇಖರ್ ನಿರ್ದೇಶನದ ಶಾಕುಂತಲಂ ಚಿತ್ರ
  • OTT ನಲ್ಲಿ ಶಾಕುಂತಲಂ ರಿಲೀಸ್‌ಗೆ ರೆಡಿ
Shakuntalam OTT Release: ಈ ದಿನದಂದು OTT ನಲ್ಲಿ ಶಾಕುಂತಲಂ ಸ್ಟ್ರೀಮಿಂಗ್‌! title=

Shakuntalam OTT Release: ಸಮಂತಾ ರುತ್‌ ಪ್ರಭು ನಾಯಕಿಯಾಗಿರುವ ಇತ್ತೀಚಿನ ಚಿತ್ರ ಶಾಕುಂತಲಂ. ತೆಲುಗಿನಲ್ಲಿ ದೊಡ್ಡ ನಿರ್ಮಾಪಕರಾಗಿರುವ ದಿಲ್ ರಾಜು ಈ ಚಿತ್ರವನ್ನು ಎರಡು ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡಿದರು. ಗುಣಶೇಖರ್ ನಿರ್ದೇಶನದ ಈ ಚಿತ್ರವು ಪ್ಯಾನ್-ಇಂಡಿಯನ್ ಮಟ್ಟದಲ್ಲಿ ಏಪ್ರಿಲ್ 14 ರಂದು ಬಿಡುಗಡೆಯಾಯಿತು. ಶಕುಂತಲಾ ಮತ್ತು ದುಶ್ಯಂತನ ಪ್ರೇಮಕಥೆಯನ್ನು ಹೊಂದಿರುವ ಈ ಅಭಿನವ ಪ್ರೇಮ ಕಾವ್ಯವನ್ನು ಗುಣಶೇಖರ್ ಅವರು ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸಿದ್ದಾರೆ.

ಆದರೆ, ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿರದಿರುವುದು ಹಾಗೂ ದೃಶ್ಯಗಳು ಕಡಿಮೆ ಇದ್ದ ಕಾರಣ ಪ್ರೇಕ್ಷಕರನ್ನು ಸೆಳೆಯುವಲ್ಲಿ ಈ ಸಿನಿಮಾ ವಿಫಲವಾಯಿತು. ಇದೇ ಕಾರಣಕ್ಕೆ ಗಲ್ಲಾಪೆಟ್ಟಿಗೆಯಲ್ಲಿಯೂ ಸಿನಿಮಾ ಮುಗ್ಗರಿಸಿತು. ಈ ಸಿನಿಮಾದಲ್ಲಿ ಶಕುಂತಲಾ ಪಾತ್ರದಲ್ಲಿ ಸಮಂತಾ ನಟಿಸಿದ್ದು, ದುಷ್ಯಂತನಾಗಿ ಮಲಯಾಳಂ ಹೀರೋ ದೇವ್ ಮೋಹನ್ ನಟಿಸಿದ್ದಾರೆ.

ಇದನ್ನೂ ಓದಿ: ಮಾಯಾಮೃಗ ಧಾರವಾಹಿ ನೆನಪಿದಿಯೇ...ಸಚ್ಚಿ ಪಾತ್ರಧಾರಿ ಕಾರ್ತಿಕ್‌ ವೈಭವ್‌ ಯಾರು ಗೊತ್ತಾ?

ದೂರ್ವಾಸನಾಗಿ ಮೋಹನ್ ಬಾಬು, ಸಾರಂಗಿಯಾಗಿ ಪ್ರಕಾಶ್ ರಾಜ್ ಮತ್ತು ಇಂದ್ರನಾಗಿ ಜಿಶು ಸೇನ್ ಗುಪ್ತಾ ನಟಿಸಿದ್ದಾರೆ. ಆದರೂ ಈ ಚಿತ್ರವು ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾಗಿದೆ. ತೆಲುಗು ಭಾಷೆಯಲ್ಲಿ ಮಾತ್ರವಲ್ಲದೆ ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲೂ ಚಿತ್ರವು ಪ್ರೇಕ್ಷಕರನ್ನು ಥಿಯೇಟರ್‌ಗೆ ಸೆಳೆಯುವಲ್ಲಿ ವಿಫಲವಾಗಿದೆ. ಈ ಚಿತ್ರಕ್ಕೆ ಸುಮಾರು 40 ರಿಂದ 60 ಕೋಟಿ ರೂ. ವೆಚ್ಚವಾಗಿದೆ.  

ಇದೀಗ ಶಾಕುಂತಲಂ ಚಿತ್ರ ಒಟಿಟಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಸಿನಿಮಾದ OTT ರಿಲೀಸ್ ಅಪ್‌ಡೇಟ್ ಕೂಡ  ಹೊರಬಿದ್ದಿದೆ. ಈ ಚಿತ್ರದ ಎಲ್ಲಾ ಭಾಷೆಗಳ OTT ಬಿಡುಗಡೆ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ. 

ಇದನ್ನೂ ಓದಿ: ಅತಿ ಹೆಚ್ಚು ವಯಸ್ಸಿನ ಅಂತರವಿರುವ ಬಾಲಿವುಡ್‌ ಜೋಡಿಗಳಿವು

ಬಹುತೇಕ ಎಲ್ಲಾ ಪ್ರದೇಶಗಳ ಚಿತ್ರಮಂದಿರಗಳಿಂದ ಚಿತ್ರವನ್ನು ಹಿಂದೆಗೆದುಕೊಂಡಿದ್ದರಿಂದ ಚಿತ್ರವನ್ನು ಮೇ 12 ರಿಂದ OTT ನಲ್ಲಿ ಸ್ಟ್ರೀಮ್ ಮಾಡಲು ಯೋಜಿಸಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಬಂದಿಲ್ಲ. ಆದರೆ ಇನ್ನೆರಡು ದಿನದಲ್ಲಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಅಭಿಜ್ಞಾನ ಶಾಕುಂತಲಂ ನಾಟಕದಿಂದ ಈ ಚಿತ್ರವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗುತ್ತದೆ. ದಿಲ್ ರಾಜು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿ ಪ್ರಸ್ತುತಪಡಿಸಿದ ಈ ಚಿತ್ರವನ್ನು ಗುಣಶೇಖರ್ ಅವರೇ ತಮ್ಮ ಗುಣ ಟೀಮ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ತಮ್ಮ ಮಗಳು ನೀಲಿಮಾ ಅವರೊಂದಿಗೆ ನಿರ್ಮಿಸಿದ್ದಾರೆ. ಈ ಚಿತ್ರವನ್ನು ಸ್ವತಃ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಇಸ್ಲಾಂ ಧರ್ಮದ ವಿರುದ್ಧ 'ದಿ ಕೇರಳ ಸ್ಟೋರಿ'ಯಲ್ಲಿ ಅಂಥದ್ದೇನಿದೆ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News