Samantha Ruth Prabhu ಜೊತೆಗಿನ ಸಂಬಂಧದ ಕುರಿತು ಮೌನ ಮುರಿದ ನಾಗ ಚೈತನ್ಯ, 'ಭೇಟಿಯಾದರೆ ಈ ಕೆಲಸ ಮಾಡುವೆ'

Naga Chaitanya On Samantha Ruth Prabhu: ಕಾಫಿ ವಿಥ್ ಕರಣ್ ಯಾವಾಗಲು ಹೆಡ್ಲೈನ್ ಸೃಷ್ಟಿಸುತ್ತಲೇ ಇರುತ್ತದೆ. ಪ್ರಸ್ತುತ ಈ ಕಾರ್ಯಕ್ರಮದ 7ನೇ ಸೀಸನ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಹವಾ ಸೃಷ್ಟಿಸುತ್ತಿದೆ.  

Written by - Nitin Tabib | Last Updated : Aug 13, 2022, 04:40 PM IST
  • ಕಾಫಿ ವಿಥ್ ಕರಣ್ ಯಾವಾಗಲು ಹೆಡ್ಲೈನ್ ಸೃಷ್ಟಿಸುತ್ತಲೇ ಇರುತ್ತದೆ.
  • ಪ್ರಸ್ತುತ ಈ ಕಾರ್ಯಕ್ರಮದ 7ನೇ ಸೀಸನ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಹವಾ ಸೃಷ್ಟಿಸುತ್ತಿದೆ.
  • ಇಂಟರ್ನೆಟ್ ನಲ್ಲಿ ಈ ಷೋ ಕುರಿತು ಭಾರಿ ಚರ್ಚೆ ನಡೆಯುತ್ತಿದೆ.
Samantha Ruth Prabhu ಜೊತೆಗಿನ ಸಂಬಂಧದ ಕುರಿತು ಮೌನ ಮುರಿದ ನಾಗ ಚೈತನ್ಯ, 'ಭೇಟಿಯಾದರೆ ಈ ಕೆಲಸ ಮಾಡುವೆ' title=
Naga Chaitanya On Samantha Ruth Prabhu Relation

Koffee With Karan 7: ಕಾಫಿ ವಿಥ್ ಕರಣ್ ಯಾವಾಗಲು ಹೆಡ್ಲೈನ್ ಸೃಷ್ಟಿಸುತ್ತಲೇ ಇರುತ್ತದೆ. ಪ್ರಸ್ತುತ ಈ ಕಾರ್ಯಕ್ರಮದ 7ನೇ ಸೀಸನ್ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಹವಾ ಸೃಷ್ಟಿಸುತ್ತಿದೆ. ಇಂಟರ್ನೆಟ್ ನಲ್ಲಿ ಈ ಷೋ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಈ ಷೋನ ಹೊಸ ಎಪಿಸೋಡ್ ಬಿಡುಗಡೆಯಾಗಿದೆ. ಈ ಎಪಿಸೋಡ್ ನಲ್ಲಿ ನಾಗಚೈತನ್ಯ ಜೀವನದ ಒಂದು ರಹಸ್ಯ ಬಹಿರಂಗಗೊಂಡಿದೆ. 

ಕಾಫಿ ವಿಥ್ ಕರಣ್
ಕಾಫಿ ವಿತ್ ಕರಣ್‌ನ ಇತ್ತೀಚಿನ ಸೀಸನ್‌ನಲ್ಲಿ ತನ್ನ ಪ್ರಬಲ ಅಸ್ತಿತ್ವವನ್ನು ಮಂಡಿಸಿದ್ದ ಸಮಂತಾ ರುತ್ ಪ್ರಭು, ತಮ್ಮ ಮತ್ತು ತಮ್ಮ ಮಾಜಿ ಪತಿ ನಾಗ ಚೈತನ್ಯ ನಡುವೆ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ ಎಂಬ ಆಘಾತಕಾರಿ ಅಂಶ ಬಹಿರಂಗಪಡಿಸಿದ್ದರು. ‘ನಮ್ಮನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ನಮ್ಮ ಮೇಲೆ ಕಣ್ಣಿಟ್ಟರೆ ಖಂಡಿತಾ ನಾವೂ ಕೆಲವು ಸಂಗತಿಗಳನ್ನು ಪ್ರಪಂಚದಿಂದ ಸ್ವಲ್ಪ ಕಾಲ ಮುಚ್ಚಿಡಬೇಕಾಗುತ್ತದೆ’ ಎಂದು ಹೇಳಿದ್ದಳು.

ಇದನ್ನೂ ಓದಿ-BiggBoss OTT: ಸಾನಿಯಾ ಬೆನ್ನುಬಿಡುತ್ತಿಲ್ಲ ರೂಪೇಶ್! ಬಿಗ್ ಮನೆಯಲ್ಲಿ ಮತ್ತೊಂದು ಪ್ರೇಮಪುರಾಣ?

ಸಮಂತಾ ಭೇಟಿಯಾದರೆ ಏನು ಮಾಡಲಿದ್ದಾರೆ ನಾಗ ಚೈತನ್ಯ?
ತನ್ನ ಹಾಗೂ ಸಮಂತಾ ನಡುವಿನ ಸಂಬಂಧದ ಬಗ್ಗೆ ಸಂದರ್ಶನವೊಂದರಲ್ಲಿ ಮೌನ ಮುರಿದಿರುವ ನಾಗ ಚೈತನ್ಯ, ಸಮಂತಾ ಒಂದು ವೇಳೆ ಅವರಿಗೆ ಭೇಟಿಯಾದರೆ ಅವರು ಏನು ಮಾಡಲಿದ್ದಾರೆ ಎಂಬುದನ್ನು ಹೇಳಿಕೊಂಡಿದ್ದಾಳೆ. ಈ ಕುರಿತು ಹೇಳಿಕೆ ನೀಡಿರುವ ಚೈತನ್ಯ, 'ನಾನು ಅವಳಿಗೆ ನಮಸ್ತೆ ಹೇಳುವೆ ಹಾಗೂ ತಬ್ಬಿಕೊಳ್ಳುವೆ' ಎಂದಿದ್ದಾರೆ. ಅಕ್ಟೋಬರ್ 2021 ರಲ್ಲಿ ನಾಗಚೈತನ್ಯ ಹಾಗೂ ಸಮಂತಾ ತಾವಿಬ್ಬರು ಬೇರ್ಪಡುತ್ತಿರುವ ಸಂಗತಿಯನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡು ಶಾಕ್ ನೀಡಿದ್ದರು. 

ಇದನ್ನೂ ಓದಿ-Sandalwood: ಉದ್ಯಮಿಗೆ ಹನಿಟ್ರಾಪ್ ಮಾಡಿದ್ದ ಉದಯೋನ್ಮುಖ ನಟ ಅರೆಸ್ಟ್..!

ನಟ ನೀಡಿರುವ ಪ್ರತಿಕ್ರಿಯೆ ಇಲ್ಲಿದೆ
ಇ-ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ 'ಲಾಲ್ ಸಿಂಗ್ ಚಡ್ಡಾ' ನಟ, 'ನಾವಿಬ್ಬರೂ ನಾವು ಏನನ್ನು ಹೇಳಲು ಬಯಸಿದ್ದೇವೆಯೋ ಅದರ ಬಗ್ಗೆ ಹೇಳಿಕೆ ನೀಡಿದ್ದೇವೆ. ನನ್ನ ಜೀವನದ ಪ್ರತಿಯೊಂದು ನಿರ್ಧಾರ ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ ನಾನು ಅದನ್ನು ಮಾಧ್ಯಮಗಳಿಗೆ ಖಂಡಿತ ಹೇಳುತ್ತೇನೆ. ಇನ್ನು ನಮ್ಮ ಸಂಬಂಧದ ವಿಚಾರದಲ್ಲಿ ಸಮಂತಾ ಮುಂದಕ್ಕೆ ಸಾಗಿದ್ದಾಳೆ, ನಾನೂ ಕೂಡ ಮುಂದಕ್ಕೆ ಸಾಗಿದ್ದೇನೆ ಎಂಬುದು ಜಗತ್ತಿಗೆ ಹೆಚ್ಚು ಹೇಳುವ ಅಗತ್ಯವಿಲ್ಲ. ನಮ್ಮ ಸಂಬಂಧದ ಬಗ್ಗೆ ಎಲ್ಲಾ ರೀತಿಯ ವರದಿಗಳು ಅಥವಾ ಊಹಾಪೋಹಗಳು ತಾತ್ಕಾಲಿಕವಾಗಿವೆ. ನಾನು ಹೆಚ್ಚು ಪ್ರತಿಕ್ರಿಯೆ ನೀಡಿದಷ್ಟು ಹೆಚ್ಚು ಸುದ್ದಿ ಮಾಡಲಾಗುವುದು. ಹೀಗಾಗಿ ನಾನು ಅದರ ಬಗ್ಗೆ ಶಾಂತವಾಗಿರುತ್ತೇನೆ' ಎಂದು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News